Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಇಡಿ ಅಧಿಕಾರಿಗಳಿಂದ ಸಿಎಂ ಟಾರ್ಗೆಟ್ : ಏನಂದ್ರು ಸಿದ್ದರಾಮಯ್ಯ, ಡಿಕೆಶಿ..?

Facebook
Twitter
Telegram
WhatsApp

 

ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಕ್ಕಿ ಹಾಕಿಸುವುದಕ್ಕೆ ಇಡಿ ಅಧಿಕಾರಿಗಳೇ ಮುಂದಾಗಿದ್ದಾರೆ ಎಂಬ ವಿಚಾರ ಈಗ ಶಾಕಿಂಗ್ ಆಗಿದೆ. ಕಲ್ಲೇಶ್ ಎಂಬ ಅಧಿಕಾರಿ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ನಾಗೇಂದ್ರ ಅವರ ಹೆಸರು ಬರೆದುಕೊಡುವಂತೆ ಒತ್ತಾಯ ಹಾಕಿದ್ದಾರಂತೆ. ಇಲ್ಲವಾದಲ್ಲಿ ಜೈಲಿಗೆ ಕಳುಹಿಸುತ್ತೀನಿ ಎಂಬುದಾಗಿಯೂ ಹೇಳಿದ್ದರಂತೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಎಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

 

ಸಿಎಂ ಸಿದ್ದರಾಮಯ್ಯ ಮಾತನಾಡಿ, ಅವರು ದೂರು ನೀಡಿ ಕೇಸ್ ರಿಜಿಸ್ಟರ್ ಆಗಿದೆ. ದೂರಿನಲ್ಲಿ ಏನೆಲ್ಲಾ ನಡೆದಿದೆ, ಇಡಿಯವರು ಏನು ಮಾಡಿದರು ಎಂಬುದನ್ನು ತಿಳಿಸಿದ್ದಾರೆ. ಒಟ್ಟಾರೆಯಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರವನ್ನು ಅಸ್ತಿರಗೊಳಿಸಬೇಕು. ಮುಖ್ಯಮಂತ್ರಿಯನ್ನ ಟಾರ್ಗೆಟ್ ಮಾಡಬೇಕು. ಮುಖ್ಯಮಂತ್ರಿ ಇಮೇಜ್ ಅನ್ನ ಡ್ಯಾಮೇಜ್ ಮಾಡಬೇಕು. ನಾವೂ ಪರಿಶಿಷ್ಠ ಜಾತಿ-ವರ್ಗದವರ ವಿರುದ್ಧ ಇದ್ದೀವಿ ಅಂತ ಈ ರಾಜ್ಯದ ಜನರುಗೆ ಹೇಳಬೇಕು. ನಾವೂ ಯಾವತ್ತಿಗೂ ಪರಿಶಿಷ್ಟ ಜಾತಿ ಹಾಗೂ ವರ್ಗದ ಜನರ ಪರ ಹಾಗೂ ದುರ್ಬಲ ವರ್ಗದ ಜನರ ಪರವಾಗಿಯೇ ಇದ್ದೇವೆ, ಬಡವರು, ರೈತರು, ಮಹಿಳೆಯರು, ಕಾರ್ಮಿಕರ ಪರವಾಗಿಯೇ ಇದ್ದೇವೆ. ಹೇಗಾದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದು, ದುರ್ಬಲಗೊಳಿಸಬೇಕು ಎಂಬ ಕಾರಣದಿಂದ ವಾಮಮಾರ್ಗವನ್ ಅನುಸರಿಸುತ್ತಾ ಇದ್ದಾರೆ. ನಾನು ಸ್ಪಷ್ಟ ಪಡಿಸುವುದಕ್ಕೆ ಬಯಸುತ್ತೇನೆ. ಹಣಕಾಸು ಇಲಾಖೆಯಾಗಲಿ, ಸಿಎಂಗಾಗಲಿ ಆ ಕೇಸಿಗೂ ಇವರಿಗೂ ಸಂಬಂಧವಿಲ್ಲ ಎಂದಿದ್ದಾರೆ.

ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಮ್ಮ ಬಾಯನ್ನ ಮುಚ್ಚಿಸಬೇಕು, ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿಸಬೇಕು ಎಂಬ ಉದ್ದೇಶದಿಂದ ಅಧಿಕಾರಿಗಳನ್ನ ಬಳಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಲ್ಲೇಶ್ ಎಂಬ ಅಧಿಕಾರಿಯಿಂದ ಮುಖ್ಯಮಂತ್ರಿ ಹೆಸರೇಳು ಅಂತ ಒತ್ತಡ ಹಾಕಿದ್ದಾರೆ. ಏಳು ವರ್ಷ ಜೈಲಿಗೆ ಹಾಕುತ್ತೀನಿ ಅಂತ ಹೇಳಿ ಹೆದರಿಸಿದ್ದಾರೆ. ಆದರೆ ಆ ವ್ಯಕ್ತಿ ಧೈರ್ಯವಾಗಿ ಹೋಗಿ ಪೊಲೀಸರಿಗೆ ದೂರು ನೀಡಿ, ಎಫ್ಐಆರ್ ಹಾಕಿಸಿದ್ದಾರೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಒಂದು ತಿಂಗಳು ಬ್ರಶ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ

  ಸುದ್ದಿಒನ್ : ಅನೇಕ ಜನರು ಬಾಯಿಯ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಅವರು ತಮ್ಮ ಹಲ್ಲು ಮತ್ತು ನಾಲಿಗೆಯನ್ನು ಎಲ್ಲ ರೀತಿಯಲ್ಲೂ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಆದರೆ ಕೆಲವರಿಗೆ ಮುಂಜಾನೆ ಹಲ್ಲುಜ್ಜುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳದಷ್ಟು

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ,

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ, ಶುಕ್ರವಾರ- ರಾಶಿ ಭವಿಷ್ಯ ಅಕ್ಟೋಬರ್-18,2024 ಸೂರ್ಯೋದಯ: 06:13, ಸೂರ್ಯಾಸ್ತ : 05:48 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..!

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..! ಬೆಂಗಳೂರು: ನಟಿ ಅಮೂಲ್ಯ ಜಗದೀಶ್ ಅವರ ಸಹೋದರ ದೀಪಕ್ ಅರಸ್ ಇಂದು ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ಗೆ ಈ ಸುದ್ದಿ ಬಿರುಗಾಳಿಯಂತೆ ಎದುರಾಗಿದೆ. ದೀಪಕ್ ಅರಸ್

error: Content is protected !!