Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಇಂದು ರೇಣುಕಾಸ್ವಾಮಿ-ಸಹನಾ ಮದುವೆಯಾದ ದಿನ : ಕಣ್ಣೀರಲ್ಲಿ ಕುಟುಂಬ.. ತನಿಖೆಯಲ್ಲಿ ರೇಣುಕಾಸ್ವಾಮಿ ಮೆಸೇಜ್ ಬಹಿರಂಗ..!

Facebook
Twitter
Telegram
WhatsApp

ಬೆಂಗಳೂರು : ರೇಣುಕಾಸ್ವಾಮಿ ಹಾಗೂ ಸಹನಾ ಮದುವೆಯಾಗಿ ಇಂದಿಗೆ ಒಂದು ವರ್ಷ. ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸುವುದಕ್ಕೆ ಇಂದು ರೇಣುಕಾಸ್ವಾಮಿ ಬದುಕಿಲ್ಲ. ಮುದ್ದಾದ ಹೆಂಡತಿ, ಸುಸಂಸ್ಕೃತರ ಸಂಪ್ರದಾಯಸ್ಥ ಕುಟುಂಬದ ಅಪ್ಪ-ಅಮ್ಮ. ನೆಮ್ಮದಿಯಾಗಿ ಬದುಕಲು ರೇಣುಕಾಸ್ವಾಮಿ ಇಷ್ಟು ಸಾಕಿತ್ತು. ಬರೀ ಪವಿತ್ರಾ ಗೌಡಗೆ ಮಾತ್ರವಲ್ಲ ಫೇಕ್ ಅಕೌಂಟ್ ಗಳಿಂದ ಅದೆಷ್ಟೋ ಹೆಣ್ಣು ಮಕ್ಕಳಿಗೆ ತೀರಾ‌ ಮುಜುಗರ ಎನಿಸುವಂತ, ಕೆಟ್ಟ ಮೆಸೇಜ್ ಗಳನ್ನು ಮಾಡಿದ್ದಾನೆ. ಆ ರೀತಿಯ ಮೆಸೇಜ್ ಮಾಡುವ ಗುಣದಿಂದಾನೇ ಇಂದು ಗರ್ಭಿಣಿ ಹೆಂಡತಿ, ವಯಸ್ಸಾದ ತಂದೆ ತಾಯಿಯನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾನೆ.

ಮೊದಲ ವರ್ಷದ ವಾರ್ಷಿಕೋತ್ಸವ ಎಂಬ ಖುಷಿಗಿಂತ ಮಗನೇ ಜೊತೆಗಿಲ್ಲವಲ್ಲ ಎಂದು ತಂದೆ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಏನು ತಪ್ಪು ಮಾಡದ ಸಹನಾ ಎಂಬ ಹೆಣ್ಣು ಮಗು ಮಗುವಿನ ಭವಿಷ್ಯ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಒಂದು ಕಡೆ ಈ ನೋವು ಮತ್ತೊಂದು ಕಡೆ ರೇಣುಕಾಸ್ವಾಮಿ ಮೆಸೇಜ್ ಗಳು ಬಹಿರಂಗವಾಗುತ್ತಿವೆ.

ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಕಾಟ ಕೊಡುತ್ತಿದ್ದು ದರ್ಶನ್ ಕಿವಿಗೆ ಬಿದ್ದ ಮೇಲೆ ಚಿತ್ರದುರ್ಗದಿಂದ ಕರೆದುಕೊಂಡು ಹೋಗಿ  ಬೆಂಗಳೂರಿನಲ್ಲಿ ಹೊಡೆದಿದ್ದಾರೆ. ಕಡೆಗೆ ಆತನ ಕೊಲೆಯಲ್ಲಿ ಈಗ ಎಲ್ಲಾ ಜೈಲಿನಲ್ಲಿದ್ದಾರೆ. ಕೊಲೆಯಾದ ಮೇಲೆ ಆತನ ಮೊಬೈಲ್ ಅನ್ನು ಯಾರಿಗೂ ಸಿಗದಂತೆ ಎಸೆದಿದ್ದಾರೆ. ಆದರೆ ಪೊಲೀಸರು ಕೋರ್ಟ್ ಸಮ್ಮತಿ ಪಡೆದು ಹೊಸ ಸಿಮ್ ಖರೀದಿಸಿ, ಸಿಡಿಅರ್ ಮಾಡಿಸಿದ್ದಾರೆ. ಅದರಿಂದ ಕಾಲ್ ಡಿಟೈಲ್, ಆತನ ಮೆಸೇಜ್ ಎಲ್ಲವೂ ಸಿಕ್ಕಿದೆ. ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಕೊಟ್ಟಿರುವ ಕಾಟ ಅಷ್ಟಿಷ್ಟಲ್ಲ. ಮೂಲಗಳ ಪ್ರಕಾರ ಫೆಬ್ರವರಿಯಿಂದ ಮೆಸೇಜ್ ಮಾಡಿ ಕಾಟ ಕೊಟ್ಟಿದ್ದಾನೆ. ಬರೋಬ್ಬರಿ 200 ಮೆಸೇಜ್ ಕಳುಹಿಸಿರುವುದು. ಅಷ್ಟು‌ ಮೆಸೇಜ್ ಅಶ್ಲೀಲವಾಗಿದೆ. ರೋಸೆದ್ದು ಪವಿತ್ರಾ, ಈಗ ಆರೋಪಿಯಾಗಿರುವ ಪವನ್ ಗೆ ಹೇಳಿದ್ದಾರೆ. ಅದು ದರ್ಶನ್ ತನಕ ಹೋಗಿ, ಕೊಲೆಯಲ್ಲಿ ಅಂತ್ಯವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಎಂ ಪತ್ನಿ ಹೆಸರಿಗೆ 14 ಮೂಡಾ ಸೈಟ್ ಗಳು : ಸಿದ್ದರಾಮಯ್ಯ ಹೇಳಿದ್ದೇನು..?

  ಬೆಂಗಳೂರು: ಸಿಎಂ ಸಿದ್ದರಾಮಯ್ಯ ಧರ್ಮಪತ್ನಿ ಪಾರ್ವತಿ ಅವರ ಹೆಸರಿನಲ್ಲಿ 14 ಮೂಡಾ ಸೈಟುಗಳನ್ನು ಮಾಡಲಾಗಿದೆ ಎಂಬುದು ಬಾರೀ ಚರ್ಚೆಗೆ ಗ್ರಾಸವಾಗಿದೆ. ಆರ್ಟಿಐ ಕಾರ್ಯಕರ್ತ ಇದರಲ್ಲಿ ಅಕ್ರಮ ಮಂಜೂರಾತಿ ನಡೆದಿದೆ ಎಂದಿದ್ದಾರೆ. ಜೊತೆಗೆ ಸಿಎಂ

ಉತ್ತರಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ : ಕಾಲ್ತುಳಿತಕ್ಕೆ 80 ಕ್ಕೂ ಹೆಚ್ಚು ಮಂದಿ ಸಾವು…!

ಸುದ್ದಿಒನ್, ಜುಲೈ. 02 : ನವದೆಹಲಿ: ಮಂಗಳವಾರ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 87 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೋಲೆ ಬಾಬಾರವರ ಸತ್ಸಂಗ

ಎಸ್‍ಎಸ್‍ಎಲ್‍ಸಿ, ಪಿಯು ಫಲಿತಾಂಶ ವೃದ್ಧಿಗೆ ಅಗತ್ಯ ಕಾರ್ಯಕ್ರಮ ರೂಪಿಸಿ : ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ

ಚಿತ್ರದುರ್ಗ. ಜುಲೈ.02:  2024-25ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶ ವೃದ್ಧಿಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

error: Content is protected !!