ಸಿನಿಮಾ‌ ಪ್ರಮೋಷನ್ ಗಾಗಿ ಬಂದಿದ್ದೇನೆ, ಹೀಗಾಗಿ ಅಪ್ಪು ಮನೆಗೆ ಹೋಗಲ್ಲ : ಅಲ್ಲು ಅರ್ಜುನ್

1 Min Read

ಬೆಂಗಳೂರು: ಅಪ್ಪು ಇಲ್ಲದ ದಿನಗಳನ್ನ ಅಭಿಮಾನಿಗಳು ನೋವು ಬೇಸರದಲ್ಲೇ ಕಳೆಯುತ್ತಿದ್ದಾರೆ. ಒಂದೂವರೆ ತಿಂಗಳಾದರೂ ಆ ನೋವು ಮಾಸುವ ಸೂಚನೆ ಕಾಣಿಸಿಲ್ಲ. ಅಪ್ಪು ನಮ್ಮ ನಡುವೆ ಇರಬೇಕಿತ್ತು ಅಂತಾನೇ ಎಲ್ಲರ ಆಸೆಯಾಗಿದೆ. ಆದ್ರೆ ವಿಧಿಯಾಟದ ಮುಂದೆ ಯಾರಾದ್ರೂ ಆಟವಾಡೋದಕ್ಕೆ ಸಾಧ್ಯವಾ..? ಕಾಲನ ಕರೆಗೆ ಅಪ್ಪು ಹೋಗಿಯೇ ಬಿಟ್ಟಿದ್ದಾರೆ.

ಅಪ್ಪು ನಿಧನರಾದಾಗ ಪರ ಭಾಷೆಯವರು ಬಂದು ಅಂತಿಮ ದರ್ಶನ ಮಾಡಿದ್ರು. ಸಿನಿಮಾಗಳ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಾಗಲೂ ಪುನೀತ್ ನಿವಾಸಕ್ಕೆ ಭೇಟಿ ನೀಡಿ, ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಧೈರ್ಯ ತುಂಬಿ ಬರ್ತಾರೆ. ಇದೀಗ ಅಲ್ಲು ಅರ್ಜುನ್ ಕೂಡ ಬೆಂಗಳೂರಿಗೆ ಆಗಮಿಸಿದ್ದು, ಅಪ್ಪು ಮನೆಗೆ ಹೋಗಲ್ಲ ಎಂದಿದ್ದಾರೆ.

ಅಲ್ಲು ಅರ್ಜುನ್ ತಮ್ಮ ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕೂಡ ಆಗಮಿಸಿದ್ದರು. ಈ ವೇಳೆ ಮಾತನಾಡುವಾಗ ಅಲ್ಲು ಅರ್ಜುನ್ ಪುನೀತ್ ರಾಜ್ ಕುಮಾರ್ ಅವರನ್ನ ನೆನೆದಿದ್ದಾರೆ. ಇಂದು ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದೇನೆ. ಹೀಗಾಗಿ ಇಂದು ಅವರ ಮನೆಗೆ ಹೋಗಲ್ಲ ಎಂದಿದ್ದಾರೆ.

ಸಿನಿಮಾ ರಿಲೀಸ್ ಆದ್ಮೇಲೆ ಒಂದು ದಿನ ಬೆಂಗಳೂರಿಗೆ ಬಂದು ಅಪ್ಪು ಮನೆಗೆ ಹೋಗಿ ಬರ್ತೇನೆ. ಸಿನಿಮಾ ಪ್ರಮೋಷನ್ ಗಾಗಿ ಅವರ ಮನೆಗೆ ಹೋಗಿದ್ದಾರೆ ಎನಿಸಿಕೊಳ್ಳುವುದು ನನಗೆ ಇಷ್ಟವಿಲ್ಲ. ಹೀಗಾಗಿ ಸಿನಿಮಾ ರಿಲೀಸ್ ಆದ್ಮೇಲೆ ಮತ್ತೆ ಬರ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *