Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ಮಾರ್ಗದರ್ಶಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್‌ನ ನೂತನ ಶಾಖೆ ಉದ್ಘಾಟಿಸಿದ ಶೈಲಜಾ ಕಿರಣ್

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ.17 : ಚಿಟ್ಸ್ ಫಂಡ್‌ನಲ್ಲಿ ಹಣವನ್ನು ತೊಡಗಿಸುವುದರ ಮೂಲಕ ಹಣವನ್ನು ಉಳಿತಾಯದ ಜೊತೆಗೆ ತಮ್ಮ ಮುಂದಿನ ಅಗತ್ಯಗಳಿಗೆ ಸಹಾ ಬಳಕೆ ಮಾಡಿಕೊಳ್ಳಬಹುದಾಗಿದೆ ಈಗಾಗಲೇ ಲಕ್ಷಾಂತರ ಜನ ಇದರ ಉಪಯೋಗವನ್ನು ಪಡೆದಿದ್ದಾರೆ ಎಂದು ಮಾರ್ಗದರ್ಶಿ ಚಿಟ್ಸ್ ಪ್ರವೈಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀಮತಿ ಶೈಲಜಾ ಕಿರಣ್ ತಿಳಿಸಿದರು.

ನಗರದ ದಾವಣಗೆರೆ ರಸ್ತೆಯಲ್ಲಿನ ಜಗಳೂರು ಮಹಾಲಿಂಗಪ್ಪ ಆರ್ಕೇಡ್‌ದಲ್ಲಿ ಸೋಮವಾರ ಪ್ರಾರಂಭವಾದ ಮಾರ್ಗದರ್ಶಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್‌ನ 122ನೇ ಶಾಖೆಯನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1962ರಲ್ಲಿ ಪ್ರಾರಂಭವಾದ ನಮ್ಮ ಚಿಟ್ಸ್ ಫಂಡ್ ಕರ್ನಾಟಕದಲ್ಲಿ (26) ಆಂಧ್ರ ಪ್ರದೇಶದಲ್ಲಿ (37) ತೆಲಂಗಾಣದಲ್ಲಿ (41) ಹಾಗೂ ತಮಿಳುನಾಡಿನಲ್ಲಿ (18) ಶಾಖೆಗಳು ಕಾರ್ಯ ನಿರ್ವಹಿಸುತ್ತಿದೆ, ಇದು ಕರ್ನಾಟಕದಲ್ಲಿ 26ನೇ ಶಾಖೆಯಾಗಿದೆ. ಈ ಸಾಲಿನಲ್ಲಿ ನಮ್ಮ ವ್ಯವಹಾರದ ಗುರಿಯನ್ನು 12 ಸಾವಿರ ಕೋಟಿಗೆ ನಿಗಧಿ ಮಾಡಿದ್ದು ಈಗಾಗಲೇ 10.500 ಕೋಟಿ ವ್ಯವಹಾರವನ್ನು ಮಾಡಲಾಗಿದೆ ಉಳಿದ ಆರ್ಥಿಕ ವರ್ಷದಲ್ಲಿ ನಮ್ಮ ಗುರಿಯನ್ನು ಮುಟ್ಟಲಾಗುವುದು. ನಮ್ಮ ಈ ಚಿಟ್ಸ್ ಫಂಡ್ ನಲ್ಲಿ ಸುಮಾರು 2,22,000ಜನ ಸದಸ್ಯರಿದ್ದಾರೆ. 60 ಲಕ್ಷ ಗ್ರಾಹಕರಿದ್ದಾರೆ ಎಂದರು.

ನಮ್ಮ ಚಿಟ್ಸ್ ಫಂಡ್ ನಲ್ಲಿ ಹಣವನ್ನು ವಿವಿಧ ರೀತಿಯಲ್ಲಿ ತೂಡಗಿಸಿರುವ ಜನತೆ ಅದನ್ನು ಅವರು ವಿವಿಧ ರೀತಿಯ ಉಪಯೋಗಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ಮಗಳ ಮದುವೆ, ಮಗನ ಶಿಕ್ಷಣ, ಭೂಮಿ ಖರೀದಿ, ಆರೋಗ್ಯ, ಉದ್ಯಮೆ ಸ್ಥಾಪನೆ, ವ್ಯವಹಾರ ಸೇರಿದಂತೆ ವಿವಿಧಡೆಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ, ಜನತೆ ತಮ್ಮ ಮುಂದಿನ ಭವಿಷ್ಯಕ್ಕಾಗಿ ನಮ್ಮಲ್ಲಿ ಚೀಟಿಯನ್ನು ಹಾಕುತ್ತಿದ್ದಾರೆ ನಾವು ಸಹಾ ಅವರ ಬೇಕು ಬೇಡಗಳಿಗೆ ಸ್ಫಂದನೆ ಮಾಡಲಾಗುತ್ತಿದೆ ಅವರ ಚೀಟಿ ಹಣವನ್ನು ಭದ್ರವಾಗಿ ಇಡಲಾಗುತ್ತದೆ, ಇದರ ಮೇಲೆ ಸಾಲವನ್ನು ಸಹಾ ನೀಡುವ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.

