Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸತತ ಸೋಲುಗಳಿಂದ ಬೇಸರ : ಗುರುವಿನ ಮೊರೆ ಹೋದ ಕೊಹ್ಲಿ

---Advertisement---

 

ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕಿಂಗ್ ಕೊಹ್ಲಿ ಬಗ್ಗೆ ಈ ಮೊದಲಿದ್ದ ಕ್ರೇಜ್ ಉಳಿದಿಲ್ಲ. ಇತ್ತೀಚೆಗಂತು ಸಾಲು ಸಾಲು ಸೋಲುಗಳು ಬೆಂಬಿಡದೆ ಕಾಡುತ್ತಿವೆ. ಟೀಕೆಗಳು ಕೇಳಿ ಬರುತ್ತಿವೆ. ಈ ಬೆನ್ನಲ್ಲೇ ಪರಿಹಾರಕ್ಕಾಗಿ ತಮ್ಮ ಗುರುಗಳ ಮೊರೆ ಹೋಗಿದ್ದಾರೆ. ಕಳಪೆ ಫಾರ್ಮಾನಿಂದ ನೊಂದು ಬೆಂದಿರುವ ಕೊಹ್ಲಿ ಇದೀಗ ತಮ್ಮ ಗುರುವಿಗೆ ಶರಣಾಗಿದ್ದಾರೆ.

ವೈಕುಂಠ ಏಕಾದಶಿ ಪ್ರಯುಕ್ತ ಪತ್ನಿ ಅನುಷ್ಕಾ ಶರ್ಮಾ ಹಾಗೂ ವಮಿಕಾ, ಅಕಾಯ್ ಜೊತೆಗೆ ಉತ್ತರ ಪ್ರದೇಶದ ವೃಂದಾವನಕ್ಕೆ ಭೇಟಿ ನೀಡಿದ್ದಾರೆ. ವೃಂದಾವನದಲ್ಲಿ ಪ್ರೇಮಾನಂದ ಮಹಾರಾಜ ಗುರುಗಳಿಗೆ ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡಿದ್ದಾರೆ. ಆದರೆ ಈ ಬಾರಿ ಕೊಹ್ಲಿಯನ್ನು ಕಂಡು ಗುರಿಗಳೇ ಭಾವುಕರಾಗಿದ್ದು ಆಶ್ಚರ್ಯವಾಗಿತ್ತು.

ಗುರುಗಳ ಭೇಟಿ ಬಳಿಕ ಮಾತನಾಡಿದ ಅನುಷ್ಕಾ ಶರ್ಮಾ, ಗುರುಗಳು ನಡೆಸಿಕೊಡುವ ಸತ್ಸಂಗ ಕಾರ್ಯಕ್ರಮ ಪವಾಡದ ರೀತಿ ತಮ್ಮ ಸಮಸ್ಯೆ ಪರಿಹಾರದ ಕಥೆ ಹೇಳಿದ್ರು. ಈ ಹಿಂದೆ ನಾವೂ ಬಂದಿದ್ದಾಗ ಮನಸ್ಸಿನಲ್ಲಿ ಹಲವು ಪ್ರಶ್ನೆಗಳಿದ್ದವು. ನಿಮ್ಮ ಬಳಿ ಆ ಪ್ರಶ್ನೆಗಳನ್ನ ಕೇಳಬೇಕು ಎಂದುಕೊಂಡಿದ್ದೆವು. ಆದರೆ ಅಲ್ಲಿ ಕೂತಿದ್ದವರು ಕೂಡ ನಾನು ಕೇಳಬೇಕು ಎಂದುಕೊಂಡಿದ್ದ ಪ್ರಶ್ನೆಯನ್ನೇ ಕೇಳಿದ್ದರು‌. ಈಗ ಮತ್ತೆ ಭೇಟಿ ನೀಡಬೇಕು ಎಂದು ನಾನಯ ಅಂದುಕೊಂಡಾಗ ಮನಸ್ಸಿನಲ್ಲಿಯೇ ಮಾತನಾಡಿಕೊಳ್ಳುತ್ತಿದ್ದೆ ಎಂದರು. ಆದರೆ ಇದೇ ವೇಳೆ ಗುರುಗಳು ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದರು.

ನಾವೂ ಸಾಧನೆಯನ್ನು ಮಾಡು ಜನರಿಗೆ ಸಂತೋಷ ನೀಡುತ್ತಿದ್ದೇವೆ‌‌. ಆದರೆ ಈಗ ಕ್ರಿಕೆಟ್ ಆಟದ ಮೂಲಕ ಇಡೀ ದೇಶಕ್ಕೆ ಸಂತೋಷವನ್ನು ನೀಡುತ್ತಿದ್ದಾನೆ. ಈತ ಗೆದ್ದರೆ ಇಡೀ ಭಾರತದಲ್ಲಿ ಪಟಾಕಿ ಸಿಡಿಸಿ, ಸಂಭ್ರಮಿಸುತ್ತಾರೆ. ಇಡೀ ಭಾರತದಲ್ಲು ಆನಂದ ನೆಲೆಸುತ್ತದೆ. ದೇವರು ಆಶೀರ್ವದಿಸಿದರೆ ಈತನೊಂದಿಗೆ ಇಡೀ ಭಾರತ ಸಂಭ್ರಮಿಸುತ್ತದೆ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment