ಹಿಂದೂ ನಂಬಿಕೆಯಲ್ಲಿ ತಂದೆಗೆ ದೇವರ ಸಮಾನ ಸ್ಥಾನ ನೀಡಲಾಗಿದೆ. ಜ್ಯೋತಿಷ್ಯದ ಪ್ರಕಾರ ಜಾತಕದಲ್ಲಿ ಸೂರ್ಯನು ತಂದೆಯನ್ನು ಸೂಚಿಸುವ ಗ್ರಹ.ಸೂರ್ಯನು ನಾಯಕತ್ವ ಮತ್ತು ಗೌರವದ ಸಂಕೇತ. ಹಾಗಾಗಿ ತಂದೆ ಜೀವಂತವಾಗಿರುವಾಗ ಮಗ ಈ ಕೆಳಗಿನ ಕೆಲಸಗಳನ್ನು ಮಾಡಬಾರದು ಎಂದು ಹಿಂದೂ ಧರ್ಮಶಾಸ್ತ್ರ ಹೇಳುತ್ತದೆ.
ಮನೆಯ ಪ್ರಮುಖ ಪೂಜೆಯಲ್ಲಿ ತಂದೆಯ ಸ್ಥಾನವನ್ನು ತಾನು ತೆಗೆದುಕೊಳ್ಳುವುದು ತಪ್ಪು. ದೊಡ್ಡ ಹವನ ಅಥವಾ ಕುಟುಂಬ ಪೂಜೆಯಲ್ಲಿ ಮೊದಲ ಸ್ಥಾನ ತಂದೆಗೆ. ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಕುಟುಂಬದ ಹಿರಿಯ ಯಜಮಾನನ ಹೆಸರು ಮೊದಲು.ದಾನ, ಸಮಾಜಸೇವೆ ಅಥವಾ ಕಾರ್ಯಕ್ರಮಗಳಲ್ಲಿ ತಂದೆಯ ಹೆಸರನ್ನು ಮೊದಲು ಉಲ್ಲೇಖಿಸುವುದು ವಿನಯದ ಸಂಕೇತ. ಮದುವೆ ಪತ್ರಿಕೆಯಲ್ಲಿ “ಇಂಥವರ ಪುತ್ರ” ಎಂದು ಬರೆಯುವ ಪದ್ಧತಿ ಇದರಿಂದ ಬಂದಿದೆ.
ಸಾರ್ವಜನಿಕವಾಗಿ ತಂದೆಯನ್ನು ವಿರೋಧಿಸಬಾರದು. ಭಿನ್ನಾಭಿಪ್ರಾಯಗಳು ಸಹಜ. ಆದರೆ ಸಾರ್ವಜನಿಕವಾಗಿ ತಂದೆಯನ್ನು ಅವಮಾನಿಸುವುದು ಕುಟುಂಬದ ಗೌರವನ್ನು ಕಡಿಮೆಮಾಡುತ್ತದೆ.ತಂದೆ ಜೀವಂತವಾಗಿರುವಾಗ ತರ್ಪಣ ಅಥವಾ ಪಿಂಡದಾನ ಸ್ವತಃ ಮಾಡುವುದು ಸರಿಯಲ್ಲ. ಸಂಪ್ರದಾಯದ ಪ್ರಕಾರ ಪಿತೃಕರ್ಮಗಳಲ್ಲಿ ಮೊದಲ ಹಕ್ಕು ತಂದೆಗೆ ಇದೆ. ಕಾರಣವಿಲ್ಲದೆ ಮಗನೇ ಮುಂದಾಗಿ ಮಾಡುವುದು ಸರಿಯಲ್ಲ ಎಂದು ಹಿರಿಯರು ಹೇಳುತ್ತಾರೆ. ತಂದೆ ಜೀವಂತವಾಗಿರುವವರೆಗೆ, ಅವನ ಪೂರ್ವಜರಿಗೆ ಸಂಬಂಧಿಸಿದ ಪ್ರಮುಖ ಆಚರಣೆಗಳನ್ನು ಮಾಡುವ ಹಕ್ಕು ಮಗನಿಗೆ ಇರುವುದಿಲ್ಲ.