ನಮ್ಮಲ್ಲಿ ಚೀಟಿ ಹಾಕಿದವರು ನಮ್ಮ ಲಾಭದಲ್ಲಿ ಲಾಭಾಂಶವನ್ನು ಸಹಾ ನೀಡಲಾಗುತ್ತಿದೆ ಇದುವರೆವಿಗೂ ಶೇ.6 ರಷ್ಟು ಲಾಭಾಂಶವನ್ನು ನೀಡುತ್ತಾ ಬರಲಾಗಿದೆ. ಕರ್ನಾಟಕದಲ್ಲಿ ಉತ್ತಮವಾದ ಗ್ರಾಹಕರಿದ್ದಾರೆ ನಮ್ಮೇಲ್ಲಾ ಕೆಸಲಗಳಿಗೆ ಸಹಕಾರ ನೀಡುತ್ತಿದ್ದಾರೆ. ಇದ್ದಲ್ಲದೆ ಮತ್ತಷ್ಟು ಗ್ರಾಹಕರನ್ನು ನಮ್ಮತ್ತ ಸೆಳೆಯವುದರ ಮೂಲಕ ಮಾರ್ಗದರ್ಶಿ ಚಿಟ್ಸ್ ಪ್ರವೈಟ್ ಲಿಮಿಟೆಡ್‌ಗೆ ಗ್ರಾಹಕರನ್ನಾಗಿ ಮಾಡಲಾಗುವುದು. ಚಿಟ್ಸ್‌ನಿಂದ ಉಳಿತಾಯದ ಜೊತೆಗೆ ತಮ್ಮ ಮುಂದಿನ ಭವಿಷ್ಯಕ್ಕೂ ಸಹಾ ಅನುಕೂಲವಾಗಲಿದೆ. ನಮ್ಮ ಚಿಟ್ಸ್ ಫಂಡ್‌ನ್ನು ಮುಂದಿನ ದಿನದಲ್ಲಿ ಬೇರೆ ರಾಜ್ಯಗಳಿಗೂ ಸಹಾ ವಿಸ್ತಾರ ಮಾಡುವ ಆಲೋಚನೆ ಇದೆ ಎಂದರು.
ನಮ್ಮ ಗ್ರಾಹಕರು ಹಾಕಿದ ಹಣಕ್ಕೆ ಶೇ.100 ರಷ್ಟು ಭದ್ರತೆಯನ್ನು ನೀಡಲಾಗುತ್ತದೆ. ಇಲ್ಲಿ ಚೀಟಿ ಹಣವನ್ನು ಪಡೆಯುವಾಗ ನಿರ್ಧಿಷ್ಟವಾದ ದಾಖಲೆಗಳನ್ನು ನೀಡುವುದರ ಮೂಲಕ ಹಣವನ್ನು ಪಡೆಯಬೇಕಿದೆ. ನಾವು ಗ್ರಾಹಕರು ನೀಡುವ ಹಣವನ್ನು ಭದ್ರವಾಗಿ ಬ್ಯಾಂಕ್‌ನಲ್ಲಿ ಇಡುವುದರ ಮೂಲಕ ಹಣಕ್ಕೆ ಭದ್ರತೆಯನ್ನು ನೀಡಲಾಗುತ್ತದೆ. ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ ಎಲ್ಲವನ್ನು ಸಹಾ ಪರಾದರ್ಶಕವಾಗಿ ಮಾಡಲಾಗುತ್ತದೆ ಎಂದು ಮಾರ್ಗದರ್ಶಿ ಚಿಟ್ಸ್ ಪ್ರವೈಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀಮತಿ ಶೈಲಜಾ ಕಿರಣ್ ತಿಳಿಸಿದರು.

ಈ ಸಂದರ್ಭದಲ್ಲಿ ಮಾರ್ಗದರ್ಶಿ ಚಿಟ್ಸ್ ಪ್ರವೈಟ್ ಲಿಮಿಟೆಡ್‌ನ ಉಪಾಧ್ಯಕ್ಷರಾದ ಬಲರಾಮಪ್ಪ, ನಿರ್ದೆಶಕರಾದ ಲಕ್ಷ್ಣಣರಾವ್, ಕರ್ನಾಟಕ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಎ.ಚಂದ್ರಯ್ಯ, ಟಿ.ನಂಜುಂಡಪ್ಪ ಸೇರಿದಂತೆ ಮಾರ್ಗದರ್ಶಿ ಚಿಟ್ಸ್ ಪ್ರವೈಟ್ ಲಿಮಿಟೆಡ್‌ನ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...