Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಏರುತ್ತಲೆ ಇದೆ ಚಿನ್ನದ ಬೆಲೆ: ಬೆಂಗಳೂರಿನಲ್ಲಿ ಲಕ್ಷ ದಾಟಿದ ಬೆಳ್ಳಿ..!

Facebook
Twitter
Telegram
WhatsApp

ಬರೀ 10 ಗ್ರಾಂ ಚಿನ್ನ ತೆಗೆದುಕೊಳ್ಳಬೇಕು ಅಂದ್ರೆ ಎಂಭತ್ತು ಸಾವಿರಕ್ಕೂ ಹಡಚ್ಚು ಹಣ ಕೊಡಬೇಕು ಅಂದಾಗ ಮಧ್ಯಮ ವರ್ಗದವರು, ಬಡವರು ಏನು ಯೋಚನೆ ಮಾಡಲು ಸಾಧ್ಯ. ಪ್ರತಿದಿನ ಹಾಕಿಕೊಳ್ಳುವ ನೆಕ್ ಚೈನ್ ಕೂಡ 10 ಗ್ರಾಂ ಇಲ್ಲದೆ ಬರಲ್ಲ. ಹೀಗಿರುವಾಗ ಚಿನ್ನದ ಕನಸು ಕಾಣುವುದಕ್ಕೆ ಅಸಾಧ್ಯವೇ ಸರಿ ಎಂಬಂತೆ ಆಗಿದೆ. ದಿನೇ ದಿನೇ ಚಿನ್ನದ ಬೆಲೆ ಗಗನದತ್ತ ಮುಖ ಮಾಡುತ್ತಿದೆ. ಇಳಿಕೆಯಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡರೆ ಅಸಾಧ್ಯವೆನಿಸಿದೆ. ಇಂದು ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ ಹತ್ತು ಗ್ರಾಂ ಚಿನ್ನ ಎಂಭತ್ತು ಸಾವಿರದ ಗಡಿದಾಟಿ ಆಗಿದೆ. ಬೆಳ್ಳಿ ಬೆಲೆಯೂ ಇಳಿಕೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಕೆಜಿಗೆ ಲಕ್ಷ ರೂಪಾಯಿ ಆಗಿದೆ.

ಬೆಂಗಳೂರು ನಗರದಲ್ಲಿ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನ 73,010 ರೂಪಾಯಿ ತಲುಪಿದೆ. 24 ಕ್ಯಾರೆಟ್ ಚಿನ್ನದ ಬೆಲೆ 79,650 ರೂಪಾಯಿ ತಲುಪಿದೆ. 18 ಕ್ಯಾರೆಟ್ ಚಿನ್ನದ ಬೆಲೆ 59,740 ರೂಪಾಯಿ ಆಗಿದೆ. ಚಿನ್ನದ ದರ ನೋಡಿ, ಮಹಿಳಾ ಮಣಿಯರ ತಲೆ ಗಿರಗಿರ ಎಂದು ತಿರುಗುತ್ತಿದೆ. ಚಿನ್ನವನ್ನು ಕೊಳ್ಳಬೇಕೋ ಅಥವಾ ಆರ್ಟಿಫಿಯಲ್ ಗೋಲ್ಡ್ ತಗೊಂಡು ಸಮಾಧಾನ ಮಾಡುಕೊಳ್ಳಬೇಕೋ ತಿಳಿಯದಾಗಿದೆ.

ಚಿನ್ನದ ಬೆಲೆ ಮಾತ್ರ ಅಲ್ಲ ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗುತ್ತಲೆ ಇದೆ. ಇಂದು ಕೆಜಿ ಬೆಳ್ಳಿಗೆ ಒಂದು ಲಕ್ಷ ರೂಪಾಯಿ ಆಗಿದೆ. ಬೆಳ್ಳಿ ಆಭರಣದಲ್ಲಿ ಆಭರಣಗಳ ತಯಾರಿಕೆಯೂ ಜಾಸ್ತಿಯಾಗಿರುವ ಕಾರಣದಿಂದಾನೂ ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎಂಬುದು ತಜ್ಞರ ಮಾತಾಗಿದೆ. ಈಗ ಮದುವೆ ಶುಭ ಸಮಾರಂಭಗಳಿರುವ ಕಾರಣ ಚಿನ್ನ ಬೆಳ್ಳಿ ಬೆಲೆಯಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ| ನಿರಾಶ್ರಿತರ ಬಾಳಲ್ಲಿ  ಬೆಳಕಾಗಿರುವ ಜಿಲ್ಲಾಸ್ಪತ್ರೆಯ ನೇತ್ರತಜ್ಞ ಡಾ.ಪ್ರದೀಪ್

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 22 : ಹಲವು ವರ್ಷಗಳಿಂದ ಸ್ವಯಂಪ್ರೇರಿತವಾಗಿ ತಾಲ್ಲೂಕಿನ ಗೊನೂರುನಲ್ಲಿರುವ ನಿರಾಶ್ರಿತರ  ಪರಿಹಾರ ಕೇಂದ್ರಕ್ಕೆ ಕಾಲಕಾಲಕ್ಕೆ  ಜಿಲ್ಲಾಸ್ಪತ್ರೆಯ ನೇತ್ರತಜ್ಞ ಡಾ ಪ್ರದೀಪ್ ಬಿ .ಜಿ, ನೇತ್ರಾಧಿಕಾರಿ  ಕೆ. ಸಿ.ರಾಮು ಹಾಗೂ

ಬಾರೀ ಮಳೆ: ನಾಳೆ ಮತ್ತೆ ಬೆಂಗಳೂರು ಶಾಲೆಗಳಿಗೆ ರಜೆ

  ಬೆಂಗಳೂರು: ಮಳೆರಾಯ ಅದ್ಯಾಕೋ ಏನೋ ಬಿಡುವನ್ನೇ ಕೊಡದಂತೆ ಸುರಿಯುತ್ತಿದ್ದಾನೆ. ಅತ್ತ ಬೆಳೆಯನ್ನ ಕೊಯ್ಲು ಮಾಡುವ ಸಮಯ ಅದು ಆಗ್ತಿಲ್ಲ. ಇತ್ತ ಗಿಡಗಳಿಗೆ ಔಷಧಿ ಹೊಡೆಯುವ ಸಮಯ. ಅದಕ್ಕೂ ಸಮಯ ಸಾಕಾಗುತ್ತಿಲ್ಲ. ಆದರೆ ಮಳೆರಾಯ

ಸಿಪಿ ಯೋಗೀಶ್ವರ್ ಗೆ ಕಾಂಗ್ರೆಸ್ ನಿಂದ ಆಫರ್ ಬಂದಿದ್ಯಾ..? ಸ್ವತಃ ಸಿಪಿವೈ ಹೇಳಿದ್ದೇನು..?

ರಾಮನಗರ: ಚನ್ನಪಟ್ಟಣ ಕ್ಷೇತ್ರ ಸದ್ಯ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಎರಡು ಪಕ್ಷಗಳಿಂದ ಯಾರು ನಿಲ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದ್ಯ ಕಾಂಗ್ರೆಸ್ ನಿಂದ ಸಿಪಿ ಯೋಗೀಶ್ವರ್ ಗೆ ಆಫರ್ ಹೋಗಿದೆ ಎನ್ನಲಾಗಿದೆ. ಝ ಎಲ್ಲಾ

error: Content is protected !!