Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿಕ್ಷಣದಿಂದ ಮಾತ್ರ ಸಾಧನೆ ಸಾಧ್ಯ : ಶೇಖರಗೌಡ ಮಾಲಿ ಪಾಟೀಲ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್,ಚಿತ್ರದುರ್ಗ ಮೇ. 29 :  ಶಿಕ್ಷಣದಿಂದ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯವಿದೆ. ಶಿಕ್ಷಣವನ್ನು ಪಡೆದರೆ ಮಾತ್ರ ಜೀವನದಲ್ಲಿ ಮೇಲಕ್ಕೆ ಏರಲು ಸಾಧ್ಯವಿದೆ ಎಂದು ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ರಾಜ್ಯಾಧ್ಯಕ್ಷರಾದ ಶೇಖರಗೌಡ ಮಾಲಿ ಪಾಟೀಲ್ ತಿಳಿಸಿದರು.

ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ನಡೆದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ಸಮಾಜದ ಸಂಘಟನೆಗಾಗಿ ಪ್ರವಾಸವನ್ನು ಮಾಡುವುದರ ಮೂಲಕ ಸಂಘಟಿಸಲಾಗುತ್ತಿದೆ, ಇದಕ್ಕೆ ನಮ್ಮ ಸಮಾಜದ ಭಾಂಧವರು ಸಹಾಯ ಮತ್ತು ಸಹಕಾರವನ್ನು ನೀಡಬೇಕಿದೆ, ಈಗಾಗಲೇ 18 ಜಿಲ್ಲೆಗಳಲ್ಲಿ ನಮ್ಮ ಸಮಾಜದ ಸಂಘಟನೆ ಇದೆ ಅಲ್ಲಿ ನಮ್ಮ ಸಮಾಜ ಬೆಳೆಯುತ್ತಿದೆ.

ಚಿತ್ರದುರ್ಗದಲ್ಲಿಯೂ ಸಹಾ ನಮ್ಮ ಸಮಾಜ ಉತ್ತಮವಾದ ಸಂಘಟನೆಯಾಗುತ್ತಿದೆ, ನಮ್ಮ ಸಮಾಜದೊಂದಿಗೆ ಇತರೆ ಸಮಾಜದವರನ್ನು ಸಹಾ ಜೊತೆಯಲ್ಲಿ ಕರೆದ್ಯೂಯಲಾಗುತ್ತಿದೆ, ನಮ್ಮ ಸಮಾಜದಲ್ಲಿನ ಬಡವರಿಗೆ ಸಹಾಯವನ್ನು ಮಾಡುವ ಮನೋಭಾವವನ್ನು ಬೆಳಸಿಕೊಳ್ಳುವಂತೆ ಕರೆ ನೀಡಿದರು.

ಹೇಮರೆಡ್ಡಿ ಮಲ್ಲಮ್ಮ ಸ್ವಾಧಿಯಾಗಿ ಸಮಾಜವನ್ನು ಮುನ್ನಡೆಸಿದ್ದಾರೆ. ಮಲ್ಲಿಕಾರ್ಜನನಲ್ಲಿ ನಮ್ಮ ಸಮಾಜದ ಪರವಾಗಿ ವರವನ್ನು ಪಡೆಯುವುದರ ಮೂಲಕ ದಾರಿ ದೀಪವಾಗಿದ್ದಾರೆ. ತನಗೆ ಕಿರುಕುಳವನ್ನು ನೀಡಿದವರಿಗೂ ಸಹಾ ಒಳ್ಳೆಯದಾಗಲಿ ಎಂದು ಭಗವಂತನಲ್ಲಿ ಕೇಳಿದ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಎಂದ ಅವರು, ಸಮಾಜದವತಿಯಿಂದ ಈ ರೀತಿಯ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸಮಾಜದ ಸಂಘಟನೆಯನ್ನು ಮಾಡಬೇಕಿದೆ.

ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಲು ಸಾಧ್ಯವಿದೆ, ಈ ಹಿನ್ನಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಿದೆ, ಕಲಿತರೆ ಮಾತ್ರ ನಮ್ಮ ಬದುಕು ಉತ್ತಮವಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಪಾಟೀಲ್ ತಿಳಿಸಿದರು.

ಎಂದು ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಗೌರವಾಧ್ಯಕ್ಷರಾದ ನಾಗೀರೆಡ್ಡಿ ಮಾತನಾಡಿ, ಹಿಂದಿನ ದಿನದಲ್ಲಿ ನಮ್ಮ ಸಮಾಜ ಕಳೆದು ಹೋಗುತ್ತಿತ್ತು ಆದರೆ ಈಗ ಸಮಾಜವನ್ನು ಸಂಘಟಿಸಲಾಗುತ್ತಿದೆ. ನಾವು ಇದುವರೆವಿಗೂ ಬೇರೆಯವರ ಆಶ್ರಯದಲ್ಲಿ ಇದ್ದವೆ ಆದರೆ ಈಗ ನಾವು ಸ್ವತಂತ್ರವಾಗಿ ನಮ್ಮದೇ ಸಮಾಜ ಇದೆ ಎಂದು ತಿಳಿದಿದ್ದು ಅದನ್ನು ಸಂಘಟಿಸಲಾಗುತ್ತಿದೆ ಎಂದ ಅವರು, ಮಲ್ಲಮ್ಮ 600 ವರ್ಷಗಳ ಹಿಂದೆಯೇ ನಮ್ಮ ಸಮಾಜವನ್ನು ಸಂಘಟಿಸುವುದರ ಮೂಲಕ ಒಗ್ಗಟ್ಟನ್ನು ಪ್ರದರ್ಶನ ಮಾಡಿದರು. ಮಲ್ಲಕಾರ್ಜನ ಪರಮ ಭಕ್ತೆಯಾಗಿ ಅತನನ್ನು ಸಾಕ್ಷಾತ್ಕಾರ ಮಾಡಿಸಿಕೊಂಡು ನಮ್ಮ ಸಮಾಜವನ್ನು ಮುನ್ನಡೆಸಿದ್ದಾರೆ. ನಮ್ಮಲ್ಲಿ ಶೈವ ಮತ್ತು ವೈಷ್ಣವ ಪಂಥವನ್ನು ನಾವು ಅನುಸರಿಸುತ್ತೇವೆ, ತಿರುಪತಿ ತಿಮ್ಮಪ್ಪ ನಮ್ಮ ಸಮಾಜದ ಮನದೇವರಾಗಿದ್ದಾರೆ, ಇದ್ದಲ್ಲದೆ ಮಲ್ಲಿಕಾರ್ಜನನ್ನು ಸಹಾ ಆರಾಧನೆ ಮಾಡುತ್ತೇವೆ ನಮ್ಮ ಮಕ್ಕಳಿಗೆ ಸಮಾಜದ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂದು ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಅಧ್ಯಕ್ಷರಾದ ಚಿದಾನಂದಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಶಾಲಾ ತನಿಖಾಧಿಕಾರಿಗಳಾದ ಶಿವಪ್ರಸಾದ್ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರವರ ಬಗ್ಗೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಉತ್ತೀರ್ಣರಾದ ಸಮಾಜದ ಮಕ್ಕಳನ್ನು ಸನ್ಮಾನಿಸಲಾಯಿತು.

ಶ್ರೀಮತಿ ಗೀತಾ, ಜಯಶೀಲ, ರಶ್ಮಿ ಪ್ರಾರ್ಥಿಸಿದರೆ, ಮಲ್ಲಿಕಾರ್ಜನಯ್ಯ ಸ್ವಾಗತಿಸಿದರು, ಶಿವಾನಂದಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ್ ವಂದಿಸಿದರು. ನಾಗರಾಜ್ ಸಂಗಮ್ ಕಾರ್ಯಕ್ರಮ ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಮೂಲದ ಡಾ. ಕವಿತಾ ಬಿ.ಟಿ ಚಾಮರಾಜನಗರ ಜಿಲ್ಲೆಯ ನೂತನ ಎಸ್.ಪಿ. ಆಗಿ ನೇಮಕ

ಸುದ್ದಿಒನ್, ಚಿತ್ರದುರ್ಗ ಜು. 03 : ರಾಜ್ಯ ಸರ್ಕಾರ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇವರಲ್ಲಿ ಚಿತ್ರದುರ್ಗ ತಾಲ್ಲೂಕು ಬೊಮ್ಮೆನಹಳ್ಲಿ ಮೂಲದ  ಡಾ ಕವಿತಾ ಬಿ.ಟಿ. ಅವರನ್ನು ಚಾಮರಾಜನಗರ ಜಿಲ್ಲೆಯ ನೂತನ ಎಸ್.

ಮನೆ ಮನಸ್ಸುಗಳಲ್ಲಿ ವಚನಗಳನ್ನು ಅನುಸಂಧಾನ ಮಾಡಿಕೊಂಡರೆ ಜಗತ್ತನ್ನೇ ಅರಿತಂತೆ : ಡಾ. ಜೆ. ಕರಿಯಪ್ಪ ಮಾಳಿಗೆ

ಸುದ್ದಿಒನ್, ಚಿತ್ರದುರ್ಗ, ಜುಲೈ.03 :  ಭಾರತದ ಮೊದಲ ಮಹಿಳಾ ವಿಮೋಚನಾ ಚಳುವಳಿ ಹಾಗೂ ಗಟ್ಟಿಯಾಗಿ ಮಾತನಾಡುವ ಶಕ್ತಿ ನೀಡಿದ್ದು ವಚನ ಸಾಹಿತ್ಯ. ಮನೆ ಮನಸ್ಸುಗಳಲ್ಲಿ ವಚನಗಳನ್ನು ಅನುಸಂಧಾನ ಮಾಡಿಕೊಂಡರೆ ಜಗತ್ತನ್ನೇ ಅರಿತಂತೆ ಎಂದು ಸರ್ಕಾರಿ

ಗ್ಯಾರಂಟಿ ಯೋಜನೆಗಳನ್ನು ಶೇ.100ರಷ್ಟು ಅನುಷ್ಠಾನ ಮಾಡಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಚಿತ್ರದುರ್ಗ. ಜುಲೈ.03:  ಜಿಲ್ಲೆಯಲ್ಲಿ ದುರಸ್ಥಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂಡಲೆ ಸರಿಪಡಿಸಿ, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ

error: Content is protected !!