Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೇಕೆದಾಟು ಯೋಜನೆ : ಐದೇ ನಿಮಿಷದಲ್ಲಿ ಪ್ರಧಾನಿಯನ್ನ ಒಪ್ಪಿಸುತ್ತೇನೆ, ಆದರೆ ಕಾಂಗ್ರೆಸ್ : ಕುಮಾರಸ್ವಾಮಿ ಹೇಳಿದ್ದೇನು..?

---Advertisement---

ಬೆಂಗಳೂರು: ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಗೆ ಸವಾಲೊಂದನ್ನ ಹಾಕಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಕಾಂಗ್ರೆಸ್ ಗೆ ತಾಕತ್ತಿದ್ದರೆ ಮೇಕೆದಾಟು ಯೋಜನೆಗೆ ತಮಿಳುನಾಡನ್ನು ಒಪ್ಪಿಸಲಿ ಎಂದು ಸವಾಲು ಹಾಕಿದ್ದಾರೆ.

ನನ್ನ ಹಳೆಯ ಮಾತಿಗೆ ಈಗಲೂ ನಾನು ಬದ್ಧ. ಪ್ರಧಾನಿ ಮೋದಿಯವರನ್ನು ನಾನು ಐದೇ ನಿಮಿಷದಲ್ಲಿ ಒಪ್ಪಿಸುತ್ತೇನೆ. ಕಾಂಗ್ರೆಸ್ ನವರಿಗೆ ತಮಿಳುನಾಡಿನವರನ್ನು ಒಪ್ಪಿಸುವ ಶಕ್ತಿ ಇಲ್ಲ. ಅವರನ್ನು ಧಿಕ್ಕರಿಸುವ ಶಕ್ತಿಯೂ ಇಲ್ಲ. ತಮಿಳು ಸರ್ಕಾರವನ್ನು ಧಿಕ್ಕರಿಸಿದರೆ ಮೇಕೆದಾಟು ಯೋಜನೆ ಆಗುತ್ತದೆ. ಇಲ್ಲವಾದರೆ ಮೇಕೆದಾಟು ಯೋಜನೆಯ ಅನುಷ್ಠಾನ ಕಾಂಗ್ರೆಸ್ ನಿಂದ ಸಾಧ್ಯವಿಲ್ಲ. ನನ್ನ ಒಬ್ಬನ ಮೇಲೆ ಕಾಂಗ್ರೆಸ್ ಸರ್ಕಾರಕ್ಕೆ ಅತಿಯಾದ ಭಯವಿದೆ. ಹೀಗಾಗಿಯೇ ಯಾವಾಗಲೂ ನನ್ನ ಹೆಸರನ್ನ ಜಪಿಸುತ್ತಾ ಇರುತ್ತಾರೆ.

ಬಿಜೆಪಿ – ಜೆಡಿಎಸ್ ಒಂದಾದ ಮೇಲಂತು ಕಾಂಗ್ರೆಸ್ ನವರಿಗೆ ನಿದ್ದೆ ಬರ್ತಿಲ್ಲ. ಹೀಗಾಗಿಯೇ ಪದೇ ಪದೇ ನನ್ನನ್ನೇ ಟಾರ್ಗೆಟ್ ಮಾಡ್ತಾ ಇದ್ದಾರೆ. ಮುಂದಿನ ಐದು ವರ್ಷ ಅಲ್ಲ, ಇನ್ನು ಇಪ್ಪತ್ತು ವರ್ಷ ಬೇಕಾದರೂ ಅವರದ್ದೇ ಸರ್ಕಾರವಿರಲಿ. ಆದರೆ ಹೇಳಿದ ಕೆಲಸವನ್ನ ಮೊದಲು ಮಾಡಿ. ಇಪ್ಪತ್ತು ವರ್ಷ ನಮ್ಮದೇ ಸರ್ಕಾರ ಎಂದವರು ಏನೇನಾದ್ರೂ ಅನ್ನೋದು ನಮಗೂ ಗೊತ್ತಿದೆ. ಸಿಎಂ ಖುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಗಲಾಟೆಗಳೇ ನಡೆಯುತ್ತಿವೆ. ಹೀಗೆ ಗಲಾಟೆಯಲ್ಲಿಯೇ ಮುಳುಗಿರುವ ಕಾಂಗ್ರೆಸ್ ಅನ್ನು ಜನ ಹೇಗೆ ತಾನೇ ಒಪ್ಪುತ್ತಾರೆ ಹೇಳಿ. ನಾನು ಕೇವಲ ಸಂಸದರ ಹಣವಲ್ಲ, ವಿಶೇಷ ಅನುದಾನವನ್ನು ತಂದಿದ್ದೇನೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment