ವರ್ತೂರು ಸಂತೋಷ್ ಬಳಿಕ ದರ್ಶನ್, ವಿನಯ್ ಗುರೂಜಿ‌ ಮೇಲೂ ಆರೋಪ : ಹುಲಿ ಉಗರನ್ನೇ ಬಳಕೆ ಮಾಡ್ತಿದ್ದಾರಾ ಇಬ್ಬರು..?

1 Min Read

ಬೆಂಗಳೂರು: ಬಿಗ್ ಬಾಸ್ ನಲ್ಲಿದ್ದ ವರ್ತೂರು ಸಂತೋಷ್ ನನ್ನು ಹುಲಿ ಉಗುರು ಧರಿಸಿದ್ದರು ಎಂಬ ಆರೋಪದ ಮೇಲೆ ಬಂಧಿಸಲಾಗಿದೆ. ಹದಿನಾಲ್ಕು ದಿನ ನ್ಯಾಯಾಂಗ ಬಂಧನಕ್ಕೂ ನೀಡಲಾಗಿದೆ. ಪೆಂಡೆಂಟ್ ಅನ್ನು ಎಫ್ಎಸ್ಎಲ್ ವರದಿಗೆ ಕಳುಹಿಸಲಾಗಿದೆ. ಇದರ ಬೆನ್ನಲ್ಲೇ ಹುಲಿ ಉಗುರಿನಲ್ಲಿ ಯಾರೆಲ್ಲಾ ಒಡವೆ ಧರಿಸಿದ್ದಾರೆ ಎಂಬುದರ ಚರ್ಚೆಯಾಗುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿನಯ್ ಗುರೂಜಿ ಮೇಲೂ ಆರೋಪ ಎದುರಾಗಿದೆ. ದರ್ಶನ್ ಅವರು ಹುಲಿ ಉಗುರನ್ನು ಧರಿಸಿದ್ದಾರೆ. ವಿನಯ್ ಗುರೂಜಿ ಹುಲಿ ಚರ್ಮದ‌ ಮೇಲೆ ಕುಳಿತಿದ್ದಾರೆ ಎಂದು ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಆರೋಪಿಸಿ, ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಹುಲಿಯ ಉಗುರು ಇದ್ದ ಕಾರಣಕ್ಕಾಗಿ ಸಂತೋಷ್ ಅವರನ್ನು ಬಂಧಿಸಿದ್ದೀರಿ. ಅದೇ ರೀತಿ ನಟ ದರ್ಶನ್ ಹಾಗೂ ವಿನಯ್ ಗುರೂಜಿಯನ್ನು ಕರೆಸಿ ವಿಚಾರಣೆ ನಡೆಸಬೇಕು. ದರ್ಶನ್ ಬಂಗಾರದ ಚೈನ್ ಹಾಕಿದ್ದಾರೆ. ಅದರಲ್ಲಿ ಹುಲಿ ಉಗುರಿನ ಗುರುತಿನ ಪೆಂಡೆಂಟ್ ಇದೆ. ಹಾಗೇ ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕೂತಿದ್ದಾರೆ. ಅವರಿಬ್ಬರಿಂದಾನೂ ಕಾನೂನು ಉಲ್ಲಂಘನೆಯಾಗಿದೆ.

ಅವರಿಬ್ಬರನ್ನು ಕರೆಸಿ ವಿಚಾರಣೆ ನಡೆಸಬೇಕು. ಅದು ಅಸಲಿಯೋ, ನಕಲಿಯೋ ಎಂಬುದನ್ನು ತಿಳಿಯಬೇಕಿದೆ. ದರ್ಶನ್ ಅವರು ಅರಣ್ಯ ರಾಯಬಾರಿಯಾಗಿದ್ದಾರೆ. ಅವರಿಗೆ ಕನಿಷ್ಠ ಪ್ರಜ್ಞೆ ಬೇಡವೇ..? ಅವರು ಧರಿಸಿರುವ ಹುಲಿ ಉಗುರು ಅಸಲಿಯೋ, ನಕಲಿಯೋ ಎಂಬುದನ್ನು ಪರಿಶೀಲನೆ ಮಾಡಬೇಕಾಗಿರುವುದು ಅರಣ್ಯಾಧಿಕಾರಿಗಳ ಕರ್ತವ್ಯ ಎಂದು ತಿಳಿಸಿದ್ದಾರೆ. ಈ ಮೂಲಕ ದರ್ಶನ್ ಹಾಗೂ ವಿನಯ್ ಗುರೂಜಿ ಅವರಿಗೂ ಸಂಕಷ್ಟ ಎದುರಾಗಿದೆ.

Share This Article
Leave a Comment

Leave a Reply

Your email address will not be published. Required fields are marked *