ಸಿದ್ದರಾಮಯ್ಯಗೆ ಭಯ ಶುರುವಾಗಿದೆ, ಅವರೊಬ್ಬ ವೇಸ್ಟ್ ಬಾಡಿ : ರಮೇಶ್ ಜಾರಕಿಹೊಳಿ

suddionenews
1 Min Read

ಬೆಳಗಾವಿ: ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಬಂದಿದ್ದು, ಬೆಳಗಾವಿಯಲ್ಲಿ ಬಿಜೆಪಿ ಸೋತಿದೆ. ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಕಂಡಿದ್ದಾರೆ. ಈ ವಿಚಾರವಾಗಿ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ರಮೇಶ್ ಜಾರಕಿಹೊಳಿ ಅವರೇ ಕಾರಣ ಎಂದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಟಿ ನಡೆಸಿದ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಗೆ ಭಯ ಶುರುವಾಗಿದೆ. ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆ. ಅವರೊಬ್ಬ ವೇಸ್ಟ್ ಬಾಡಿ. ನಾನು ಬಿಜೆಪಿ ಶಾಸಕನಾಗಿ, ಕಾರ್ಯಕರ್ತನಾಗಿಯೇ ಕೆಲಸ ಮಾಡಿದ್ದೇನೆ. ಸೋಲಿಗೆ ನಾನೇ ಕಾರಣ ಎಂಬ ಬಗ್ಗೆ ಯಾವುದೇ ಕನ್ಫರ್ಮ್ ಇಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.

ಇನ್ನು ಪಕ್ಷ ಸೋತಿದೆ. ಸೋಲಿನ ಬಗ್ಗೆ ಆಂತರಿಕವಾಗಿ ಚರ್ಚೆ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲವನ್ನು ಹೇಳುತ್ತೇನೆ. ಸಾಕಷ್ಟು ವಿಚಾರಗಳು ಹೇಳೋದಿದೆ. ಆದ್ರೆ ದೊಡ್ಡ ನಾಯಕರು ಆದೇಶ ಮಾಡಿರೋದ್ರಿಂದ ಸುಮ್ಮನಿದ್ದೇನೆ. ಪರಿಷತ್ ಚುನಾವಣೆಗೆ ಮೂರು ದಿನ ಬಾಕಿ ಇರುವಾಗಲೇ ಜಿಲ್ಲೆಯಲ್ಲಿ ರಾಜಕಾರಣ ಭಾರೀ ಬದಲಾವಣೆ ಪಡೆದಿತ್ತು. ಲಖನ್ ಜಾರಕಿಹೊಳಿ ಜೊತೆಯೂ ಚುನಾವಣೆಯ ಮೂರು ದಿನ ಚರ್ಚೆ ನಡೆಯಲಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *