Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕೊಡುತ್ತೆ 3 ಖರ್ಜೂರ..!

---Advertisement---

ಹೆಣ್ಣಾಗಲೀ.. ಗಂಡಾಗಲಿ ತಲೆಯಲ್ಲಿ ಕೂದಲಿದ್ದರೇನೆ ಸೌಂದರ್ಯ ಚೆನ್ನಾಗಿ ಕಾಣುವುದು. ಅಂದ ಹೆಚ್ಚಾಗುವುದು. ಶಾಲೆ,‌ ಕಾಲೇಜು ಓದುವಾಗ ಅಂದ ಸಂಪಾಗಿಯೇ ಇರುತ್ತದೆ. ಯಾಕಂದ್ರೆ ಒತ್ತಡಗಳಿರಲ್ಲ, ಜವಾಬ್ದಾರಿಯ ಭಾರ ಇರಲ್ಲ.. ಅಮ್ಮನ ಹಾರೈಕೆ, ಆರೋಗ್ಯಯುತ ಆಹಾರ ತಿಂದು ಚೆನ್ನಾಗಿಯೇ ಇರುತ್ತೇವೆ. ಆದರೆ ಕೆಲಸಕ್ಕೆಂದು ಬಂದ ಅದೆಷ್ಟೋ ಹೆಣ್ಣು ಮಕ್ಕಳ ಮನದ ನೋವು ಇದು. ಮೊದಲೆಲ್ಲಾ ದಪ್ಪ ಇದ್ದ ತಲೆ ಕೂದಲು ಈಗ ಎಲ್ಲಾ ಉದುರಿ ಹೋಗಿದೆ ಎಂದು.

ನಮ್ಮ ಆರೋಗ್ಯವನ್ನ ನಾವೇ ಕಾಪಾಡಿಕೊಳ್ಳಬೇಕು. ಅದರಲ್ಲೂ ತಲೆ ಕೂದಲ್ಲನ್ನು ಸಂಪಾಗಿ ಬೆಳೆಸಬೇಕೆಂದರೆ ಒಂದಷ್ಟು ಆರೋಗ್ಯಯುತ ಟಿಪ್ಸ್ ಅನ್ನು ಫಾಲೋ ಮಾಡಲೇಬೇಕಾಗುತ್ತದೆ. ಆಗ ಕೂದಲಿನ ಹಾರೈಕೆಯೂ ಚೆನ್ನಾಗಿ ಆಗಲಿದೆ. ದಟ್ಟವಾದ, ಸುಂದರವಾದ ಕೂದಲು ನಿಮ್ಮದಾಗುತ್ತದೆ. ಅದಕ್ಕೆ ನೀವೂ ಮಾಡಬೇಕಾಗಿರೋದು ಇಷ್ಟೆ. ಖರ್ಜೂರದ ಬಳಕೆ. ಹೇಗೆ ಎಂಬುದನ್ನ ಹೇಳ್ತೀವಿ ನೋಡಿ.

* ಖರ್ಜೂರದಲ್ಲಿ ವಿಟಮಿನ್ ಬಿ ಅತ್ಯಧಿಕವಾಗಿ ಅಡಗಿದೆ. ಹೀಗಾಗಿ ಇದು ಮನುಷ್ಯನ ದೇಹಕ್ಕೆ ಬೇಕಾದ ಪೌಷ್ಠಿಕಾಂಶವನ್ನು ನೀಡುತ್ತದೆ.

* ತಲೆ ಕೂದಲು ಉದುರುತ್ತಿದ್ದರೆ ಅದಕ್ಕೆ ವಿಟಮಿನ್ ಬಿ ಅಂಶವೂ ಕಡಿಮೆಯಾಗಿರುತ್ತದೆ. ಖರ್ಜೂರ ತಿನ್ನುವುದರಿಂದ ಅದಕ್ಕೆ ಪರಿಹಾರ ಸಿಗಲಿದೆ.

* ದಿನಕ್ಕೆ ಮೂರು ಖರ್ಜೂರ ತಿಂದರು ಸಾಕು ವಿಟಮಿನ್ ಬಿ ಕೊರತೆಯನ್ನು ನಿವಾರಿಸುತ್ತದೆ.

* ಬರೀ ಕೂದಲಿನ ಹಾರೈಕೆ ಮಾತ್ರವಲ್ಲ ಇದರಿಂದ ಚರ್ಮದ ಹಾರೈಕೆಯೂ ಆಗುತ್ತದೆ.

* ಖರ್ಜೂರಗಳಲ್ಲಿ ಚರ್ಮದ ಹಾರೈಕೆಗೆ ಬೇಕಾದ ವಿಟಮಿನ್ ಸಿ ಅಂಶವೂ ಇದೆ. ಹೀಗಾಗಿ ಖರ್ಜೂರಗಳನ್ನು ಪ್ರತಿನಿತ್ಯ ಸೇವಿಸಿ. ಇದರಿಂದ ಚರ್ಮದ ಮೇಲೆ ಆದಂತ ಕಲೆಗಳು ಕಡಿಮೆಯಾಗುತ್ತವೆ. ದೇಹದ ಚರ್ಮ ಹೊಳೆಯುತ್ತದೆ. ಪ್ರತಿ ದಿನ ಮೂರು ಕರ್ಜೂರಗಳನ್ನು ತಿಂದರೆ ಸಾಕು‌.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment