Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಇತಿಹಾಸದ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಿ :  ವಿದ್ಯಾರ್ಥಿಗಳಿಗೆ ಎಸ್.ರೇವಣಸಿದ್ದಪ್ಪ ಕಿವಿಮಾತು

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552

ಸುದ್ದಿಒನ್,ಚಿತ್ರದುರ್ಗ, ಮೇ. 18  : ಚರಿತ್ರೆಗೆ ದಾಖಲೆ ಮುಖ್ಯ. ದಾಖಲೆ ಇಲ್ಲದೆ ಚರಿತ್ರೆ ಬರೆಯುವುದು ಕಷ್ಟ ಎಂದು ಸರ್ಕಾರಿ ಕಲಾ ಕಾಲೇಜು ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್.ರೇವಣಸಿದ್ದಪ್ಪ ಹೇಳಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸರ್ಕಾರಿ ವಸ್ತು ಸಂಗ್ರಹಾಲಯ ಚಿತ್ರದುರ್ಗ, ಸರ್ಕಾರಿ ಕಲಾ ಕಾಲೇಜು ಸ್ವಾಯತ್ತ ಇದರ ಸಹಯೋಗದೊಂದಿಗೆ ರಂಗಯ್ಯನಬಾಗಿಲು ಸಮೀಪವಿರುವ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪಿ.ಹೆಚ್.ಡಿ. ಮಾಡುವಾಗ ಸಂಗ್ರಹಾಲಯಗಳು ಸಹಾಯವಾಗುತ್ತವೆ. ಶಾಸನ, ತಾಳೆಗರಿ, ಕೈಬರಹ, ಕಡತಗಳು ಸಿಗುತ್ತವೆ. ಪುರಾತತ್ವ ಇಲಾಖೆ ಚರಿತ್ರೆಗಾರರಿಗೆ ತವರು ಮನೆ ಇದ್ದಂತೆ. ಇತಿಹಾಸ ಬರೆಯುವ ಪ್ರಯತ್ನ ಮಾಡಿಲ್ಲ. ಯೂರೋಪಿಯನ್ನರು ಬರೆದಿರುವ ಚರಿತ್ರೆಯನ್ನೇ ಇದುವರೆವಿಗೂ ಓದುತ್ತಿದ್ದೇವೆ. ಜಿಲ್ಲೆಯಲ್ಲಿ ಐತಿಹಾಸಿಕ ನೆಲೆಗಳಿವೆ. ಅಧ್ಯಯನದಲ್ಲಿ ತೊಡಗಿಕೊಳ್ಳಿ ಎಂದು ಇತಿಹಾಸ ವಿಭಾಗದ ವಿದ್ಯಾರ್ಥಿಗಳಿಗೆ ತಿಳಿಸಿದರು.

ಎಲ್ಲಾ ಯುಗಗಳಿಗೂ ಸಂಬಂಧಪಟ್ಟ ದಾಖಲೆಗಳಿವೆ. ಮಾನವನ ಮೊಟ್ಟ ಮೊದಲ ಕುರುಹು ಪತ್ತೆಯಾಗಿದ್ದು, ದಕ್ಷಿಣ ಭಾರತದಲ್ಲಿ ಕದಂಬರು, ಮಯೂರವರ್ಮ, ಭಟ್ಟರು ಇಲ್ಲಿಗೆ ಬಂದರು. ತಾಳೆಗರಿ, ಶಾಸನ, ವೀರಗಲ್ಲು, ಮಾಸ್ತಿಗಲ್ಲುಗಳುಗಳಿವೆ. ಇತಿಹಾಸದ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ನಿವೃತ್ತ ಪ್ರಾಂಶುಪಾಲರಾದ ಕೆ.ಎಸ್.ರಾಜಪ್ಪ ಮಾತನಾಡಿ ಮ್ಯೂಸಿಯಂನಲ್ಲಿ ಸಾಕಷ್ಟು ವಿಚಾರಗಳು ಸಿಗುತ್ತವೆ. ಸಣ್ಣ ಸಣ್ಣ ವಿಷಯಗಳನ್ನಿಟ್ಟುಕೊಂಡು ಸಂಶೋಧನೆ ಮಾಡಲು ಅವಕಾಶಗಳಿದೆ. ಮೊಬೈಲ್ ಗೀಳಿನಲ್ಲಿ ಯುವ ಜನಾಂಗ ಹಾಳಾಗುತ್ತಿದೆ. ಸಂಗ್ರಹಾಲಯಗಳನ್ನು ತಿರುಗಿ ಹೆಚ್ಚಿನ ಜ್ಞಾನ ವೃದ್ದಿಸಿಕೊಳ್ಳಿ ಎಂದು ಇತಿಹಾಸ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿನಾಯಕ ಮಾತನಾಡುತ್ತ ವಸ್ತು ಸಂಗ್ರಹಾಲಯಗಳಲ್ಲಿ ಪೂರ್ವಜರ ಜೀವನ, ಪರಂಪರೆ, ಸ್ಮಾರಕಗಳು ಸಿಗುತ್ತವೆ. ದೆಹಲಿಯಲ್ಲಿ ಐದು ಸಾವಿರ ವರ್ಷಗಳ ಇತಿಹಾಸವಿರುವ ಮ್ಯೂಸಿಯಂ ಇದೆ. ಇತಿಹಾಸ, ಪರಂಪರೆ, ಸಂಸ್ಕøತಿಯನ್ನು ಸಂಗ್ರಹಾಲಯಗಳು ತಿಳಿಸುತ್ತವೆ. ಚಿತ್ರದುರ್ಗ ಸಾಂಸ್ಕøತಿಕ, ಜಾನಪದಕ್ಕೆ ತವರು ಮನೆಯಿದ್ದಂತೆ. ಮುರುಘಾಮಠದಲ್ಲಿಯೂ ಅತ್ಯುತ್ತಮವಾದ ಸಂಗ್ರಹಾಲಯವಿದೆ. ಇತಿಹಾಸ ವಿದ್ಯಾರ್ಥಿಗಳು ಅವುಗಳನ್ನೆಲ್ಲಾ ನೋಡಿ ಕಲಿಯುವುದು ಬಹಳಷ್ಟಿದೆ ಎಂದರು.

ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಪ್ರಹ್ಲಾದ್ ಮಾತನಾಡಿ ಸಂಗ್ರಹಾಲಯಗಳಿಂದ ಹಲವಾರು ವಿಚಾರಗಳನ್ನು ತಿಳಿದುಕೊಳ್ಳಬಹುದು. ರಾಜ ವಂಶಸ್ಥರು, ಸಂಸ್ಕøತಿ, ಪರಂಪರೆ, ಇತಿಹಾಸಕ್ಕೆ ಸಂಬಂಧಪಟ್ಟ ಪ್ರಾಚೀನ ಕುರುಹುಗಳು, ಸಿಗುತ್ತವೆ. ನಮ್ಮ ಜಿಲ್ಲೆಯಲ್ಲಿ ನಾಲ್ಕು ಮ್ಯೂಸಿಯಂಗಳಿವೆ. ಎಲ್ಲವನ್ನು ಇತಿಹಾಸ ವಿಭಾಗದ ವಿದ್ಯಾರ್ಥಿಗಳು ನೋಡಬೇಕೆಂದು ತಿಳಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

Dengue fever : ಡೆಂಗ್ಯೂ ಜ್ವರ ಇದ್ದರೆ, ನೀವು ಯಾವ ಹಣ್ಣುಗಳನ್ನು ತಿನ್ನಬೇಕು ? ಎಳ ನೀರು ಒಳ್ಳೆಯದೇ ?

  ಸುದ್ದಿಒನ್ : ಮಳೆಗಾಲ ರೋಗಗಳ ಕಾಲ. ಮಳೆಗಾಲದಲ್ಲಿ ಡೆಂಗ್ಯೂ ಭೀತಿ ಹೆಚ್ಚು. ಮಳೆಗಾಲದಲ್ಲಿ ಹಲವೆಡೆ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚುತ್ತದೆ. ಈ ಸೊಳ್ಳೆಗಳು ಮಲೇರಿಯಾ, ಚಿಕೂನ್‌ಗುನ್ಯಾ, ಡೆಂಗ್ಯೂ ಮುಂತಾದ ಅಪಾಯಕಾರಿ ರೋಗಗಳನ್ನು

ಈ ರಾಶಿಯ ವ್ಯಾಪಾರಸ್ಥರಿಗೆ ಕೃಷಿಕರಿಗೆ ಉತ್ತಮ ಕಾಲಾವಧಿ, ಆದರೆ ಈ ರಾಶಿಗಳಿಗೆ ಕುಜ ಕೇತು ಗೃಹಗಳಿಂದ ಒಂದು ರೀತಿಯ ಆತಂಕ

ಈ ರಾಶಿಯ ವ್ಯಾಪಾರಸ್ಥರಿಗೆ ಕೃಷಿಕರಿಗೆ ಉತ್ತಮ ಕಾಲಾವಧಿ, ಆದರೆ ಈ ರಾಶಿಗಳಿಗೆ ಕುಜ ಕೇತು ಗೃಹಗಳಿಂದ ಒಂದು ರೀತಿಯ ಆತಂಕ. ಭಾನುವಾರ- ರಾಶಿ ಭವಿಷ್ಯ ಜುಲೈ-7,2024 ಸೂರ್ಯೋದಯ: 05:51, ಸೂರ್ಯಾಸ್ತ : 06:50 ಶಾಲಿವಾಹನ

INDIA Vs ZIMBABWE : 13 ರನ್‌ಗಳ ಅಂತರದಿಂದ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಸೋಲು

  ಸುದ್ದಿಒನ್ : ಟಿ20 ವಿಶ್ವಕಪ್ ಗೆದ್ದ ಭಾರತ ಆ ಬಳಿಕ ಮೊದಲ ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿದೆ.  ಜಿಂಬಾಬ್ವೆ ವಿರುದ್ಧ 13 ರನ್‌ಗಳಿಂದ ಸೋತಿತು. ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್

error: Content is protected !!