Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಉಳಿದ ಆನೆಗಳ ಬಗ್ಗೆ ನಿಮಗೆಷ್ಟು ಗೊತ್ತು..?

---Advertisement---

ಮೈಸೂರು: ಇಂದು ವಿಶ್ವ ವಿಖ್ಯಾತ ದಸರಾ ಕಾರ್ಯಕ್ರಮ ಬಹಳ ಅದ್ದೂರಿಯಿಂದ ಜರುಗುತ್ತಿದೆ. ಈ ಬಾರಿ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಅಭಿಮನ್ಯು ಹೊರಲಿದ್ದಾನೆ. ಅಭಿಮನ್ಯುಗೆ ಈಗ 58 ವರ್ಷ. ಅಭಿಮನ್ಯು ಜೊತೆಗೆ ಇತರೆ ಆನೆಗಳು ಕೂಡ ಹೆಜ್ಜೆ ಹಾಕಲಿವೆ. ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಅಭಿಮನ್ಯು ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದರೆ, ಅದರ ಹಿಂದೆ ಸಾಲಾಗಿ ಉಳಿದ ಆನೆಗಳು ಮಧುಮಕ್ಕಳಂತೆ ನಡೆಯುತ್ತವೆ‌.

 

ದಸರಾದಲ್ಲಿ ಒಟ್ಟು 14 ಆನೆಗಳು ದಸರಾದಲ್ಲಿ ಪಾಲ್ಗೊಳ್ಳಲಿಬೆ. ಆದರೆ 9 ಆನೆಗಳು ಮಾತ್ರ ಅಭಿಮನ್ಯು ಜೊತೆಗೆ ಸಾಥ್ ನೀಡಲಿವೆ. ಅದರಲ್ಲಿ ಅಭಿಮನ್ಯು ನೇತೃತ್ವ ವಹಿಸಲಿದ್ದು, ಲಕ್ಷ್ಮೀ, ಗೋಪೊ, ವರಲಕ್ಷ್ಮೀ, ಪ್ರಶಾಂತ, ಧನಂಜಯ, ಸುಗ್ರೀವ, ಭೀಮ, ದೊಡ್ಡ ಹರವೆ ಲಕ್ಷ್ಮೀ, ಕಂಜನ್, ಹಿರಣ್ಯ, ರೋಹಿತ, ಮಹೇಂದ್ರ ಹಾಗೂ ಏಕಲವ್ಯ ಹೆಜ್ಜೆ ಹಾಕಲಿದ್ದಾರೆ. ಈ ಏಕಲವ್ಯ ಹೊಸದಾಗಿ ಸೇರಿರುವ ಆನೆಯಾಗಿದೆ.

ಅಭಿಮನ್ಯು: ಆನೆಯನ್ನು 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. 2012ರಿಂದ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದೆ. ಈ ಬಾತಿಯೂ ಅಂಬಾರಿ ಹೊರಲು ಅಭಿಮನ್ಯು ಸಿದ್ಧನಾಗಿದ್ದಾನೆ.

ಧನಂಜಯ: 2013ರಲ್ಲಿ ಹಾಸನ ಜಿಲ್ಲೆಯ ಯಳಸೂರು ವಲಯದಲ್ಲಿ ಸೆರೆ ಹಿಡಿಯಲಾಗಿತ್ತು. ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಧನಂಜಯ ಪಾಲ್ಗೊಳ್ಳುತ್ತಾ ಬಂದಿದ್ದಾನೆ. ಧನಂಜಯನಿಗೆ ಈಗ 44 ವರ್ಷ ವಯಸ್ಸು.

ಭೀಮ: 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಹೆತ್ತೂರಿನಲ್ಲಿ ಸೆರೆಹಿಡಿಯಲಾಗಿತ್ತು. ಭೀಮನಿಗೆ ಈಗಿನ್ನು 24ರ ಹರಯ. ಆದರೆ ಅಂಬಾರಿ ಹೊರುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾನೆ.

ಮಹೇಂದ್ರ: ಇವನಿಗೆ ಈಗ 41 ವರ್ಷ. ದಸರಾ ಅಂಬಾರಿ ಹೊರುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾನೆ. 2022ರ ಶ್ರೀರಂಗಪಟ್ಟಣದ ದಸರಾದಲ್ಲೂ ಭಾಗಿಯಾಗಿದ್ದ.

ಗೋಪಿ: 1990ರಲ್ಲಿ ಹಾಸನದ ದುಬಾರೆ ಬೆಟ್ಟದಲ್ಲಿ ಸೆರೆಹಿಡಿಯಲಾಯ್ತು. ಈಗ ಅವನಿಗೆ 42 ವರ್ಷ. 2015ರಲ್ಲಿ ಪಟ್ಟದ ಆನೆಯಾಗಿ ಅರಮನೆ ಪ್ರವೇಶ ಮಾಡಿದ್ದ.

ಕಂಜನ್: ದಿಬಾರೆ ಶಿಬಿರದಲ್ಲಿ ಬೆಳೆಯುತ್ತಿದ್ದಾನೆ. ಈಗ ಇವನಿಗೆ 25 ವರ್ಷ. ಕಳೆದ ಬಾರಿ ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗಿದ್ದ.

ಲಕ್ಷ್ಮೀ: ಈಗ ಲಕ್ಷ್ಮೀಗೆ 53 ವರ್ಷ. ಅನೇಕ ಬಾರಿ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಳೆ.

ರೋಹಿತ್ ಗೆ 22 ವರ್ಷ, ಹಿರಣ್ಯಾಗೆ 47, ಪ್ರಶಾಂತಗೆ 5 ವರ್ಷ, ಸುಗ್ರೀವಗೆ 42 ವರ್ಷ, ವರಲಕ್ಷ್ಮೀಗೆ 68 ವರ್ಷ, ಏಕಲವ್ಯಗೆ 39 ವರ್ಷ ಆಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment