Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸೋನಾಕ್ಷಿ ಸಿನ್ಹಾ ಮಾಜಿ ಪ್ರೇಯಸಿ ಜೊತೆಗೆ ಸುಶಾಂತ್ ಪ್ರೇಯಸಿ ಡೇಟಿಂಗ್..!

Facebook
Twitter
Telegram
WhatsApp

 

ಸುಶಾಂತ್ ಸಿಂಗ್ ನಿಧನರಾದ ಮೇಲೆ ಅಭಿಮಾನಿಗಳು ಈಗಲು ಅವರ ನೆನಪುಗಳನ್ನು ಜೀವಿಸುತ್ತಾ ಇದ್ದಾರೆ. ಅವರ ಹುಟ್ಟುಹಬ್ಬ ಆಚರಿಸುತ್ತಾ, ಅವರ ಪುಣ್ಯಸ್ಮರಣೆಯನ್ನು ನೆನಪಿಸಿಕೊಳ್ಳುತ್ತಾ, ಇಂಥೊಬ್ಬ ನಟನನ್ನು ನಾವೆಲ್ಲಾ ಕಲೆದುಕೊಂಡು ಬಿಟ್ಟೆವಲ್ಲಾ ಎಂಬ ನೋವಿನಲ್ಲಿಯೇ ಇದ್ದಾರೆ. ಇದೀಗ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಎಲ್ಲವನ್ನು ಮರೆತು ಬೇರೊಬ್ಬರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ರಿಯಾ ಕಾರಣ ಎಂಬ ಆರೋಪವಿದ್ದ ಕಾರಣ ಅವರನ್ನು ಪೊಲೀಸರು ಬಂಧನ ಕೂಡ ಮಾಡಿದ್ದರು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದರು. ಸುಶಾಂತ್ ಇಲ್ಲದ ಜೀವನವನ್ನು ನೆನೆಸಿಕೊಳ್ಳುವುದಕ್ಕೂ ಕಷ್ಟ. ಅವರ ಸಾವಿನ ನಂತರದ ದಿನಗಳು ತುಂಬಾನೇ ಕಷ್ಟವಾಗಿದ್ದವು ಎಂದು ನಟಿ ಟ್ವೀಟ್ ಕೂಡ ಮಾಡಿದ್ದರು. ಇದೀಗ ಸುಶಾಂತ್ ಜಾಗಕ್ಕೆ ಬಂಟಿ ಬಂದಿದ್ದಾರೆ ಎನ್ನಲಾಗುತ್ತಿದೆ.

ಬಂಟಿ ಸಜ್ಹೋದ್ ಅವರೊಂದಿಗೆ ರಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ಜೊತೆಯಲ್ಲಿಯೇ ವಾಸವಾಗಿದ್ದಾರೆ. ಎದನ್ನು ಗುಟ್ಟಾಗಿ ಇಡಲಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಬಂಟಿ ಅವರು ಫೇಮಸ್ ಫ್ಯಾಷನ್ ಡಿಸೈನರ್ ಸೀಮಾ ಸಜ್ಹೇದ್ ಅವರ ಕಿರಿಯ ಸಹೋದರ. ಬಂಟಿ ಅವರು ಸದ್ಯ ಕಾರ್ನರ್ ಸ್ಪೋರ್ಟ್ಸ್ ನ ಎಂಡಿ ಹಾಗೂ ಸಿಇಒ ಆಗಿದ್ದಾರೆ. ರಿಯಾಲಿಟಿ ಸ್ಟಾರ್ ಕೂಡ.

ಆದರೆ ರಿಯಾಗೆ ಬಂಟಿ ಹಲವು ವರ್ಷಗಳಿಂದಾನು ಗೊತ್ತಂತೆ. ರಿಯಾ ಏನೇ ಸಮಸ್ಯೆಯಲ್ಲಿ ಸಿಲುಕಿದಾಗಲೂ ಬಂಟಿ ಅಲ್ಲಿ ಸಹಾಯಕ್ಕೆ ಬಂದು ನಿಲ್ಲುತ್ತಿದ್ದರಂತೆ. ಸುಶಾಂತ್ ವಿಚಾರದಲ್ಲೂ ಬಂಟಿಯನ್ನು ಸಹ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸದ್ಯ ಇಬ್ಬರು ಡೇಟಿಂಗ್ ನಲ್ಲಿದ್ದಾರೆ ಎಂದು ಗುಸಗುಸು ಹರಿದಾಡುತ್ತಿದೆ. ಜೊತೆಗೆ ಈ ಹಿಂದೆ ಬಂಟಿ ಹೆಸರು ಸೋನಾಕ್ಷಿ ಸಿನ್ಹಾ ಜೊತೆಗೂ ತಳುಕು ಹಾಕಿಕೊಂಡಿತ್ತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!