Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆಡಿಯೋ ಲಾಂಚ್ ವೇಳೆ ಅಚಾತುರ್ಯ : ಅಪ್ಪು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ರಕ್ಷಿತಾ, ಪ್ರೇಮ್, ರಚಿತಾ..!

Facebook
Twitter
Telegram
WhatsApp

ಬೆಂಗಳೂರು: ಅಪ್ಪು ನಮ್ಮನ್ನಗಲಿದ್ದಾರೆ ಅಂದ್ರೆ ಯಾರಿಗೂ ಈಗಲೂ ಅರಗಿಸಿಕೊಳ್ಳೋದಕ್ಕೆ ಆಗ್ತಾ ಇಲ್ಲ. ಆ ಸತ್ಯವನ್ನ ಒಪ್ಪಿಕೊಳ್ಳುವ ಗೋಜಿಗೆ ಹೋಗ್ತಾ ಇಲ್ಲ. ಅಪ್ಪು ಇಲ್ಲ ಎನ್ನುವುದಕ್ಕಿಂತ ಅವರು ನಮ್ಮ ನಡುವೆಯೇ ಜೀವಂತವಾಗಿದ್ದಾರೆ ಎಂದುಕೊಂಡು ಬಿಡೋಣಾ ಅಂತ ಆ ಕಹಿ ಸತ್ಯವನ್ನ ಅಲ್ಲಿಗೆ ಬಿಟ್ಟಿದ್ದಾರೆ ಕೋಟ್ಯಾಂತರ ಅಭಿಮಾನಿಗಳು.

ಅಪ್ಪುಗೆ ಎಲ್ಲರೂ ಗೌರವ ಸೂಚಿಸುತ್ತಿದ್ದಾರೆ. ಅಪ್ಪು ಒಂದು ದಿನ ಕುಡಿತದ ಜಾಹೀರಾತಿನಲ್ಲಿ ಕಾಣಿಸಿಕೊಂಡವರಲ್ಲ, ಕೆಟ್ಟದ್ದನ್ನ ಉತ್ತೇಜಿಸಿದವರಲ್ಲ. ಹೀಗಿರುವಾಗ ಅವರ ಫೋಟೋ ಮುಂದೆ ಶಾಂಪೇನ್ ಓಪನ್ ಮಾಡಿದ್ರೆ ಅಭಿಮಾನಿಗಳಿಗೆ ಹೇಗಾಗಬೇಡ..?

ಹೌದು ನಿನ್ನೆ ರಾತ್ರಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ದುರ್ಘಟನೆ ನಡೆದು ಹೋಗಿದೆ. ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಅಪ್ಪುಗೆ ಮೊದಲು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಪ್ಪು ಫೋಟೋ ಇನ್ನು ಪರದೆ ಮೇಲೆ ಇರುವಾಗಲೇ ಶಾಂಪೇನ್ ಓಪನ್ ಮಾಡಿದ್ದಾರೆ. ರಕ್ಷಿತಾ, ರಚಿತಾ, ಮಂಗ್ಲಿ ಹಾಗೂ ಅಕುಲ್ ಬಾಲಾಜಿ ವೇದಿಕೆ ಮೇಲಿದ್ದರು. ಈ ವೇಳೆ ಶಾಂಪೇನ್ ಸಿಡಿಸಿ, ಸಾಂಗ್ ರಿಲೀಸ್ ಮಾಡಿ ಸಂಭ್ರಮ ಪಟ್ಟರು. ಇದು ಇಡೀ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ, ನಟಿ ರಕ್ಷಿತಾ ಹಾಗೂ ರಚಿತಾ ಇಬ್ಬರು ಕ್ಷಮೆ ಕೇಳಿದ್ದಾರೆ. ಗೊತ್ತಿಲ್ಲದೆ ಆದ ತಪ್ಪು. ಅಪ್ಪು ಮೇಲೆ ನಮಗೂ ಅಪಾರ ಗೌರವವಿದೆ ಎಂದಿದ್ದಾರೆ. ಇನ್ನು ಚಿತ್ರತಂಡ ಕೂಡ ಕ್ಷಮೆ ಕೇಳಿದ್ದು, ತಾಂತ್ರಿಕ ದೋಷದಿಂದ ಈ ರೀತಿ ಆಗಿದೆ. ಶಾಂಪೇನ್ ಓಪನ್ ಮಾಡಿ ಸಾಂಗ್ ರಿಲೀಸ್ ಮಾಡೋ ಫ್ಲ್ಯಾನ್ ಮಾಡಿಕೊಂಡಿದ್ದೆವು. ಶಾಂಪೇನ್ ಓಪನ್ ಆಗಿದ ಕೂಡಲೇ ಸಿನಿಮಾದ ಸಾಂಗ್ ಪರದೆಯ ಮೇಲೆ ಪ್ಲೇ ಆಗಬೇಕಿತ್ತು. ಆದ್ರೆ ತಾಂತ್ರಿಕ ದೋಷದಿಂದ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದ್ದ ವಿಡಿಯೋ ಪ್ಲೇ ಆಗಿದೆ. ಇದಕ್ಕೆ ಕ್ಷನೆಯಾಚಿಸುತ್ತೇವೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಸಿಮೆಣಸಿನಕಾಯಿ ಗ್ಯಾಸ್ಟ್ರಿಕ್ ಅಲ್ಲ.. ಇದರಿಂದ ಇದೆ ಅನೇಕ ಲಾಭಗಳು

ಸುದ್ದಿಒನ್ : ಹಸಿರು ಮೆಣಸಿನಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅರೋಗ್ಯದ ದೃಷ್ಟಿಯಿಂದ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಸಿರು ಮೆಣಸು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಕಣ್ಣಿನ ಸಮಸ್ಯೆಗಳನ್ನು

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು?

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು? ಸೋಮವಾರ ರಾಶಿ ಭವಿಷ್ಯ -ಮೇ-6,2024 ಸೂರ್ಯೋದಯ: 05:51, ಸೂರ್ಯಾಸ್ತ : 06:34 ಶಾಲಿವಾಹನ

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

error: Content is protected !!