ಕೊಹ್ಲಿ ಕೋಪಕ್ಕೆ ನಿಜವಾದ ಕಾರಣ ಏನ್ ಗೊತ್ತಾ..?

1 Min Read

ನವದೆಹಲಿ : ಕ್ಯಾಪ್ಟನ್ಸಿಯಿಂದ ತೆಗೆದಾಕಿದ್ದಕ್ಕೆ ವಿರಾಟ್ ಕೊಹ್ಲಿ ಕೆಂಡಾಮಂಡಲಾರಾಗಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿಯನ್ನು ನಡೆಸಿ ಅಸಮಾಧಾನ ಹೊರ ಹಾಕಿದ್ದರು. ಇದೀಗ ಕೊಹ್ಲಿ ಬೇಸರಕ್ಕೆ ಏನ್ ಕಾರಣ ಅಂತ ಮಾಜಿ ಆಲ್ ರೌಂಡರ್ ಕೀರ್ತಿ ಆಜಾದ್ ತಿಳಿಸಿದ್ದಾರೆ.

ನಾಯಕತ್ವ ಬದಲಾವಣೆ ಆಗಿದ್ದಕ್ಕೆ ಕೊಹ್ಲಿ ಬೇಸರ ಮಾಡ್ಕೊಂಡಿಲ್ಲ ಅಂತ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ. ಆಯ್ಕೆ ಸಮಿತಿ ನಡೆದುಕೊಂಡ ರೀತಿಗೆ ಕೊಹ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ರೋಹಿತ್ ಶರ್ಮಾಗೆ ಕ್ಯಾಪ್ಟೆನ್ಸಿ ನೀಡಿದ್ದಕ್ಕೆ ಅವರಿಗೆ ಬೇಸರವಿಲ್ಲ. ನಾಯಕತ್ವ ಬದಲಾವಣೆ ಬಿಸಿಸಿಐ ಅಧ್ಯಕ್ಷರ ಮೂಲಕ ನಿರ್ಧಾರವಾಗಬೇಕಿತ್ತು. ಆದರೆ ಅದು ಆಗಲಿಲ್ಲ.

ವಿರಾಟ್ ಕೊಹ್ಲಿ ವಿಚಾರದಲ್ಲಿ ಅಧ್ಯಕ್ಷರ ಮೂಲಕ ಚರ್ಚೆಯಾಗಲಿಲ್ಲ. ಈ ಸಂಬಂಧ ಗಂಗೂಲಿ ಕೂಡ ಕೊಹ್ಲಿ ಜೊತೆ ಮಾತನಾಡಬಹುದಿತ್ತು. ಆಯ್ಕೆ ಸಮಿತಿ ನಡೆದುಕೊಂಡ ರೀತಿ ಸರಿ ಇಲ್ಲ. ನಿಮ್ಮನ್ನ ನಾಯಕತ್ವದಿಂದ ತೆಗೆಯುತ್ತಿದ್ದೇವೆಂದು ಮಾಹಿತಿ ನೀಡಿದ್ದರೆ ಆಗಿತ್ತು ಎಂದು ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *