ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಬಸವ ಜಯಂತಿ ಆಚರಣೆ

1 Min Read

 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 30 : ಬಸವಣ್ಣನವರ ತತ್ವವನ್ನು ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ದೂರವಿಟ್ಟಿವೆ. ಆದ್ದರಿಂದ ಎಲ್ಲಾ ಶಾಲೆಗಳಿಗೂ ಬಸವಣ್ಣನವರ ಪಠ್ಯಪುಸ್ತಕ ನೀಡಿ ಭಾವಚಿತ್ರವನ್ನು ಇಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ದೇಶಕರಾದ ಟಿ ಬಿ ಕುಮಾರಸ್ವಾಮಿ ಹೇಳಿದರು.

ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ದೇವಾಲಯದ ಆವರಣದಲ್ಲಿ ನಡೆದ ಬಸವ ಜಯಂತಿಯ ಪ್ರಯುಕ್ತ ತೆರೆದ ವಾಹನದಲ್ಲಿ ಬಸವಣ್ಣನವರ ಭಾವಚಿತ್ರ ಇಟ್ಟು ದಗ್ಗೆ ಗ್ರಾಮದಿಂದ ನುಲೇನೂರು, ತೊಡರನಾಳು, ನಿಂಗದಳ್ಳಿ, ತಿರುಮಲಾಪುರ, ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ದೇವಸ್ಥಾನದವರೆಗೆ ಬೈಕ್ ರ‌್ಯಾಲಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಸುಮಾರು 1000ಕ್ಕೂ ಹೆಚ್ಚು ಬೈಕ್ ಗಳು ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಬಸವಣ್ಣನವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಜನತೆ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಮುಖಂಡರು ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ನಿರ್ದೇಶಕರಾದ ಟಿ.ಬಿ. ಕುಮಾರ್ ಸ್ವಾಮಿ ಮಾತನಾಡಿ, ಬಸವಣ್ಣನವರ ಬಗ್ಗೆ ಹಾಗೂ ಅವರು ಮಾಡಿದ ವಚನದ ಬಗ್ಗೆ ಸರ್ಕಾರಗಳು ಗಮನ ಕೊಡುತ್ತಿಲ್ಲ. ಯಾವುದೇ ಸರ್ಕಾರಗಳಾಗಲಿ ರಾಜ್ಯದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕದ ಮುಖಾಂತರ ಸಂದೇಶ ನೀಡಬೇಕು. ಈಗಿನ ಪೀಳಿಗೆಗೆ ಮಕ್ಕಳಿಗೆ ಬಸವಣ್ಣನವರ ಬಗ್ಗೆ ತಿಳಿಸಬೇಕು. ಮುಂದಿನ ತಿಂಗಳು19 ತಾರೀಕು ನಂದು ಹೊಳಲ್ಕೆರೆ ತಾಲೂಕಿನ ವೀರಶೈವ ಮಹಾಸಭಾ ಮೂಲಕ ಬಸವ ಜಯಂತಿಯನ್ನು ಆಚರಣೆ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದಿವಾಕರ್ ಎಸ್ ಎಲ್, ತೊಡರ್ನಾಳು ಶಿವಕುಮಾರ್, ಟಿ ನುಲೇನೂರು, ದಗ್ಗೆ ಶಶಿಕುಮಾರ್, ಬೀಜಿಹಳ್ಳಿ ದಿವಾಕರ್, ವಿಜಿ ಕುಮಾರ್, ನಾಗರಾಜ್, ರಾಜಣ್ಣ, ತಿರುಮಲಾಪುರ ಹಾಗೂ ಎಲ್ಲಾ ಗ್ರಾಮದ ಮುಖಂಡರುಗಳು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *