ಚಿತ್ರದುರ್ಗ: ಶಿಕ್ಷಕರು ಎಂದರೆ ಭವಿಷ್ಯದ ಗುರುಗಳು. ಅವರಿಂದಾನೇ ಜೀವನ ಸರಿ ದಾರಿಗೆ ಬರುವುದು ಎಂಬ ನಂಬಿಕೆ ಇನ್ನು ಇದೆ. ಶಿಕ್ಷಕರು ಮೋಸ ಮಾಡೋದನ್ನ ಹೇಳಿಕೊಡಲ್ಲ, ಸುಳ್ಳು ಹೇಳುವುದನ್ನ ಕಲಿಸುವುದಿಲ್ಲ ಎಂಬ ನಂಬಿಕೆ. ಆದರೆ ಶಿಕ್ಷಕರೇ ಆ ರೀತಿಯ ತಪ್ಪು ಮಾಡಿದರೆ ಹೇಗೆ. ಇಂಥದ್ದೊಂದು ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. 8 ವರ್ಷದಿಂದ ಪ್ರೀತಿಸಿ, ಯುವತಿಗೆ ಶಿಕ್ಷಕ ಮೋಸ ಮಾಡಲು ಯತ್ನಿಸಿದ್ದ ಘಟನೆ ಭರಮಸಾಗರದಲ್ಲಿ ನಡೆದಿದೆ. ಆದರೆ ಪೊಲೀಸರ ಸಮ್ಮುಖದಲ್ಲಿಯೇ ಆ ಯುವತಿಗೆ ಶಿಕ್ಷಕ ತಾಳಿ ಕಟ್ಟಿದ್ದಾನೆ.
ಚುತ್ರದುರ್ಗದ ಭರಮಸಾಗರ ಪೊಲೀಸರ ಸಮ್ಮುಖದಲ್ಲಿಯೇ ದೇವಸ್ಥಾನವೊಂದರಲ್ಲಿ ವಿವಾಹ ಆಗಿದೆ. ಮೋಸ ಮಾಡಲು ಯತ್ನಿಸಿದ್ದ ಶಿಕ್ಷಕ ಹರೀಶ್ ಪರಶುರಾಂಪುರ ಶಾಲೆಯಲ್ಲಿ ಶಿಕ್ಷಕನಾಗಿ ವೃತ್ತಿ ಮಾಡುತ್ತಿದ್ದರು. ಮೂಲತಃ ತಣಿಗೆಹಳ್ಳಿ ಅವರು. ಈ ಹರೀಶ್ ಗೂ ಹಾಗೂ ಇಸಾಮುದ್ರ ಗೊಲ್ಲರಹಟ್ಟಿಯ ಕಾವ್ಯಾಗೂ ನಿಶ್ಚಿತಾರ್ಥ ಆಗಿತ್ತು. ಕಾವ್ಯಾ ಹಾಗೂ ಹರೀಶ್ ಪರಸ್ಪರ ಸಂಬಂಧಿಕರು ಕೂಡ ಆಗಿದ್ದರು, ಇಬ್ಬರು ಪ್ರೀತಿ ಮಾಡ್ತಾ ಇದ್ದರು. ಆದರೆ ವರದಕ್ಷಿಣೆ ಆಸೆಗೆ ಕಾವ್ಯಾರನ್ನ ಬಿಟ್ಟು, ಬೇರೆ ಯುವತಿ ಜೊತೆಗೆ ಮದುವೆಯಾಗಲು ಪ್ರಯತ್ನಿಸಿದ್ದಾರೆ.
ಈ ವಿಚಾರ ತಿಳಿದ ಕೂಡಲೇ ಕಾವ್ಯಾ ಭರಮಸಾಗರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ನಂತರ ಶಿಕ್ಷಕ ಹರೀಶ್ ನನ್ನು ಪೊಲೀಸ್ ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ್ದಾರೆ. ಠಾಣೆಯಲ್ಲಿಯೇ ಪೊಲೀಸರು ಮದುವೆ ಕೂಡ ಮಾಡಿಸಿದ್ದಾರೆ. ಮನೆಯಲ್ಲಿ ಮದುವೆ ಆಗ್ತೀನಿ ಅಂತ ಹೇಳಿ, ಮೋಸ ಮಾಡಲು ಯತ್ನಿಸಿದ್ದ ಶಿಕ್ಷಕನಿಗೆ ಪ್ರೀತಿಸಿದ ಯುವತಿ ಸರಿಯಾಗಿಯೆ ಬುದ್ಧಿ ಕಲಿಸಿದ್ದಾರೆ.



