ಈ ರೀತಿಯ ಕೆಲಸಗಳಿಂದಾನೇ ಪಾಕಿಸ್ತಾನ ಆಗಾಗ ಛೀಮಾಎಇ ಹಾಕಿಸಿಕೊಳ್ಳುತ್ತಾ ಇರುತ್ತೆ. ಇದೀಗ ಹಿಂದೂ ದೇವಾಲಯವನ್ನು ಟಾರ್ಗೆಟ್ ಮಾಡಿದೆ. ದಕ್ಷಿಣ್ ಸಿಂಧ್ ಪ್ರಾಂತ್ಯದಲ್ಲಿರುವ ಹಿಂದೂ ದೇಗುಲದ ಮೇಲೆ ರಾಕೆಟ್ ದಾಳಿ ಮಾಡಿ, ಉರುಳಿಸಿದೆ.
ಸಿಂಧ್ ಪ್ರಾಂತದ ಕಶ್ಮೋರ್ ನಲ್ಲಿ ಅಲ್ಪಸಂಖ್ಯಾತರೆಲ್ಲಾ ಸೇರಿಕೊಂಡು ಹಿಂದೂ ದೇಗುಲವನ್ನು ನಿರ್ಮಿಸಿಕೊಂಡಿದ್ದರು. ಬಗ್ರಿ ಎಂಬ ಸಮುದಾಯ ಈ ದೇಗುಲವನ್ನು ನೋಡಿಕೊಳ್ಳುತ್ತಿತ್ತು. ಆದರೆ ರಾಕೇಟ್ ದಾಳಿಯಿಂದ ಇದನ್ನು ಉರುಳಿಸಿದೆ. ಇದು ಎರಡನೇ ದಾಳಿಯಾಗಿದೆ.
ಈ ಸಂಬಂಧ ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 8-9 ಮಂದಿ ಈ ದಾಳಿಯನ್ನು ನಡೆಸಿದ್ದಾರೆ. ರಾಕೆಟ್ ದಾಳಿಗೆ ಡೆಟೊನೆಟ್ ಬಳಸಿರುವ ಬಗ್ಗೆಯೂ ಮಾಹಿತಿ ಲಭಿಸಿದೆ. ಕಳೆದ ಶುಕ್ರವಾರ ಕರಾಚಿಯಲ್ಲಿದ್ದ ಮಾರಿ ಮಾತಾ ದೇಗುಲದ ಮೇಲೂ ದಾಳಿ ಮಾಡಿದ್ದರು. ಬುಲ್ಡೋಜರ್ ಮೂಲಕ ದೇಗುವ ಉರುಳಿಸುವ ಯತ್ನ ನಡೆದಿತ್ತು. ಇದೀಗ ಮತ್ತೊಂದು ಹಿಂದೂ ದೇಗುಲದ ಮೇಲೆಯೇ ಯತ್ನ ನಡೆದಿದೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






