Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಶಿಸ್ತು ಕ್ರಮ ಯಾಕಿಲ್ಲ..? ಯಾರೆಲ್ಲಾ ಕೇಳಿದ್ರು ಪ್ರಶ್ನೆ..?

---Advertisement---

ಬೆಂಗಳೂರು: ಈ ಮೊದಲು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಸಿಎಂ ಬದಲಾವಣೆಯ ಬಗ್ಗೆ ಮಾತನಾಡಿದ್ದರು. ಆಗ ಡಿಸಿಎಂ ಡಿಕೆ ಶಿವಕುಮಾರ್ ಅವರೇ ನೋಟೀಸ್ ನೀಡಿದ್ದರು. ಈಗ ಯತೀಂದ್ರ ಸಿದ್ದರಾಮಯ್ಯ ಅವರು ಮುಂದಿನ ಸಿಎಂ ಬಗ್ಗೆ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ರೇಸ್ ನಲ್ಲಿದ್ದಾರೆ. ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿರುವಾಗ ಸತೀಶ್ ಜಾರಕಿಹೊಳಿ ಅವರು ಸಿಎಂ ಆಗಲು ಅರ್ಹರಿದ್ದಾರೆ ಎಂಬ ಮಾತು ಚರ್ಚೆಗೆ ಗ್ರಾಸವಾಗಿದ್ದು, ಸುಮ್ಮನೆ ಮಾತನಾಡುವ ನಮಗೆಲ್ಲಾ ನೋಟೀಸ್ ಕೊಡುವುದಕ್ಕೆ ಆಗುತ್ತೆ. ಅವರಿಗ್ಯಾಕೆ ನೋಟೀಸ್ ಕೊಡ್ತಿಲ್ಲ ಎಂಬ ಮಾತನ್ನ ನೋಟೀಸ್ ಪಡೆದವರು ಕೇಳ್ತಿದ್ದಾರೆ.

 

ನಮ್ಮಲ್ಲಿ ಗೊಂದಲ ಮಾಡುವುದಕ್ಕೆ ಹೋಗಬೇಡಿ. ನಮ್ಮ ನಾಯಕರಾದ ಸಿದ್ದರಾಮಯ್ಯ ಸಾಹೇಬ್ರಿದ್ದಾರೆ. ತೀರ್ಮಾನ ತೆಗೆದುಕೊಳ್ತಾರೆ. ನೀವೆಲ್ಲಾ ಮಾತನಾಡುವ ಮಟ್ಟಕ್ಕೆ ಹೋಗಬಾರದು. ನಾನ್ ಮಾಡುದ್ರೆ ಬಲತ್ಕಾರ.. ಬೇರೆಯವ್ರು ಮಾಡುದ್ರೆ ಚಮತ್ಕಾರ ಅಂತ ಹೇಳ್ತಾರೆ. ನಾವೆಲ್ಲಾ ಹೇಳಬಾರದು. ಅವರು ತಿದ್ದುಕೊಳ್ತಾರೆ ಅಂದುಕೊಂಡಿದ್ದೀನಿ. ಇವತ್ತು ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಬಂದಿದ್ದೀನಿ. ಅದನ್ನ ನೋಡೋಣಾ ಎಂದು ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಗಂಗಾ ಬಸವರಾಜ್, ನನಗೆ ನೋಟೀಸ್ ಕೊಟ್ಟಿದ್ದಾರೆ. ನಾನೇನು ಮುಂದಿನ ಮುಖ್ಯಮಂತ್ರಿ ವಿಚಾರ ಮಾತನಾಡಿದ್ದಲ್ಲ ಬರೀ ಮುಖ್ಯಮಂತ್ರಿ ವಿಚಾರ ಮಾತನಾಡಿದ್ದೇ ಅಷ್ಟೆ. ಬಹಳ ಜನಕ್ಕೆ ನೋಟೀಸ್ ಕೊಟ್ಟಿದ್ದಾರೆ. ಇವರಿಗ್ಯಾಕೆ ಕೊಟ್ಟಿಲ್ಲ. ಇದನ್ನ ಹೈಕಮಾಂಡ್ ನೋಡಬೇಕು. ಡಿಸೆಂಬರ್ ನಂತರ ಏನಾಗಬಹುದು ಎಂಬುದನ್ನ ನಾನು ಹೇಳಿ ಆಗಿದೆ. ಎಲ್ಲರೂ ನವೆಂಬರ್ ಕ್ರಾಂತಿ ಅಂತಾರೆ. ಆದರೆ ನಾನು ಡಿಸೆಂಬರ್ ಕ್ರಾಂತಿ ಅಂತ ಹೇಳ್ತೇನೆ. ಅದು ಆಗಿಯೇ ಆಗುತ್ತೆ ನೋಡ್ತಾ ಇರಿ ಎಂದು ಕ್ರಾಂತಿ ಬಾಂಬ್ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...