ಊಹಿಸಲಾಗದ ದುಃಖದ ಶಾಕಿಂಗ್ ಭವಿಷ್ಯ ನುಡಿದ ಕೋಡಿಶ್ರೀ ಮಠದ ಶ್ರೀ..!

1 Min Read

ಹಾಸನ; ಕೋಡಿಶ್ರೀ ಮಠದ ಶ್ರೀಗಳು ಹೇಳುವ ಭವಿಷ್ಯ ಸಾಕಷ್ಟು ಸಲ ನಿಜವಾಗಿದೆ. ಇದೀಗ ಮತ್ತೊಮ್ಮೆ ಶಾಕಿಂಗ್ ಭವಿಷ್ಯವನ್ನು ನುಡಿದಿದ್ದಾರೆ. ದೇಶಕ್ಕೆ ಹಾಗೂ ರಾಜ್ಯಕ್ಕೆ ದೊಡ್ಡ ಗಂಡಾಂತರ ಕಾದಿದೆ ಎಂದು ಭವಿಷ್ಯ ನುಡಿದಿದ್ದಾರೆ. ಯಾರೂ ಊಹೆ ಮಾಡದ ದುಃಖವೊಂದು ಎದುರಾಗಲಿದೆ ಎಂದೇ ನುಡಿದಿದ್ದಾರೆ. ಇದನ್ನ ಕೇಳಿದಾಗಿನಿಂದ ಜನ ಭೈಭೀತರಾಗಿದ್ದಾರೆ. ಈಗಾಲೇ ಕೊರೋನಾ ಸಾವು ನೋವು ನೋಡಿದ್ದಾರೆ. ಹಲವು ಆಕ್ಸಿಡೆಂಟ್ ಗಳನ್ನ ನೋಡಿದ್ದಾರೆ. ಹೀಗಿರುವಾಗ ಮತ್ತೆ ಗಂಡಾಂತರ ಎಂದಾಗ ಜನರಿಗೆ ಸಾಮಾನ್ಯವಾಗಿಯೇ ಭಯ ಕಾಡುತ್ತದೆ.

ಹಾಗಾದ್ರೆ ಕೋಡಿಶ್ರೀ ಮಠದ ಸ್ವಾಮೀಜಿ ಹೇಳಿದ್ದೇನು, ಕರ್ನಾಟಕ, ಭಾರತಕ್ಕೆ ಮುಂದಿನ ಜನವರಿಯೊಳಗೆ ಭಾರೀ ದೊಡ್ಡ ಗಂಡಾಂತರವಿದೆ. ಯಾರೂ ಊಹಿಸಿರದ ದುಃಖ ಬರುತ್ತದೆ. ನಾನು ಈ ಹಿಂದೆ ಮೇಘಸ್ಪೋಟ, ಜಲಪ್ರಳಯ ಸೇರಿದಂತೆ ವಾಯುವಿನಿಂದ ಆಪತ್ತು ಇದೆ ಎಂದು ಹೇಳಿದ್ದೆ. ಇತ್ತೀಚೆಗೆ ವಿಮಾನ ಅಪಘಾಗ ದುರಂತ ಸೇರಿ ಆಪತ್ತುಗಳು ಸಂಭವಿಸಿವೆ. ಮುಂದೆ ಇನ್ನೊಂದು ದೊಡ್ಡ ಮೇಘ ಸ್ಪೋಟವಾಗಲಿದೆ. ಜೊತೆಗೆ ನಿರೀಕ್ಷೆಗೂ ಮೀರಿದ ದುಃಖವೊಂದರ ಮುನ್ಸೂಚನೆಯೂ ಇದೆ ಎಂದಿದ್ದಾರೆ.

 

ಈ ಹಿಂದೆ ಜನಜೀವನ ಅಸ್ತವ್ಯಸ್ಥಗೊಳ್ಳುತ್ತೆ ಎಂದು ಹೇಳಿದ್ದೆ. ಮನುಷ್ಯ ಓಡಾಡುತ್ತಲೇ ಸಾಯುತ್ತಾನೆ. ಹೃದಯಾಘಾತಗಳು ಹೆಚ್ಚಾಗಲಿವೆ. ಇದು ಇನ್ನಷ್ಟು ಹೆಚ್ಚಾಗಲಿದೆ. ದೇಶಕ್ಕೆ ರಾಜ್ಯಕ್ಕೆ ಕಂಟಕವಿದೆ. ದ್ವೇಷ ಮತ್ತು ಅಸೂಯೆಯಿಂದ ಒಂದಿಬ್ಬರು ಸಾಯುತ್ತಾರೆ. ಅಕಾಲದಲ್ಲಿ ಮಳೆ ಶುರುವಾಗಿರುವ ಕಾರ ಸಕಾಲದಲ್ಲಿ ಮಳೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸೂಳೆಯ ಮಗನುಟ್ಟಿ, ಆಳುವವನು ಮುನಿಪುರವ, ಯುದ್ಧವಿಲ್ಲದೆ ಮಡಿಯೇ ಪುರವೇ ಕೂಳಾದಿತು ಎಂದು ಮಾರ್ಮಿಕವಾಗಿ ಭವಿಷ್ಯ ನುಡಿದಿದ್ದಾರೆ. ಆದರೆ ಇದರ ಅರ್ಥ ಅರ್ಥವಾದವರಿಗೆ ಏನೋ ಅನಾಚಾರವೇ ಜರುಗಲಿದೆ ಎನಿಸಿದೆ.

Share This Article
Leave a Comment

Leave a Reply

Your email address will not be published. Required fields are marked *