Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನನ್ನ ಬದುಕಿನಲ್ಲೇ ಅಂತ ನಿರ್ಧಾರ ತೆಗೆದುಕೊಳ್ಳಲ್ಲ : ಬಿಜೆಪಿ ಸೇರ್ಪಡೆ ಬಗ್ಗೆ ಎಸ್ ಆರ್ ಪಾಟೀಲ್ ಸ್ಪಷ್ಟನೆ..!

Facebook
Twitter
Telegram
WhatsApp

ಬಾಗಲಕೋಟೆ : ವಿಧಾನ ಪರಿಷತ್ ವಿಪಕ್ಷ ನಾಯಕ ಬಿಜೆಪಿಗೆ ಸೇರುತ್ತಾರೆ ಅಂತ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ಇದೀಗ ಎಸ್ ಆರ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ನನ್ನ ಬದುಕಿನಲ್ಲೇ, ನನ್ನ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದ ನಿರ್ಧಾರಗಳನ್ನ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ ಈಶ್ವರಪ್ಪ ಅವರ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ಈಶ್ವರಪ್ಪ ಬಿಜೆಪಿ ಸಿದ್ಧಾಂತಕ್ಕೆ ತಕ್ಕಂತೆ ಅವರ ಪಕ್ಷದಲ್ಲಿದ್ದಾರೆ. ಇಬ್ಬರೂ ಯಾವುದೇ ರೀತಿಯಲ್ಲೂ ವೈರಿಗಳಲ್ಲ. ಇಬ್ಬರು ಜನಸೇವೆಗೆ ಬಂದಿರೋದು. ನಾವೂ ಕಾಂಗ್ರೆಸ್ ನಲ್ಲಿದ್ದುಕೊಂಡು ಮಾಡ್ತೇವೆ. ಅವರು ಬಿಜೆಪಿಯಲ್ಲಿದ್ದುಕೊಂಡು ಸೇವೆ ಮಾಡ್ತಾರೆ.

ಅಭಿವೃದ್ಧಿ ಕೆಲಸ ಮಾಡುವಾಗ ಜೊತೆಯಾಗಿ ಕೆಲಸ ಮಾಡುತ್ತೇವೆ. ಚುನಾವಣೆ ಸಂದರ್ಭದಲ್ಲಿ ಅವರ ಚಡ್ಡಿ ಅವರನ್ನ ಹಿಂಬಾಲ ಮಾಡಿದ್ರೆ ನಮ್ಮ ಚಡ್ಡಿ ನಮ್ಮ ಹಿಂಬಾಲ ಮಾಡುತ್ತೆ ಅಷ್ಟೇ. ಚುನಾವಣೆ ಜನರ ಮೇಲೆಯೇ‌ ನಿಂತಿರುತ್ತೆ. ಅವರಿಗೆ ಆಶೀರ್ವಾದ ಮಾಡಿದರೆ ಅವರು ಇರುತ್ತಾರೆ. ನಮಗೆ ಆಶೀರ್ವಾದ ಮಾಡಿದರೆ ನಾವಿರುತ್ತೇವೆ.

45 ವರ್ಷ ಅಖಂಡವಾಗಿ ಒಂದು ಪಕ್ಷದಲ್ಲಿ ಇದ್ದು, ಒಂದು ಪಕ್ಷದ ಸಿದ್ಧಾಂತವನ್ನು ನಂಬಿಕೊಂಡು ಬಂದಿದ್ದೇನೆ. ಸೈದಾಂತಿಕ ನಿಲುವಿನಲ್ಲಿ ನಮ್ಮ ಮತ್ತು ಅವರ ನಡುವೆ ಒಂದಷ್ಟು ಭಿನ್ನಾಭಿಪ್ರಾಯಗಳಿವೆ. ನನ್ನ ಪಕ್ಷ ಅವಕಾಶ ಕೊಟ್ಟಿದೆ, ಅನೇಕ ಸ್ಥಾನಮಾನಗಳನ್ನು ಕೊಟ್ಟಿದೆ. ಜನಸೇವೆ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ, ಇಂಥ ಸಮಯದಲ್ಲಿ ಕೇವಲ ಟಿಕೆಟ್ ತಪ್ಪಿದ್ದಕ್ಕೆ ಆ ಪಕ್ಷಕ್ಕೆ ಈ ಪಕ್ಷಕ್ಕೆ ಹೋಗುವುದು ನಮ್ಮ ಜಾಯಮಾನಕ್ಕೆ ಒಪ್ಪುವಂಥದಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ವಾಲ್ಮೀಕಿ ನಿಗಮದ ನೌಕರನ ಆತ್ಮಹತ್ಯೆಗೆ ಟ್ವಿಸ್ಟ್ : 85 ಕೋಟಿ ಅವ್ಯವಹಾರದ ವಾಸನೆ..?

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟ್ ಸೂಪರಿಂಟೆಂಡೆಂಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಅವ್ಯವಹಾರದ ವಾಸನೆ ಬಡಿಯುತ್ತಿದೆ. 50 ವರ್ಷ ಚಂದ್ರಶೇಖರ್ , ಮೂಲತಃ ಶಿವಮೊಗ್ಗದವರು. ಬೆಂಗಳೂರಿನ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ

ಪ್ರಜ್ವಲ್ ರೇವಣ್ಣ ಇಷ್ಟು ದಿನ ಡಿಪ್ರೆಶನ್ ಹೋಗಿಬಿಟ್ಟಿದ್ರಂತೆ..!

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ಚಲ್ ರೇವಣ್ಣ ಇಂದು ವಿಡಿಯೋ ಮೂಲಕ ಪತ್ತೆಯಾಗಿದ್ದಾರೆ. ಎಸ್ಐಟಿ ಎಷ್ಟೇ ನೋಟೀಸ್ ಕೊಟ್ಟರು ಅದಕ್ಕೂ ಅವರ ವಕೀಲರೇ ಉತ್ತರಿಸಿದ್ದರು. ಇಂದು ವಿದೇಶದಲ್ಲಿದ್ದುಕೊಂಡೇ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ

ವಕೀಲರು ಮತ್ತು ನ್ಯಾಯಾಧೀಶರು ಒಂದೇ ನಾಣ್ಯದ ಎರಡು ಮುಖಗಳು : ಶಮೀರ್ ಪೀರ್ ಸಾಬ್ ಅಭಿಮತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817   ಸುದ್ದಿಒನ್, ಚಳ್ಳಕೆರೆ, ಮೇ. 27 : ವಕೀಲರು ಮತ್ತು ನ್ಯಾಯಾಧೀಶರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ವಕೀಲರು

error: Content is protected !!