Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜಾತಿಗಣತಿಗೆ ಒಕ್ಕಲಿಗರು ವಿರೋಧ ಮಾಡ್ತಾ ಇರೋದೇಕೆ..? ಶಾಸಕ ಶ್ರೀನಿವಾಸ್ ಹೇಳಿದ್ದು ಹೀಗೆ..!

---Advertisement---

ತುಮಕೂರು: ಜಾತಿಗಣತಿ ವರದಿ ವಿಚಾರ ಈಗ ಮತ್ತೆ ಸದ್ದು ಚರ್ಚೆಗೆ ಬಂದಿದೆ. ಸಚಿವ ಸಂಪುಟದಲ್ಲಿ ಚರ್ಚಿಸಿ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಈಗಾಗಲೇ ಸಿದ್ದರಾಮಯ್ಯ ಅವರು ಕೂ ಹೇಳಿದ್ದಾರೆ‌. ಆದರೆ ಜಾತಿಗಣತಿ ವರದಿ ಜಾರಿಗೆ ಒಕ್ಕಲಿಗ ಸಮುದಾಯ ವಿರೋಧ ಮಾಡುತ್ತಿದ್ದು, ಆ ಬಗ್ಗೆ ಶಾಸಕ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ‌.

ಈ ಹಿಂದೆ ಕೂಡ ಈ ಬಗ್ಗೆ ಒಂದು ಸಲ ಹೇಳಿದ್ದೆ. ಈಗ ಒಕ್ಕಲಿಗ ಸಮುದಾಯ ಅಂತಾನೇ ಅಂದುಕೊಳ್ಳಿ ಅದರಲ್ಲೂ ಒಳ ಪಂಗಡಗಳಿವೆ. ಲಿಂಗಾಯತರಲ್ಲೂ ಒಳಪಂಗಡಗಳಿವೆ. ವರದಿ ತಯಾರು ಮಾಡಿದಂತ ಸಂದರ್ಭದಲ್ಲಿ ಕುಂಚಿಟಿಗ ಅಂತ ಹೇಳಿದ್ರೆ ಕುಂಚಿಟಿಗ ಅಂತಾನೇ ಬರೆದುಕೊಂಡು ಹೋಗಿರುತ್ತಾರೆ. ದಾಸ ಭಾಗದವರು ಅಂತ ಹೇಳಿದ್ರೆ ಹಾಗೆಯೇ ಬರೆದುಕೊಂಡು ಹೋಗಿರುತ್ತಾರೆ. ನಮ್ಮಲ್ಲಿ ವಿರೋಧ ಯಾಕೆ ಅಂದ್ರೆ ಈ ರೀತಿ ಪಂಗಡ ಮಾಡುವ ಬದಲು ಟೋಟಲಿ ಒಕ್ಕಲಿಗ ಅಂತಾನೇ ಮಾಡಬೇಕು ಎಂಬುದು ನಮ್ಮ ಬೇಡಿಕೆ.

ವೀರಶೈವ ಸಮುದಾಯದಲ್ಲೂ ಅದೇ ಆಗಿರಬಹುದು. ಅವರಲ್ಲೂ ಕೂಡ ಅನೇಕ ಒಳಪಂಗಡಗಳಿದಾವೆ. ಅದರಿಂದ ವರದಿಯನ್ನು ಸರಿಯಾದ ರೀತಿಯಲ್ಲಿ ಮಾಡಿದ್ದಾರೋ ಇಲ್ಲವೋ ಎಂಬ ಅನುಮಾನ ಬಿಟ್ಟರೆ ಬೇರೆನು ಅಲ್ಲ. ಸರಿಯಾಗಿ ಮಾಡದೆ ಇದ್ದರೆ ನಮ್ಮ ಜನಾಂಗಕ್ಕೂ ಅನ್ಯಾಯವಾಗುತ್ತದೆ ಎಂಬುದು ಎಲ್ಲರ ಕಾಳಜಿ ಅಷ್ಟೇ. ನ್ಯಾಯ ಸಿಗಲ್ಲ ಎಂಬ ಕಾರಣಕ್ಕೆ ಈ ವರದಿಗೆ ಒಕ್ಕಲಿಗ ಸಮುದಾಯದವರು ವಿರೋಧ ವ್ಯಕ್ಯಪಡಿಸುತ್ತಾ ಇರಬಹುದು. ವರದಿ ಯಾವ ರೀತಿ ತಯಾರು ಮಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅದರ ಬಗ್ಗೆ ಗೊತ್ತಾದ್ರೆ ಯೋಚನೆ ಮಾಡುತ್ತಾರೆ ಎಂದು ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment