ದಾವಣಗೆರೆ: ಸೆಪ್ಟೆಂಬರ್ 1ನೇ ತಾರೀಖು ಧರ್ಮದ ಉಳಿವಿಗಾಗಿ ಧರ್ಮದ ಯುದ್ಧವನ್ನ ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಕರೆಕೊಟ್ಟಿದ್ದೇವೆ. ಈಗಾಗಲೇ ರಾಜ್ಯದ ಉಳಿವಿಗಾಗಿ ರಾಜ್ಯದ ಉದ್ಧಗಲಕ್ಕೆ, ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ಪ್ರತಿಭಟನೆಗಳು ಆಗಿದ್ದಾವೆ. ನಮ್ಮ ರಾಜ್ಯಾಧ್ಯಕ್ಷರು ಭೇಟಿ ಕೊಟ್ಟು, ವೀರೇಂದ್ರ ಹೆಗ್ಡೆ ಅವರ ಜೊತೆಗೆ ಚರ್ಚೆ ಮಾಡಿ, ಯಾರೋ ಅಯೋಗ್ಯರು ಈ ಸೆಂಥಿಲ್ ಅಂತ ಲೋಕಸಭಾ ಸದಸ್ಯ. ಆತ ಪ್ಯೂರ್ ಲೆಫ್ಟಿಸ್ಟ್. ಆತ ಮಂಗಳಿಉರು ಡಿಸಿಯಾಗಿದ್ದ. ಆ ಸಂದರ್ಭದಲ್ಲಿಯೇ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಿದ್ದ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇವತ್ತು ನಮ್ಮ ಹಿಂದೂಗಳ ಮಠ ಮಾನ್ಯಗಳ ಮೇಲೆ ಎಲ್ಲೋ ಒಂದು ಕಡೆ ಸರ್ಕಾರ ಟಾರ್ಗೆಟ್ ಮಾಡ್ತಿದೆ. ಕೇವಲ ಗಿರೀಶ್ ಮಟ್ಟಣ್ಣ, ಮಹೇಶ್ ಶೆಟ್ಟಿ ತಿಮರೋಡಿ, ಸಮೀರ್ ಇವರೆಲ್ಲ ನೆಪ ಮಾತ್ರ. ಇವರ ಹಿಂದೆ ಷಡ್ಯಂತ್ರ ಬಡೀತಾ ಇದೆ. ವಿದೇಶದಿಂದ ಹಣ ಹರಿದು ಬರ್ತಾ ಇದೆ. ಸಿದ್ದರಾಮಯ್ಯ ಅವರಿಗೆ ಸವಾಲು ಹಾಕ್ತಾ ಇದ್ದೀನಿ. ನೀವೂ ನಿಜವಾಗಲೂ ಹಿಂದೂಗಳಾಗಿದ್ರೆ, ನಿಮ್ಮ ತಂದೆ ತಾಯಿ ಸಿದ್ದರಾಮಯ್ಯ ಎಂಬ ಹೆಸರುಗಳಿಟ್ಟಿದ್ದರೆ, ಡಿಕೆ ಶಿವಕುನಾರ್ ಅವರೆ, ನಿಮ್ಮ ಹೆಸರಲ್ಲಿ ಶಿವ ಇದೆ.
ಎಸ್ಐಟಿ ರಚನೆ ಮಾಡಿದ್ದು ತಪ್ಪು. ಆ ಸೆಂಥಿಲ್ ಇದಾನಲ್ಲ ಆತನ ಹಿಂದೆ ದೊಡ್ಡ ಕೈವಾಡವಿದೆ. ನಮ್ಮ ಶ್ರದ್ಧಾ ಕೇಂದ್ರಗಳ ಮೇಲೆ ದಾಳಿ ಮಾಡ್ತಾ ಇದ್ದಾರೆ. ಹಿಂದೂಗಳೇನು ಕೈಗೆ ಬಳೆ ಹಾಕಿಕೊಂಡಿದ್ಯಾ. ಹುಷಾರ್ ಅಂತ ಹೇಳ್ತೀವಿ. ನಾವೂ ತೊಡೆ ತಟ್ತೀವಿ, ಎಲ್ಲದಕ್ಕೂ ರೆಡಿಯಾಗ್ತೀವಿ. ಮೊದಲು ಅವನನ್ನ ಬಂಧಿಸಿ ಎಂದು ಗರಂ ಆಗಿದ್ದಾರೆ.

