Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸೂರ್ಯಯಾನಕ್ಕೆ ಡೇಟ್ ಫಿಕ್ಸ್ : ಆದಿತ್ಯ ಎಲ್ 1 ಸೂರ್ಯನ ಬಳಿ ಹೋಗಿ ಏನು ಮಾಡಲಿದೆ..?

Facebook
Twitter
Telegram
WhatsApp

 

 

ಇಸ್ರೋ ಸಂಸ್ಥೆ ಚಂದ್ರಯಾನ 3ಯಲ್ಲಿ ಸಕ್ಸಸ್ ಕಂಡಿದೆ. ಇದರ ಬೆನ್ನಲ್ಲೇ ಇದೀಗ ಸೂರ್ಯಾಯಾನ ಮಾಡುವುದಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಸೂರ್ಯಯಾನ ಮಾಡುವುದು ಬಹಳ ಮುಖ್ಯವಾಗಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳುತ್ತಾರೆ. ಸೆಪ್ಟೆಂಬರ್ 2ಕ್ಕೆ ಆದಿತ್ಯ ಎಲ್ 1 ಉಡಾವಣೆಯಾಗಲಿದೆ.

ಈ ಸಂಬಂಧ ಇಸ್ರೋ ಡೆಪ್ಯೂಟಿ ಡೈರೆಕ್ಟರ್ ಎಸ್ ವಿ ಶರ್ಮಾ ಅವರು ಖಾಸಗಿ ವಾಹಿನಿಯೊಂದಕ್ಕೆ ಮಾಹಿತಿ ನೀಡಿದ್ದು, ಭೂಮಿಯಿಂದ ಸೂರ್ಯನೆಡೆಗೆ ಇರುವ ದೂರ ಸುಮಾರು 159 ಮಿಲಿಯನ್ ಕಿಲೋ ಮೀಟರ್. ಅಷ್ಟು ದೂರದಲ್ಲಿದ್ದರು ಸೂರ್ಯನಿಂದ ಭೂಮಿಗೆ ಬೆಳಕು, ಎಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್ ಸಿಗುತ್ತೆ. ಸೋಲಾರ್ ಸಿಸ್ಟಮ್ ಡಿಪೆಂಡ್ ಆಗಿರುವುದೇ ಸೂರ್ಯನ ಬೆಳಕಿನಿಂದ. ಎಲ್ಲಾ ಗ್ರಹಗಳಿಗೂ ಬೆಳಕು ಮತ್ತು ಏನರ್ಜಿ ಸಿಗೋದು ಕೂಡ ಸೂರ್ಯನಿಂದ. ಇವತ್ತಿನ ಟಿವಿ, ಮೊಬೈಲ್, ಎಲೆಕ್ಟ್ರಾನಿಕ್ ಡಿವೈಸ್ ಗಳು ಡಿಪೆಂಡ್ ಆಗಿರೋದು ಸ್ಯಾಟಲೈಟ್ ನಿಂದ.

ಸ್ಯಾಟಲೈಟ್ ನಿಂದಾಗಿ ನಮಗೆ ಬೇಕಾದ ಕಮ್ಯುನಿಕೇಷನ್ ಮಾಡುತ್ತೇವೆ. ಈ ಸ್ಯಾಟಲೈಟ್ ನಮಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡಬೇಕಾದರೆ, ಸೂರ್ಯನಿಂದ ಬರುವಂತಹ ಎಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್​ಗಳು ಸ್ಯಾಟಲೈಟ್ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದೆಲ್ಲವನ್ನು ತಿಳಿದುಕೊಳ್ಳಬೇಕಿದೆ.

ಆದಿತ್ಯ ಎಲ್ 1 ಉಪಗ್ರಹ7 ಪೆಲೋಡ್ ಹೊತ್ತೊಯ್ಯುತ್ತದೆ. ಇದರಲ್ಲಿ VELC, ಅಂದರೆ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್, ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್, ಪ್ಲಾಸ್ಮಾ ವಿಶ್ಲೇಷಕ ಪ್ಯಾಕೇಜ್, ಸೌರ ಶಕ್ತಿಯ ಅಧ್ಯಯನಕ್ಕಾಗಿ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಕೂಡ ಇರಲಿದೆ. ಇವು ಸೂರ್ಯನಿಂದ ಹೊರ ಸೂಸುವ ಶಕ್ತಿಶಾಲಿ ಕಿರಣಗಳ ಅಧ್ಯಯನ ಮಾಡಲಿವೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!