ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರಸ್ವಾಮಿಗೆ ವಿಶೇಷ ಅಲಂಕಾರ  

1 Min Read

ಚಿತ್ರದುರ್ಗ : ವೈಕುಂಠ ಏಕಾದಶಿ ಪ್ರಯುಕ್ತ ಇಲ್ಲಿನ ತಿಪ್ಪಜ್ಜಿ ಸರ್ಕಲ್‌ನಲ್ಲಿರುವ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ಬೆಳಿಗ್ಗೆ ಆರು ಗಂಟೆಯಿಂದ ಸ್ವಾಮಿಗೆ ಪ್ರಾಕಾರೋತ್ಸವ, ಉತ್ತರ ಬಾಗಿಲು ಪೂಜೆ, ಅಲಂಕಾರ ಸೇವೆ ವಿಜೃಂಭಣೆಯಿಂದ ನಡೆಯಿತು. ಬಣ್ಣದ ಬಣ್ಣದ ಹೂಗಳಿಂದ ವೈಕುಂಠ ಧ್ವಾರವನ್ನು ಸಿಂಗರಿಸಲಾಗಿತ್ತು. ನೂರಾರು ಭಕ್ತರು ಸಾಲಾಗಿ ವೈಕುಂಠ ದ್ವಾರದ ಮೂಲಕ ಸಾಗಿ ವೆಂಕಟೇಶ್ವರಸ್ವಾಮಿಯ ದರ್ಶನ ಪಡೆದರು.

ಬಗೆ ಬಗೆಯ ಹೂವು ಹಾರ ಹಾಗೂ ಹಸಿರು ಪತ್ರೆಗಳಿಂದ ಸ್ವಾಮಿಯನ್ನು ಕಣ್ಮನಸೆಳೆಯುವಂತೆ ಅಲಂಕರಿಸಲಾಗಿತ್ತು.
ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

ವೆಂಕಟೇಶ್ವರಸ್ವಾಮಿ ದೇವಸ್ಥಾನದ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ಡಿ.ತಿಮ್ಮಣ್ಣ, ಜಂಟಿ ಕಾರ್ಯದರ್ಶಿ ಡಿ.ಎಸ್.ವೆಂಕಟೇಶ್, ಖಜಾಂಚಿ ಆರ್.ಯಾದವಮೂರ್ತಿ ಸೇರಿದಂತೆ ಭಕ್ತ ಮಂಡಳಿಯವರು ವೈಕುಂಠ ಏಕಾದಶಿಯಲ್ಲಿ ಹಾಜರಿದ್ದು, ಸ್ವಾಮಿಯ ಕೃಪೆಗೆ ಪಾತ್ರರಾದರು.

Share This Article
Leave a Comment

Leave a Reply

Your email address will not be published. Required fields are marked *