ಚಿತ್ರದುರ್ಗ ಸೇರಿದಂತೆ ಹಲವೆಡೆ ಅಕ್ಟೋಬರ್ 13ರ ವರೆಗೂ ಮಳೆ..!

1 Min Read

ಬೆಂಗಳೂರು: ಮಳೆರಾಯನ ಆಗಮನ ಮತ್ತೆ ಖುಷಿ ಕೊಟ್ಟಿದೆ. ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಈ ಮೂಲಕ ಬೆಳೆಗೆ ಬೇಕಾದ ಮಳೆ ಬರ್ತಾ ಇದೆ, ಭೂಮಿ ತಂಪಾಗಿದೆ ಎಂಬ ಖುಷಿಯಲ್ಲಿ ರೈತರ ಸಂತಸ ಹೆಚ್ಚಾಗಿದೆ. ಕಳೆದ ಎರಡು ದಿನದಿಂದ ಮಳೆ ಜೋರಾಗಿದೆ. ಮುಂದಿನ ಮೂರು ದಿನಗಳ ಕಾಲ ಜೋರು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ವರದಿ ನೀಡಿದೆ.

ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಮಳೆಯಾಗಿದೆ. ಕಳೆದ ರಾತ್ರಿಯಿಡಿ ಗುಡುಗು ಸಹಿತ ಜೋರು ಮಳೆಯಾಗಿದೆ. ಇದರಿಂದ ಸಾಕಷ್ಟು ಅನಾಹುತಗಳು ಸೃಷ್ಟಿಯಾಗಿವೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಸಣ್ಣಗೆ ಮಳೆ ಬಂದರು ಅದರ ಪರಿಣಾಮ ಹೆಚ್ಚಾಗಿರುತ್ತದೆ. ರಸ್ತೆಗಳಲ್ಲೆಲ್ಲಾ ನೀರು ತುಂಬಿ, ಓಡಾಟ ಕಷ್ಟವಾಗುತ್ತದೆ. ವಾಹನ ಸವಾರರಿಗೆ ಇದು ಸವಾಲಿನ ಕೆಲಸವೆ ಆಗಿರುತ್ತದೆ. ಸದ್ಯ ರಾತ್ರಿ ಇಡೀ ಸುರಿದ ಮಳೆಗೆ ಹಲವೆಡೆ ರಸ್ತೆ ತುಂಬಾ ನೀರು ತುಂಬುತ್ತು, ಮರ ಗಿಡಗಳ ಕೊಂಬೆಗಳು ಬಿದ್ದಿತ್ತು. ಈ ರೀತಿಯ ಅವಾಂತರದ ನಡುವೆ ಕೆಲಸಕ್ಕೆ ಹೋದವರು ಮಳೆಯಲ್ಲಿಯೇ ಮನೆ ಸೇರಿದ್ದರು. ಇನ್ನು ಅಕ್ಟೋಬರ್ 13 ಅಂದ್ರೆ ಎರಡು ದಿನಗಳ ಕಾಲ ಜೋರು ಮಳೆಯಾಗಲಿದೆ.

 

ಬೆಂಗಳೂರು, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಇತರೆಡೆ ಮಳೆ ಹೆಚ್ಚಾಗಿದೆ. 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ತುಮಕೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೋಲಾರಕ್ಕೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

Share This Article
Enable Notifications OK No thanks