Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕನ್ನಡಿಗರನ್ನು ಕೆಣಕಿದ್ದ ಕೆಲಸ‌ ಕಳೆದುಕೊಂಡ ಉತ್ತರ ಭಾರತದ ಯುವತಿ..!

Facebook
Twitter
Telegram
WhatsApp

 

ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಯುವತಿಯೊಬ್ಬಳು ತನ್ನ ಸೋಷಿಯಲ್ ಮೀಡಿಯಾ ಮೂಲಕ ಕನ್ನಡಿಗರನ್ನೇ ಕೆಣಕಿದ್ದಳು. ಉತ್ತರ ಭಾರತೀಯರು ಇಲ್ಲ ಅಂದ್ರೆ ಬೆಂಗಳೂರು ಖಾಲಿ ಖಾಲಿ. ಪಬ್ ಗಳು ನಡೆಯಲ್ಲ. ನಮ್ಮ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡಿ ಎಂದಿದ್ದರು. ಇದೀಗ ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಆಗಿದೆ ಆ ಯುವತಿಯ ಪರಿಸ್ಥಿತಿ. ಈಗ ಇದ್ದ ಕೆಲಸವನ್ನು ಕಳೆದುಕೊಂಡಿದ್ದಾರೆ.

ಕರ್ನಾಟಕದಲ್ಲೇ ಇದ್ದು ಕನ್ನಡಿಗರನ್ನೇ ಕೆಣಕಿ, ತಮಗೆ ಇಷ್ಟ ಬಂದಂತೆ ಇಲ್ಲಿಯೇ ಇರುವುದು ಕಷ್ಟ ಸಾಧ್ಯವೇ. ಕರ್ನಾಟಕ ಅದರಲ್ಲೂ ಬೆಂಗಳೂರು ಎಲ್ಲರಿಗೂ ಜಾಗ ಕೊಟ್ಟಿದ್ದು, ಅನ್ನ ಕೊಟ್ಟಿದೆ. ಅದಕ್ಕೆ ಗೌರವ ಕೊಡಲೇಬೇಕು ಅಲ್ವಾ. ಆದರೆ ಅಗೌರವ ತೋರಿಸಿಕೊಂಡು ನಮ್ಮಿಂದಾನೇ ನೀವೂ ಅನ್ನೋ ಅಹಂಕಾರ ಮೆರೆದರೆ ಕನ್ನಡಿಗರು ಹೇಗೆ ಕಿವಿ ಮಾತು ಹೇಳಬೇಕೋ ಆ ರೀತಿ ಹೇಳುತ್ತಾರೆ. ಈಗ ಆಗಿದ್ದು ಅದೇ. ಆ ಯುವತಿಯ ಮಾತುಗಳು ಕನ್ನಡಿಗರನ್ನು ಕೆರಳಿ ಕೆಂಡವಾಗುವಂತೆ ಮಾಡಿತ್ತು. ಸುಗಂಧ ಶರ್ಮಾ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು, ಟೀಕೆಗಳು ಕೇಳಿ ಬಂದಿತ್ತು.

ಸುಗಂಧ ಶರ್ಮಾ ಆಡಿದ ಮಾತುಗಳಿಗೆ ಕೋರಮಂಗಲದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಫ್ಐಆರ್ ದಾಖಲಾಗುತ್ತಿದ್ದಂತೆ ಆಕೆ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ಆಕೆಯನ್ನು ಕೆಲಸದಿಂದ ವಜಾ ಮಾಡಿದೆ. ಇದರ ಪರಿಣಾಮ ಸುಗಂಧಾ ಶರ್ಮಾ ಗಂಟು ಮೂಟೆ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ. ನಾವಿಲ್ಲದಿದ್ದರೆ ಬೆಂಗಳೂರು ಗ್ಲಾಮರ್ ಕಳೆದುಕೊಳ್ಳುತ್ತದೆ ಎಂದ ಯುವತಿಗೆ ಈಗ ಬಿಸಿ ಮುಟ್ಟಿದೆ. ಇನ್ನಾದರೂ ಬೇರೆ ಕಡೆಯಿಂದ ಬರುವ ಜನ ಸ್ಥಳೀಯವಾಗಿ ಉಳಿದುಕೊಳ್ಳುವ, ಅನ್ನ ತಿನ್ನುವ ಜಾಗಕ್ಕೆ ಬೆಲೆ ಕೊಡೋದನ್ನ ಕಲಿಯಬೇಕಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀಂ ಪ್ರೇಮ್‍ಜಿ ಫೌಂಡೇಶನ್ ಕಾರ್ಯ ಪ್ರಪಂಚಕ್ಕೆ ಮಾದರಿ: ಕೆ.ರಾಜಶೇಖರ ಹಿಟ್ನಾಳ

  ಸುದ್ದಿಒನ್, ಕೊಪ್ಪಳ, ಸೆಪ್ಟೆಂಬರ್. 28 : ಅಜೀಂ ಪ್ರೇಮ್‍ಜಿ ಫೌಂಡೇಶನ ಮಾಡುತ್ತಿರುವ ಸೇವಾ ಕಾರ್ಯವು ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಲೋಕಸಭಾ ಸದಸ್ಯರಾದ ಕೆ.ರಾಜಶೇಖರ ಹಿಟ್ನಾಳ ಹೇಳಿದರು. ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಅಜೀಂ ಪ್ರೇಮ್‍ಜಿ

ಭಗತ್ ಸಿಂಗ್ ರ ಕನಸಿನ ಸಮಾಜವಾದಿ ಭಾರತಕ್ಕೆ ಕೈಜೋಡಿಸಿ : ರವಿಕುಮಾರ್

  ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 : ಬಿಳಿಯರು ತೊಲಗಬಹದು, ನಮ್ಮವರೇ ನಮ್ಮನ್ನು ಆಳ್ವಿಕೆ ಮಾಡಿ ಜನರ ಶೋಷಣೆ ನಿಲ್ಲುವುದಿಲ್ಲ’ ಎಂದು ಭಗತ್ ಸಿಂಗ್ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನುಡಿದ್ದರು. ಅವರು ಹೇಳಿದ ಒಂದು

ಹಿಂದೂ ಮಹಾಗಣಪತಿ ಶೋಭಯಾತ್ರೆ ವೇಳೆ ದರ್ಶನ್ ಭಾವಚಿತ್ರ ಬಾವುಟ ಹಾರಾಟಕ್ಕೆ ಬ್ರೇಕ್..!

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 : ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಹಿಂದೂ ಮಹಾಗಣಪತಿ ಬೃಹತ್ ಶೋಭಯಾತ್ರೆ

error: Content is protected !!