ಮಂಜುನಾಥ್ ಹತ್ಯೆ : ಹೇಗಿದೆ ಶಿವಮೊಗ್ಗದಲ್ಲಿ ವಾತಾವರಣ…?

suddionenews
1 Min Read

ಶಿವಮೊಗ್ಗ, ಏಪ್ರಿಲ್. 23 :  ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಿನ್ನೆ ಭಯೋತ್ಪಾದಕರ ಭೀಕರವಾದ ದಾಳಿಗೆ ಶಿವಮೊಗ್ಗದ ಮಂಜುನಾಥ್ ಪ್ರಾಣ ಕಳೆದುಕೊಂಡಿದ್ದಾರೆ. ಪುತ್ರ ಹಾಗೂ ಮಗನ ಎದುರಲ್ಲೇ ಪ್ರಾಣ ಬಿಟ್ಡಿದ್ದಾರೆ. ತಿಂಡಿ ತಿನ್ನುತ್ತಿದ್ದಾಗಲೇ ದಾಳಿ ನಡೆದಿದ್ದು, ಅಲ್ಲಿದ್ದ ಗಂಡಸರನ್ನೇ ಗುರಿಯಾಗಿಸಿಕೊಂಡು ದಾಳು ನಡೆಸಿದ್ದಾರೆ. ಅವರ ಧರ್ಮ ಕೇಳಿ ಗುಂಡು ಹಾರಿಸಿದ್ದಾರೆ. ಅದರಲ್ಲಿ ಶಿವಮೊಗ್ಗದ ಮಂಜುನಾಥ್ ಕೂಡ ಹತ್ಯೆಯಾಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ಶಿವಮೊಗ್ಗದ ವಿಜಯನಗರದಲ್ಲಿ ಅವರ ಮನೆ ಇದ್ದು, ನೀರವ ಮೌನ ಆವರಿಸಿದೆ. ಮೃತದೇಹ ಶಿವಮೊಗ್ಗಕ್ಕೆ ಬಂದ ಮೇಲೆ ಅಂತ್ಯ ಸಂಸ್ಕಾರ ನೆರವೇರಲಿದೆ. ಅಲ್ಲಿನ ಪಾಲಿಕೆ ಆಯುಕ್ತರು ಈ ಪರಿಸ್ಥಿತಿ ಬಗ್ಗೆ ಮಾತನಾಡಿದ್ದು, ಜಮ್ಮು ಕಾಶ್ಮೀರದಿಂದ ಮಂಜುನಾಥ್ ಮೃತದೇಹ ಸಂಜೆ ವೇಳೆಗೆ ಬರಬಹುದು. ಜನ ಕೂಡ ಜಾಸ್ತಿ ಬರುವ ಸಾಧ್ಯತೆ ಇದೆ. ಹೀಗಾಗಿ ಎಸ್ಪಿ ಸರ್ ನಮಗೆಲ್ಲಾ ಸಲಹೆಯನ್ನ ನೀಡಿದ್ದಾರೆ. ಅದರ ಪ್ರಕಾರ ಬ್ಯಾರಿಕೇಡ್ ಹಾಕಿ ಭದ್ರತೆ ಒದಗಿಸಲಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸರ್ಕಲ್ ಇನ್ ಸ್ಪೆಕ್ಟರ್ ಜೊತೆ ಮಾತನಾಡಿ ಎಲ್ಲಾ ವ್ಯವಸ್ಥೆಯನ್ನ ಮಾಡಲಾಗಿದೆ.

ಜಿಲ್ಲಾಡಳಿತ, ಮಹಾನಗರ ಪಾಲಿಕೆ ವತಿಯಿಂದ ಎಲ್ಲಾ ವ್ಯವಸ್ಥೆಯನ್ನ ಮಾಡಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಅವರ ಕುಟುಂಬಸ್ಥರು ತುಂಬಾ ದುಃಖದಲ್ಲಿದ್ದಾರೆ. ಅವರು ಒಬ್ಬ ಮಗನನ್ನ ಕಳೆದುಕೊಂಡಿದ್ದಾರೆ, ತಂದೆಯನ್ನ ಕಳೆದುಕೊಂಡಿದ್ದಾರೆ. ನಾವೂ ಹೋಗಿ ಅವರ ಅಮ್ಮ ಹಾಗೂ‌ ಮಗನ ಜೊತೆಗೆ ಮಾತಾಡಿಕೊಂಡು ಬಂದ್ವಿ. ಧೈರ್ಯ ತುಂಬಿದ್ದೇವೆ. ದೇವರು ಆ ಶಕ್ತಿಯನ್ನ ನೀಡಬೇಕಿದೆ. ಮಹಾನಗರ ಪಾಲಿಕೆ ಅವರ ಜೊತೆಗೆ ಸದಾ ನಿಲ್ಲಲಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks