Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಅತಿಯಾದ ಕೆಮ್ಮು ಕಾಡುತ್ತಿದ್ದರೆ ಇವುಗಳ ಸೇವನೆ ಮಾಡಿ ನೋಡಿ

---Advertisement---

ಕೆಲವೊಬ್ಬರಿಗೆ ಕೆಮ್ಮು ಹುಟ್ಟಿದರೆ ಕಡಿಮೆ ಆಗುವುದೇ ಇಲ್ಲ. ಕೆಮ್ಮಿ ಕೆಮ್ಮಿ ದೇಹದ ನರಗಳೆಲ್ಲ ಇನ್ನೇನು ಕಿತ್ತು ಬಂತೇನೋ ಎಂಬಷ್ಟು ಫೀಲ್ ಆಗುತ್ತದೆ. ಮಾತ್ರೆ, ಟಾನಿಕ್ ತೆಗೆದುಕೊಂಡರು ಈ ಕೆಮ್ಮು ಮಾತ್ರ ಕಡಿಮೆಯಾಗಲ್ಲ. ಅಂಥ ಕೆಮ್ಮಿಗೆ ಇಲ್ಲೊಂದಿಷ್ಟು ಟಿಪ್ಸ್ ಇದೆ ಫಾಲೋ ಮಾಡಿ ನೋಡಿ.

* ಕೆಮ್ಮು ಮತ್ತು ಗಂಟಲು ನೋವು ನಿವಾರಿಸುವುದಕ್ಕೆ ನೀವೂ ಜೇನುತುಪ್ಪವನ್ನು ಬಳಕೆ ಮಾಡಿಕೊಳ್ಳಬಹುದು. ಶುಂಠಿ ರಸದೊಂದಿಗೆ ಜೇನುತುಪ್ಪ ಸೇವಿಸುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.

* ಅನಾನಸ್ ತಿನ್ನುವುದರಿಂದಾನೂ ಕೆಮ್ಮು ಕಡಿಮೆಯಾಗುತ್ತದೆ‌. ಅನಾನಸ್ ನಲ್ಲಿ ಬ್ರೋಮೆಲಿನ್ ಅಂಶವೊಂದು ಕಂಡು ಬರುತ್ತದೆ. ಇದು ಕೆಮ್ಮನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ.

* ಪುದೀನ ಕೂಡ ಕೆಮ್ಮನ್ನು ಕಡಿಮೆ ಮಾಡುತ್ತದೆ. ಕೆಮ್ಮು ಹೆಚ್ಚಾಗಿದ್ದರೆ ಪುದೀನಾ ಟೀ ಮಾಡಿಕೊಂಡು ಕುಡಿಯಬಹುದು. ಪುದೀನಾ ಎಲೆಗಳನ್ನು ಬಿಸಿ ನೀರಿಗೆ ಹಾಕಿ ಕುದಿಸಿ, ಅದರ ಹಬೆ ತೆಗೆದುಕೊಳ್ಳಬಹುದು.

* ನಿಮಗೆಲ್ಲಾ ಗೊತ್ತಿರುವಂತೆ ದೊಡ್ಡ ಪತ್ರೆ ಕೆಮ್ಮಿಗೆ ರಾಮಬಾಣವಿದ್ದಂತೆ. ಕೆಮ್ಮು ಹಾಗೂ ಕಫದ ನಿವಾರಣೆಗೆ ದೊಡ್ಡ ಪತ್ರೆ ರಾಮಬಾಣವಿದ್ದಂತೆ. ದೊಡ್ಡಪತ್ರೆಯನ್ನು ಜಜ್ಜಿ ಆ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ. ಇದು ಆಂಟಿಬಯೋಟಿಕ್ ಗುಣಗಳಿಂದ ಸಮೃದ್ಧವಾಗಿದೆ.

* ಶುಂಠಿ ಕೆಮ್ಮು ಹೋಗಲಾಡಿಸಲು ಬೆಸ್ಟ್ ಮನೆ ಮದ್ದಾಗಿದೆ. ಇದರಲ್ಲಿ ಔಷಧೀಯ ಗುಣಗಳು ಸಂಪನ್ನವಾಗಿದೆ. ಶುಂಠಿಯೂ ನೈಸರ್ಗಿಕ ಉರಿಯೂತ ನಿವಾರಕವಾಗಿದೆ. ಶುಂಠಿ ಚಹಾ ಕುಡಿಯುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

* ಒಂದು ವೇಳೆ ಕೆಮ್ಮು ದೀರ್ಘಕಾಲದವರೆಗೂ ನಿಮ್ಮನ್ನು ಕಾಡುತ್ತಿದ್ದರೆ ಅರಿಶಿನದ ನೀರು ಬೆಸ್ಟ್ ಮೆಡಿಸಿನ್. ಅರಿಶಿನವು ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೆಮ್ಮು ಕಡಿಮೆ ಮಾಡಲು ಅರಿಶಿನದ ಚಹಾ ಅಥವಾ ನೀರು ಕುಡಿಯಿರಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...