Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಿಸೆಂಬರ್ 10ಕ್ಕೆ ತೆರೆಗೆ ಬರಲಿದೆ  ಹೊಸಬರ ‘ಕ್ಯಾನ್ಸೀಲಿಯಂ’ ಸಿನಿಮಾ

Facebook
Twitter
Telegram
WhatsApp
ಬೆಂಗಳೂರು : ಚಿತ್ರರಂಗದಲ್ಲಿ ಹೊಸಬಗೆಯ ಸಿನಿಮಾಗಳು, ಹೊಸ ಬಗೆಯ ಪ್ರಯೋಗಗಳು ನಡೆಯುತ್ತಿವೆ. ಹೊಸ ಪ್ರತಿಭೆಗಳ‌ ದಂಡೂ‌ ಸಿನಿಮಾರಂಗಕ್ಕೆ ಕಾಲಿಡುತ್ತಿದೆ. ಈ ಎಲ್ಲ ಹೊಸತುಗಳ ಪರಿಣಾಮ ಸಿನಿರಸಿಕರಿಗೆ ಬಗೆ ಬಗೆಯ ಮನರಂಜನಾತ್ಮಕ ಸಿನಿಮಾಗಳು‌ ನೋಡಲು ಸಿಗುತ್ತಿವೆ. ಅಂತಹದ್ದೇ ಹೊಸ ಪ್ರಯೋಗದ, ಹೊಸತಂಡದ, ಸಿನಿಮಾವೊಂದು ಈಗ‌ ಬಿಡುಗಡೆಯಾಗಲು ಸಕಲ ಸಜ್ಜಾಗಿ‌ ನಿಂತಿದೆ ಅದುವೇ ಕ್ಯಾನ್ಸೀಲಿಯಂ ಸಿನಿಮಾ.

ಕ್ಯಾನ್ಸೀಲಿಯಂ ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಬಿಲ್ಡ್ ಮಾಡಿರುವ ಸಿನಿಮಾ. ಈ ಚಿತ್ರದ ವಿಶೇಷತೆ ಎಂದರೆ ಇದೊಂದು ಸೈನ್ಸ್ ಫಿಕ್ಷನ್ ಸಿನಿಮಾ. ಕನ್ನಡದ‌ ಮಟ್ಟಿಗೆ ಇದೊಂದು‌ ಹೊಸ ಪ್ರಯೋಗ ಎನ್ನುವ ಈ ಚಿತ್ರತಂಡ ಚಿತ್ರರಂಗದಲ್ಲಿ ಮೊದಲ‌ ಬಾರಿ ತಮ್ಮನ್ನು ಸವಾಲಿಗೊಡ್ಡಿಕೊಂಡಿದೆ. ಯಾಕಂದ್ರೆ ಇಡೀ ಚಿತ್ರತಂಡಕ್ಕೆ ಸಿನಿಮಾ‌ ಇದೇ ಮೊದಲ ಅನುಭವ. ಅದ್ಹಂಗೆ ಕ್ಯಾನ್ಸೀಲಿಯಂ ಒಂದು‌ ಲ್ಯಾಟಿನ್ ಪದ. ಇದರರ್ಥ ಉದ್ದೇಶ, ಪ್ಲ್ಯಾನ್, ಸಲಹೆ ಎಂದು. ಸಿನಿಮಾ ಕಥೆಗೆ ಸೂಕ್ತವಾದ್ದರಿಂದ ಈ ಹೆಸರನ್ನೇ ಇಡಲಾಗಿದೆ ಎನ್ನುತ್ತದೆ‌ ಸಿನಿಮಾ ತಂಡ.

ಹೊಸ ಬಗೆಯ‌‌ ನಿರೂಪಣೆ, ತಾಂತ್ರಿಕ ಶ್ರೀಮಂತಿಕೆ, ಹೊಸತನ ಒಳಗೊಂಡ ಕ್ಯಾನ್ಸೀಲಿಯಂ ಸಿನಿಮಾ ಸೆಟ್ಟೇರಿದ್ದು ಮೂರು ವರ್ಷಗಳ ಹಿಂದೆ. ಸಮರ್ಥ್ ಈ ಚಿತ್ರದ ರೂವಾರಿ.‌ ಚಿತ್ರದ ಕಥೆ, ನಿರ್ದೇಶನದ‌‌ ಜವಾಬ್ದಾರಿ ಜೊತೆಗೆ ನಾಯಕ ನಟನಾಗಿ‌ ಮಿಂಚಿದ್ದಾರೆ. ಸಮರ್ಥ್ ಸಹೋದರ ಪ್ರೀತಂ ಕೂಡ ಈ ಚಿತ್ರದ ನಾಯಕ‌ನಟ. ಚಿತ್ರದಲ್ಲಿ ನಾಯಕಿಯರಾಗಿ ಖುಷಿ ಆಚಾರ್, ಅರ್ಚನಾ ನಟಿಸಿದ್ದಾರೆ.

