ಸಿಡಿದ ಶಾಸಕರಿಂದ ಆರೋಪಗಳ ಸುರಿಮಳೆ : ಸಿಎಂ ಮುಂದೆ ಹೇಳಿದ್ದೇನು ರಾಜು ಕಾಗೆ, ಬಿಆರ್ ಪಾಟೀಲ್..?

1 Min Read

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನೇರವಾಗಿಯೇ ಆಕ್ರೋಶ ಹೊರ ಹಾಕುತ್ತಿರುವ ಬೆಳವಣಿಗೆ ನಡೆಯುತ್ತಿದೆ. ಶಾಸಕ ರಾಜು ಕಾಗೆ ನಾನು ಈಗಲೇ ರಾಜೀ‌ನಾಮೆ ಕೊಡ್ತೀನಿ ಅಂದ್ರೆ ಬಿಆರ್ ಪಾಟೀಲ್, ವಸತಿ ಇಲಾಖೆಯಲ್ಲಿ ನಾನು ಪತ್ರ ಬರೆದರು ಅದಕ್ಕೆ ಬೆಲೆ ಇಲ್ಲ ಅಂತಿದ್ದಾರೆ. ಈ ಬೆಳವಣಿಗೆಯಿಂದ, ನೇರಾ ನೇರಾ ಆರೋಪದಿಂದ ಸಹಜವಾಗಿಯೇ ಸರ್ಕಾರಕ್ಕೆ ಮುಖಭಂಗವಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಇಬ್ಬರು ಶಾಸಕರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ.

ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಮೀಟಿಂಗ್ ಮಾಡಿದ್ದು, ಆಳಂದ ಶಾಸಕ ಬಿಆರ್ ಪಾಟೀಲ್, ಕಾಗವಾಡ ಶಾಸಕ ರಾಜು ಕಾಗೆ ಅವರ ಜೊತೆಗೆ ಒಂದು ಮೀಟಿಂಗ್ ಮಾಡಿದ್ದಾರೆ. ಈ ವೇಳೆ ಇಬ್ಬರು ಶಾಸಕರು ಸಿಎಂ ಸಿದ್ದರಾಮಯ್ಯ ಬಳಿ ಸಾಲು ಸಾಲು ದೂರುಗಳನ್ನು ನೀಡಿದ್ದಾರೆ. ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ ಅವರು ಇಬ್ಬರು ಶಾಸಕರಿಗೂ ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ. ಸಿಎಂ ಎದುರು ತಮ್ಮ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ತಮ್ಮ ಸಮಸ್ಯೆ ಮುಂದಿಟ್ಟಿದ್ದಾರ.

ಇಬ್ಬರ ಸಮಸ್ಯೆಯನ್ನು ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಇಬ್ಬರಿಗೂ ಭರವಸೆಯನ್ನ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ. ಶಾಸಕರಿಗೆ ಮೊದಲ ಆದ್ಯತೆ ನೀಡುವಂತೆ ಹೇಳುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಬಹಿರಂಗವಾಗಿ ಮಾತನಾಡಬೇಡಿ. ಎಲ್ಕಾ‌ಸರಿ ಹೋಗುತ್ತಿದೆ. ಸರಿ ಮಾಡಿಕೊಂಡು ಹೋಗೋಣಾ. ಏನೇ ಸಮಸ್ಯೆಗಳಿದ್ದರೂ ಮುಂದೆ ಸರಿ ಮಾಡಿಕೊಂಡು ಹೋಗೋಣಾ ಎಂಬ ಆತ್ಮವಿಶ್ವಾಸವನ್ನ ಇಬ್ಬರು ಶಾಸಕರಿಗೆ ತುಂಬಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks