Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಠಾಧೀಶರಿಂದ ಮೊಟ್ಟೆ ವಿರೋಧ : ಮಠಕ್ಕೆ ಬಂದು ಮೊಟ್ಟೆ ತಿಂತೇವೆ ಎಂದ ವಿದ್ಯಾರ್ಥಿಗಳು..!

Facebook
Twitter
Telegram
WhatsApp

ಕೊಪ್ಪಳ: ಕೆಲ ದಿನಗಳಿಂದ ಮಠಾಧೀಶರದ್ದು ಒಂದೇ ಹಠ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಒಂದಷ್ಟು ಪೋಷಾಕಾಂಶ ಸಿಗಲಿ ಎಂಬ ಕಾರಣಕ್ಕೆ ನೀಡುತ್ತಿರುವ ಮೊಟ್ಟೆಯನ್ನ ನಿಲ್ಲಿಸಿ ಎಂದು. ಯಾಕಂದ್ರೆ ಸರ್ಕಾರಿ ಶಾಲೆಯಲ್ಲಿ ಸಸ್ಯಹಾರಿ ಸಮುದಾಯಕ್ಕೆ ಸೇರಿದ ಮಕ್ಕಳು ಕೂಡ ಇರ್ತಾರೆ ಹೀಗಾಗಿ ಮೊಟ್ಟೆ ವಿತರಣರ ನಿಲ್ಲಿಸಿ‌ ಎಂಬುದು ಅವರ ವಾದ. ಇದೀಗ ಮಠಾಧೀಶರ ವಿರುದ್ಧ ವಿದ್ಯಾರ್ಥಿಗಳು ಕೆಂಡಾಮಂಡಲರಾಗಿದ್ದಾರೆ.

ಗಂಗಾವತಿಯ ವಿದ್ಯಾರ್ಥಿನಿಯೊಬ್ಬಳು ಮಠಾಧೀಶರುಗೆ ಸವಾಲಾಕಿದ್ದಾಳೆ. ನೀವೂ ಮೊಟ್ಟೆ ತಿನ್ನುವುದನ್ನ ವಿರೋಧಿಸಿದ್ರೆ, ಮೊಟ್ಟೆ ಕೊಡುವುದು ತಪ್ಪಿದ್ರೆ ನಾವೂ ಮಠಕ್ಕೆ ಬಂದು ಮೊಟ್ಟೆ ತಿಂತೀವಿ ಅಂತ ಹೇಳಿದ್ದಾಳೆ. ಸದ್ಯ ವಿದ್ಯಾರ್ಥಿನಿ ನೀಡಿರುವ ಹೇಳಿಕೆ ವೈರಲ್ ಆಗಿದೆ‌.

ಮೊಟ್ಟೆ ತಿಂದರೆ ನಾವೂ ಬದುಕುತ್ತೀವಿ. ಇಲ್ಲವಾದರೆ ಅಪೌಷ್ಟಿಕತೆಯಿಂದ ಸಾಯುತ್ತೇವೆ. ನಾವೂ ಬದುಕುವುದು ಬೇಕಾ ಅಥವಾ ಮೊಟ್ಟೆ ನಿಲ್ಲಿಸುವುದು ಬೇಕಾ ಎಂದು ಪ್ರಶ್ನಿಸಿದ್ದಾಳೆ. ಒಂದಲ್ಲ ಎರಡೆರಡು ಮೊಟ್ಟೆ ತಿಂತೀವಿ. ಮೊಟ್ಟೆಗಾಗಿ ರೋಡಿಗೆ ಬೇಕಾದ್ರೂ ಇಳಿಯುತ್ತೀವಿ. ನಮಗೆ ಯಾರು ಇಲ್ಲ ಅಂದುಕೊಳ್ಳಬೇಡಿ.‌ ನಮಗೆ ಎಸ್ಎಫ್ಆರ್ ಸಂಸ್ಥೆ ಇದೆ. ಮೊಟ್ಟೆ,‌ಬಾಳೆ ಹಣ್ಣು ಬೇಕೇ ಬೇಕು ಎಂದಿದ್ದಾಳೆ.

ಮಕ್ಕಳು ದೇವರಿಗೆ ಸಮಾನ ಅಂತಾರೆ. ಆದ್ರೆ ದೇವರ ಆಸೆ ಕೇಳೋದಕ್ಕೆ ರೆಡಿ ಇಲ್ಲ. ಯಾಕೆ ಮಠಗಳಿಗೆ ಬಂದು ದಕ್ಷಿಣೆ ಹಾಕಿಲ್ವಾ. ಒಂದಲ್ಲ ಎರಡು ಮೊಟ್ಟೆ ತಿನ್ನುತ್ತೇವೆ ಅದನ್ನ ಕೇಳೋದಕ್ಕೆ ನೀವ್ಯಾರು ಎಂದು ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು ?

ಸುದ್ದಿಒನ್ : ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಪರಿಣಾಮವಾಗಿ, ಅನೇಕ ರೀತಿಯ ಮಾರಣಾಂತಿಕ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಅಪಾಯಕಾರಿ ಅಂಶಗಳು ಯಾವುವು ? ಅವುಗಳನ್ನು ತಡೆಯುವುದು ಹೇಗೆ ? ಮುಂತಾದ

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ?

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ? ಶನಿವಾರ ರಾಶಿ ಭವಿಷ್ಯ -ಮೇ-4,2024 ಸೂರ್ಯೋದಯ: 05:52, ಸೂರ್ಯಾಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

error: Content is protected !!