Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದರ್ಶನ್ ಅವರಿಗೆ ಕಿಡ್ನಿ ಸಮಸ್ಯೆಯೂ ಆಗ್ತಿದೆ : ಹೈಕೋರ್ಟ್ ನಲ್ಲಿ ನಾಗೇಶ್ ಹೇಳಿದ್ದೇನು..?

---Advertisement---

ಬೆಂಗಳೂರು: ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು, ಹಲವು ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಮನೆಯಿಂದ ಕೊಟ್ಟ ಐದು ಕೆಜಿ ಬ್ಯಾಗನ್ನು ಕೂಡ ಎತ್ತಲು ಆಗದಷ್ಟು ಬೆನ್ನು ನೋವು ದರ್ಶನ್ ಅವರದ್ದು. ಈಗಾಗಲೇ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಬೆನ್ನು ನೋವಿನ ಸಮಸ್ಯೆ ಇರುವುದು ಕೂಡ ದೃಢವಾಗಿದೆ. ಆಪರೇಷನ್ ಮಾಡಿಸಲೇಬೇಕೆಂದು ಸೂಚನೆ ನೀಡಿದ್ದಾರೆ. ಇಂದು ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯ ವೇಳೆಯೂ ವಕೀಲರು ಅದನ್ನೇ ಪ್ರಸ್ತಾಪಿಸಿದರು.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ಇಂದು SPP ಪ್ರಸನ್ನ ಕುಮಾರ್ ಅವರು ವಿಮ್ಸ್ ಆಸ್ಪತ್ರೆಯ ದರ್ಶನ್ ಅವರ ಸ್ಕ್ಯಾನಿಂಗ್ ರಿಪೋರ್ಟ್ ಅನ್ನು ನ್ಯಾಯಾಧೀಶರಿಗೆ ನೀಡಿದರು. ಈ ವೇಳೆ ನ್ಯಾಯಾಧೀಶರಿಗೆ ದರ್ಶನ್ ಪರ ವಕೀಲರಾದ ನಾಗೇಶ್ ಅವರು ಪರಿಸ್ಥಿತಿಯನ್ನು ತಿಳಿಸುವ ಪ್ರಯತ್ನ ಮಾಡಿದರು. ದರ್ಶನ್ ಅವರಿಗೆ ಈಗಾಗಲೇ MRI ಆಗಿದೆ. ಸಿಟಿ ಸ್ಕ್ಯಾನ್ ಕೂಡ ಆಗಿದೆ. ಅವರ ಸ್ಪೈನಲ್ ಕಾರ್ಡ್ ಗೆ ರಕ್ತಚಲನೆ ಆಗ್ತಾ ಇಲ್ಲ. ಡಿಸ್ಕ್ ಕೂಡ ಪ್ರಾಬ್ಲಮ್ ಆಗ್ತಾ ಇದೆ. ಕಿಡ್ನಿ ಸಮಸ್ಯೆಯೂ ಆಗ್ತಾ ಇದೆ. ತಕ್ಷಣವೇ ಆಪರೇಷನ್ ಮಾಡಿಸಬೇಕು. ಇಲ್ಲವಾದಲ್ಲಿ ಪ್ಯಾರಾಲಿಸಿಸ್ ಅಟ್ಯಾಕ್ ಆಗಲಿದೆ ಎಂದಿದ್ದಾರೆ.

ಈ ಸಮಸ್ಯೆಯಿಂದ ದರ್ಶನ್ ಅವರಿಗೆ ಮದ್ಯಂತರ ಜಾಮೀನು ನೀಡಲು ನಾಗೇಶ್ ಅವರು ಮನವಿ ಮಾಡುತ್ತಿದ್ದಂತೆ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ರಿಪೋರ್ಟ್ ನೋಡಿದ ಜಡ್ಜ್, ಬೆಂಗಳೂರು ಅಥವಾ ಬಳ್ಳಾರಿಯಲ್ಲಿ ಚಿಕಿತ್ಸೆ ನೀಡಬಹುದು ಎಂಬಂತಿದೆ. ವಕೀಲರಿಗೆ ಹಾಗೂ SPP ಅವರಿಗೆ ಕಾಪಿ ನೀಡಲು ತಿಳಿಸುತ್ತೇನೆ. ನಾಳೆ ನೋಡೋಣಾ ಎಂದು ವಿಚಾರಣೆ ಮುಂದೂಡಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment