Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಾಮುಂಡಿ ಬೆಟ್ಟವನ್ನ ವಕ್ಫ್ ಮಂಡಳಿಗೆ ಕೊಡುವುದಕ್ಕೆ ಹೊರಟಿದ್ದೀರಾ..? ಇಂಗ್ಲಿಷ್ ನಲ್ಲಿ ಡಿಕೆಶಿಗೆ ಶೋಭ ಕರಂದ್ಲಾಜೆ ಕ್ಲಾಸ್

---Advertisement---

ಮೈಸೂರು: ಡಿಕೆ ಶಿವಕುಮಾರ್ ಮಾತಿಗೆ ಇಂದು ಶೋಭ ಕರಂದ್ಲಾಜೆ ಗರಂ ಆಗಿದ್ದಾರೆ. ಯಾವಾಗ ಆರ್ ಎಸ್ ಎಸ್ ಪ್ರಾರ್ಥನೆಯನ್ನ ಹೇಳಿದ್ರಿ ಆಗ ನಿಮ್ಮ ಹೈಕಮಾಂಡ್ ನಿಮ್ಮ ಮೇಲೆ ಕೋಪ ಮಾಡಿಕೊಳ್ತು. ನಿಮ್ಗೆ ಸೂಚನೆ ಬಂದಿದೆ ಇದರಿಂದ ಹೊರಗೆ ಬರಬೇಕು ಅಂತ. ಅದಕ್ಕಾಗಿ ನೀವೂ ಚಾಮುಂಡಿ ಬೆಟ್ಟದ ಬಗ್ಗೆ ಕಾಂಟ್ರೂವರ್ಸಿ ಸೃಷ್ಟಿ ಮಾಡ್ತಾ ಇದ್ದೀರಾ. ನಿಮ್ಮ ಬಾಸ್ ಗಳಿಗೆ ಹೇಳಿ. ಯಾರೂ ಸೃಷ್ಟಿ ಮಾಡ್ತಾ ಇದ್ದಾರೆ ಈ ಕಾಂಟ್ರವರ್ಸಿಯನ್ನ. ಆರ್ ಎಸ್ ಎಸ್ ಬಗ್ಗೆ ಹೇಳಿರುವುದನ್ನ ಮರೆತೋಗಬೇಕು, ಹೊಸ ವಿವಾದವನ್ನ ಹುಟ್ಟು ಹಾಕಬೇಕು. ಇದು ಕಾಂಗ್ರೆಸ್ ನ ಮಾನಸಿಕತೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಸಿದ್ದರಾಮಯ್ಯ ಅವರದ್ದು ಇದೇ ಮಾನಸಿಕತೆ. ನೀವೂ ಹಿಂದೂಗಳನ್ನು, ದೇವಸ್ಥಾನಗಳ ಒಪ್ಪಿಕೊಳ್ಳುವುದಕ್ಕೆ ರೆಡಿ ಇಲ್ಲ. ಅದೇ ಮಾನಸಿಕತೆಗೆ ಇಂದು ಡಿಕೆ ಶಿವಕುಮಾರ್ ಹೋಗ್ತಾ ಇದ್ದಾರೆ. ನೀವೂ ಏನು ಮಾಡುವವರಿದ್ದೀರಿ ಚಾಮುಂಡಿ ಬೆಟ್ಟವನ್ನ..? ವಕ್ಫ್ ಪ್ರಾಒರ್ಟಿ ಅಂತ ಘೋಷಣೆ ಮಾಡುವವರಿದ್ದೀರಾ..? ಏನು ನಿಮ್ಮ ಷಡ್ಯಂತ್ರ..? ಏನು ನಿಮ್ಮ ಹುನ್ನಾರ..? ಅದರ ಮೊದಲ ಭಾಗವಾಗಿ ನೀವೂ ಬಾನು ಮುಷ್ತಾಕ ಅವರನ್ನ ಕರೆದಿದ್ದೀರಾ..?

ಏನನ್ನ ನಡೆಸುವುದಕ್ಕೆ ಹೊರಟಿದ್ದೀರಿ ಕರ್ನಾಟಕದಲ್ಲಿ. ಹಿಂದೂ ಹಬ್ಬ ಮಾಡುವುದಕ್ಕೆ ಬಿಡಲ್ಲ, ಗಣೇಶನನ್ನ ಇಡುವುದಕ್ಕೆ ಬಿಡಲ್ಲ, ಹಾಡಾಕೋಕೆ ಬಿಡಲ್ಲ, ಮೆರವಣಿಗೆ ಮಾಡುವುದಕ್ಕೆ ಬಿಡಲ್ಲ. ಏನು ಮಾಡುವುದಕ್ಕೆ ಹೊರಟಿದ್ದೀರಿ. ಬೇರೆಯವರಿಗೆ ಇದು ಅನ್ವಯ ಆಗಲ್ಲ. ಎಷ್ಟು ಧೈರ್ಯ ನಿಮಗೆ. ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಅಂತ ಹೇಳುವುದಕ್ಕೆ ಹೊರಟಿದ್ದೀರಿ ಎಷ್ಟು ಧೈರ್ತ ನಿಮಗೆ. ಸಿದ್ದರಾಮಯ್ಯ ಅವರು ಹಾಗೂ ಡಿಕೆ ಶಿವಕುಮಾರ್ ಅವರು ಮಾನಸಿಕವಾಗಿ ದಿವಾಳಿಯಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...