ಇಬ್ಬರು‌ ನಾಯಕರ ಬದುಕಲ್ಲಿ ಅರಿವಿಲ್ಲದೆ ಘಟಿಸುವ ಘಟನೆಗಳು, ಅವರಿಬ್ಬರ‌ ನಡುವೆ ಏನೆಲ್ಲ ಸಮಸ್ಯೆಗಳನ್ನು ತಂದೊಡುತ್ತೆ, ಆ ಘಟನೆಗಳೆಲ್ಲ ಯಾಕೆ‌ ತಮಗೆ ಜರುಗುತ್ತಿವೆ, ಇದಕ್ಕೆಲ್ಲ‌ ಕಾರಣವೇನು ಎಂದು‌ ಹುಡುಕಲು ಹೊರಟಾಗ ತೆರೆದುಕೊಳ್ಳುವ ರೋಚಕ‌ ವಿಚಾರಗಳೇ ಸಿನಿಮಾದ ಎಳೆ. ಇದೆಲ್ಲವನ್ನು ಸೈನ್ಸ್ ಫಿಕ್ಷನ್ ಜಾನರ್ ನಡಿ‌ ರೋಚಕವಾಗಿ ಕಟ್ಟಿಕೊಡಲಾಗಿದೆ ಎನ್ನುತ್ತದೆ ಚಿತ್ರತಂಡ. ಒಟ್ಟಿನಲ್ಲಿ‌ ಒಂದು ಹೊಸ ಅನುಭವವನ್ನು ಈ ಸಿನಿಮಾ ಪ್ರೇಕ್ಷಕರಿಗೆ ಉಣಬಡಿಸಲಿದೆ ಎನ್ನುವುದು‌ ಚಿತ್ರತಂಡದ ಭರವಸೆಯ‌ ಮಾತುಗಳು.

ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದು ಖುಷಿಯಲ್ಲಿರುವ ಚಿತ್ರತಂಡ‌ ಡಿಸೆಂಬರ್ 10ಕ್ಕೆ ಸಿನಿಮಾ ತೆರೆಗೆ  ತರುತ್ತಿದೆ. ಸೀತಾರಾಮ ಶಾಸ್ತ್ರಿ ಪ್ರೊಡಕ್ಷನ್ ಹೌಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ರೇಷ್ಮಾ ರಾವ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದು, ಸುದರ್ಶನ್ ಜಿ.ಕೆ ಛಾಯಾಗ್ರಹಣ, ದ್ವೈಪಾಯಣ
ಸಿಂಘ ಸಂಗೀತ ನಿರ್ದೇಶನವಿದೆ‌.  ಸಮರ್ಥ್, ಪ್ರೀತಂ, ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ, ಖುಷಿ ಆಚಾರ್, ಜಗದೀಶ್ ಮಲ್ನಾಡ್ ಮುಂತಾದವರ ತಾರಾಗಣ ಚಿತ್ರದಲ್ಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗಾಳಿ ಮಳೆಗೆ ಕರೆಂಟ್ ಹೋದ್ರೆ ಈ ನಂಬರ್ ಗೆ ವಾಟ್ಸಾಪ್ ಮಾಡಿ

ಬೆಂಗಳೂರು: ಇನ್ನು ಮಳೆಗಾಲ ಶುರುವಾಯ್ತು. ಈ ಮಳೆಗಾಲ ಬಂತು ಅಂದ್ರೆ ಸಾಕು ಎಲ್ಲೆಡೆ ಮರಗಿಡಗಳು ಬೀಳುತ್ತವೆ, ಪವರ್ ಕಟ್ ಸಮಸ್ಯೆಗಳು ಕೂಡ ಕಾಡುತ್ತವೆ. ಈ ವೇಳೆ ಬೆಸ್ಕಾಂನವರು ಜನರ ಕೈಗೆ ಸಿಗುವುದು ಕಷ್ಟವಾಗಿದೆ. ಆದರೆ

ಹಣ ಉಳಿತಾಯಕ್ಕೆ RD ಅಥವಾ FD.. ಯಾವುದು ಬೆಟರ್..?

ಮನುಷ್ಯನ ಈಗಿನ ಜೀವನಶೈಲಿಯಿಂದ ಹಣದ ಅವಶ್ಯಕತೆ ಬಹಳ ಇದೆ. ಬೆಲೆ ಏರಿಕೆಯ ನಡುವೆ ಮುಂದಿನ ಜೀವನಕ್ಕಾಗಿ ಹಣ ಉಳಿಸಲೇಬೇಕಾಗಿದೆ‌. ಆದರೆ ಹಣ ಉಳಿಕೆಗೆ ಅಥವಾ ಇರುವ ಹಣಕ್ಕೆ ಬ್ಯಾಂಕ್ ನಲ್ಲಿ ಯಾವ ಮಾರ್ಗವನ್ನು ಬಳಸಬೇಕೆಂಬುದು

ರೇವಣ್ಣ ಜಾಮೀನು ಅರ್ಜಿ ಇಂದು ವಿಚಾರಣೆ : ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವ ರೇವಣ್ಣಗೆ ಜೈಲಾ..? ಬೇಲಾ..?

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಕಿಡ್ನ್ಯಾಪ್ ಕೇಸಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಬಂಧಿಸಲಾಗಿದೆ. 8ನೇ ತಾರೀಖಿನ ತನಕವೂ ವಶಕ್ಕೆ ಪಡೆದಿದ್ದರು. ಆದರೆ ಇಂದು ಅವರ

error: Content is protected !!