ಸುದ್ದಿಒನ್, ಚಿತ್ರದುರ್ಗ, ನವೆಂಬರ್. 08 : ದಾಸ ಶ್ರೇಷ್ಠ ಕನಕದಾಸರ 538ನೇ ಜಯಂತಿಯನ್ನು ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಸರಳ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಸವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಲ್. ಎನ್. ಅಜಯ್ ಕುಮಾರ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕನಕ ದಾಸರ ಭಕ್ತಿ ಪರವಶತೆ ಸಾಮಾಜಿಕ ಕಳಕಳಿ ಯನ್ನು ಅಧ್ಯಕ್ಷೀಯ ನುಡಿಗಳಲ್ಲಿ ತಿಳಿಸಿದರು.
ಸಂಸ್ಥೆಯ ನಿರ್ದೇಶಕರಾಗಿರುವಂತಹ ನಾಗೇಶ್ ರವರು ಹಾಗೂ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಗೋಪಾಲಕೃಷ್ಣರವರು ಕನಕದಾಸರ ಕೀರ್ತನೆಗಳನ್ನು ಹಾಡಿದರು. ಶ್ರೀಮತಿ ಭಾಗ್ಯ ಕನಕದಾಸರ ಜೀವನ ವೃತ್ತಾಂತವನ್ನು ವಿವರಿಸಿದರು.
ಮುಖ್ಯೋಪಾಧ್ಯಾಯನಿ ಶ್ರೀಮತಿ ರಾಧಾಮಣಿ ರವರೊಂದಿಗೆ ವಿದ್ಯಾಸಂಸ್ಥೆಯ ಸಕಲ ಶಿಕ್ಷಕ ವೃಂದದವರು ದಾಸರ ಕೀರ್ತನೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳು ಎಲ್.ಎನ್. ಅಜಯ್ ಕುಮಾರ್, ನಿರ್ದೇಶಕರಾದ ಎಂ.ಜಿ ನಾಗೇಶ್ ಹಾಗೂ ಮುಖ್ಯೋಪಾಧ್ಯಾಯ ಅಶೋಕ್ ಎಟಿ, ಚನ್ನಬಸಪ್ಪಬಸಪ್ಪ ಹಾಗೂ ಶ್ರೀಮತಿ ರಾಧಾಮಣಿ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದಾ ಜೋಶಿ ಪ್ರಾರ್ಥನೆ ಸಲ್ಲಿಸಿದರು. ಶ್ರೀಮತಿ ಉಷಾ ನಾಗೇಶ್ ಸ್ವಾಗತ ಕೋರಿದರು.ಶ್ರೀಮತಿ ಸೌಮ್ಯ ಎ. ಎಸ್ ವಂದನಾರ್ಪಣೆ ಸಲ್ಲಿಸಿದರು ಹಾಗೂ ಶ್ರೀಮತಿ ದಿವ್ಯ ರವರು ನಿರೂಪಣೆಯನ್ನು ಮಾಡಿದರು.


