ಬೆಂಗಳೂರು: ಹೈಕೋರ್ಟ್ ಆದೇಶ ಇದ್ದತು ಕೂಡ ನಾಲ್ಕು ನಿಗಮಗಳ ಸಾರಿಗೆ ನೌಕರರು ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಪ್ರತಿದಿನ ಓಡಾಟ ನಡೆಸ್ತಾ ಇದ್ದ ಜನರಿಗೆ ಸಾಕಷ್ಟು ಸಮಸ್ಯೆಯು ಎದುರಾಯ್ತು. ಕ್ರಿಯಾ ಸಮಿತಿಯಿಂದ ಹೋರಾಟ ಮಾಡಿಯೇ ತೀರ್ತೀವಿ ಎಂಬ ನಿರ್ಧಾರದಿಂದ ಪ್ರತಿಭಟನೆ ಶುರುವಾಗಿತ್ತು. ಸಂಜೆ ವೇಳೆಗೆ ಅದೇ ಕ್ರಿಯಾ ಸಮಿತಿಯು ಎಲ್ಲರೂ ಕೆಲಸಕ್ಕೆ ಹಾಜರಾಗಿ ಎಂಬ ಸೂಚನೆಯನ್ನು ನೀಡಿದೆ.
ಈ ಸಂಬಂಧ ಮಾತನಾಡಿದ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬುರಾವ್, ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಿದ್ದೇವೆ. ನಾವೂ ಮುಷ್ಕರವನ್ನ ಕೈಬಿಟ್ಟಿಲ್ಲ, ಸದ್ಯಕ್ಕೆ ಮುಂದೂಡಿಕೆ ಮಾಡಿದ್ದೇವೆ ಅಷ್ಟೆ. ಸರ್ಕಾರ ನಮ್ಮನ್ನು ಮಾತುಕತೆಗೆ ಕರೆಯಬಹುದು ಎಂಬ ಆತ್ಮ ವಿಶ್ವಾಸವಿದೆ. ಈಗ ನೌಕರರು ಕರ್ತವ್ಯಕ್ಕೆ ಹಾಜರಾಗುವ ಕಾರಣ ಎಸ್ಮಾ ಅನ್ವಯವಾಗುವುದಿಲ್ಲ ಎಂದು ಅನಂತ ಸುಬ್ಬುರಾವ್ ತಿಳಿಸಿದ್ದಾರೆ.
ಈ ಮುಷ್ಕರ ಮಾಡಬೇಡಿ ಅಂತ ಹೈಕೋರ್ಟ್ ಸೂಚನೆ ನೀಡಿದ್ರು ಸಹ ಜಂಟಿ ಕ್ರಿಯಾ ಸಮಿತಿ ಅದಕ್ಕೆ ಬೆಲೆ ಕೊಡದೆ ಮುಷ್ಕರ ಮಾಡಿದ್ದಕ್ಕೆ ಸಮಿತಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಮುಷ್ಕರ ನಿಲ್ಲಿಸಬೇಕು ಎಂದು ಹೈಕೋರ್ಟ್ ಹೇಳಿತ್ತು. ಈ ಸಂಬಂಧ ಆಗಸ್ಟ್ 7ಕ್ಕೆ ಹೈಕೋರ್ಟ್ ನಲ್ಲಿ ಈ ಸಂಬಂಧ ವಿಚಾರಣೆ ನಡೆಯಲಿದೆ. ಸಾರಿಗೆ ಮುಷ್ಕರದ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸಿತ್ತು.ಯೂನಿಯನ್ ಅನ್ನು ಯಾರು ಮುನ್ನಡೆಸುತ್ತಿದ್ದಾರೆ ಎಂಬುದನ್ನು ನ್ಯಾಯಾಲಯ ಕೇಳಿತ್ತು. KSRTC ಪರ ವಕೀಲರು ಕೇವಲ 3 ಸಿಬ್ಬಂದಿ ಮಾತ್ರ ರಜೆ ತೆಗೆದುಕೊಂಡಿದ್ದಾರೆ ಎಂದಿದ್ದರು. ಬೆಂಗಳೂರಿನಲ್ಲಿ ಬಸ್ ಸಂಚಾರ ಇದ್ದು, ಬೇರೆ ಜಿಲ್ಲೆಗಳಲ್ಲಿ ಮುಷ್ಕರ ನಡೆಸಲಾಗುತ್ತಿದೆ ಎಂಬುದನ್ನ ಕೋರ್ಟ್ ಗಮನಕ್ಕೆ ತರಲಾಗಿದೆ ಎಂದು ವಕೀಲೆ ದೀಕ್ಷಾ ಅಮೃತೇಶ್ ತಿಳಿಸಿದ್ದಾರೆ.















