Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಳ್ಳಿ ಹೈದ ಪ್ಯಾಟೇಗ್ ಬಂದ ರಾಜೇಶ್ ಮನೆಗೆ ಅಪ್ಪು ನೆರವಾಗಿದ್ದವರು..!

Facebook
Twitter
Telegram
WhatsApp

 

ಶರಣರ ಗುಣ ಸಾವಿನಲ್ಲಿ ಕಾಣ ಅನ್ನೋ ಒಂದು ಮಾತಿದೆ. ಆ ಮಾತು ಸದ್ಯದ ಪರಿಸ್ಥಿತಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗೆ ಅಪ್ಪಟವಾಗಿ ಒಪ್ಪುತ್ತೆ. ಯಾಕಂದ್ರೆ ಗೊತ್ತಿಲ್ಲದೆ ಅದೆಷ್ಟು ಸಹಾಯವನ್ನ ಮಾಡಿದ್ದಾರೆ ಅನ್ನೋದು ಒಂದೊಂದಾಗಿ ಈಗ ತೆರೆದುಕೊಳ್ಳುತ್ತಿದೆ. ಬಲಗೈಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬಂತಿದ್ದ ಅಪ್ಪು ಸಹಾಯಗಳು ಇದೀಗ ಅವರ ನಿಧನದ ಬಳಿಕ ಒಂದೊಂದಾಗಿಯೇ ಹೊರ ಬರುತ್ತಿವೆ.

ಹಳ್ಳಿ ಹೈದ ಪ್ಯಾಟೆಗ್ ಬಂದ್ ಖ್ಯಾತಿಯ ರಾಜೇಶ್ ಅವರ ಸಂಸಾರ ಸಾಗಿಸಲು ಬದುಕಿಲ್ಲ. ಅವರ ಸಂಸಾರ ನಡೆಯೋದು ಕಷ್ಟವಾಗಿದೆ. ಇಂಥ ಸಮಯದಲ್ಲಿ ದಿವಂಗತ ರಾಜೇಶ್ ಅವರ ತಂದೆಗೆ ಅನಾರೋಗ್ಯ ಕಾಡಿದಾಗ ಸಹಾಯಕ್ಕೆ ಬಂದದ್ದು ಇದೇ ಅಪ್ಪು ಕೊಟ್ಟ ಚಿನ್ನದ ಸರದ ಉಡುಗೊರೆ.

ಹೌದು ಜಂಗಲ್ ಜಾಕಿ ಸಿನಿಮಾದ ಚಿತ್ರೀಕರಣದ ವೇಳೆ ಅಪ್ಪು ಈ ಚಿನ್ನದ ಸರವನ್ನು ರಾಜೇಶ್ ಗೆ ನೀಡಿದ್ದರಂತೆ. ತಂದೆಗೆ ಹುಷಾರಿಲ್ಲದಿದ್ದಾಗ ಆ ಸರವನ್ನ ಅಡವಿಟ್ಟು ಆರೋಗ್ಯ ಸರಿ ಮಾಡಿಕೊಂಡಿದ್ದರಂತೆ. ಆದ್ರೆ ಮೊನ್ನೆ ಮೊನ್ನೆಯಷ್ಟೇ ಈ ಸರವನ್ನ ಕಾಂಗ್ರೆಸ್ ಯುವ ಕಾರ್ಯದರ್ಶಿ ನಿಖಿಲ್ ಅವರು ಬಿಡಿಸಿಕೊಟ್ಟಿದ್ದರಂತೆ. ಸರ ಬಿಡಿಸಿಕೊಟ್ಟ ಮೂರೇ ದಿನಕ್ಕೆ ಅಪ್ಪು ನಿಧನದ ಸುದ್ದಿ ಕೇಳಿ ಬಂದಿದೆ.

ಅಪ್ಪು ಅವರ ಸರವನ್ನ ಕಳೆದುಕೊಂಡದ್ದಕ್ಕೆ ನಮಗೆ ನೋವು ತಡೆಯಲಾಗಲಿಲ್ಲ. ಇನ್ನು ಅವರೇ ಇಲ್ಲವೆಂದರೆ ನಂಬೋದು ತಾನೇ ಹೇಗೆ ಎಂದು ಹಾಡಿ ಜನ ನೋವು ತೋಡಿಕೊಂಡಿದ್ದಾರೆ. ಅಪ್ಪು ಸಮಾಧಿ ನೋಡಿ ಕಣ್ಣೀರು ಸುರಿಸಿ, ಸಹಾಯವನ್ನ ನೆನೆದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!