Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರಪ್ರೇಮಿಗಳು ಕೊಂಡಾಡ್ತಿರೋ ‘ಜೈ ಭೀಮ್’ ಸುತ್ತ ವಿವಾದದ ಸುಳಿ..!

Facebook
Twitter
Telegram
WhatsApp

ಸಿನಿಮಾಗಳೇ ಹಾಗೆ.. ಸಿನಿಮಾದೊಳಗಿನ ಕಂಟೆಂಟ್ ಯಾರಿಗಾದರೂ ಇಷ್ಟವಾಗಿ ಬಿಟ್ಟರೆ ಅದನ್ನ ಮತ್ತಷ್ಟು ಜನಕ್ಕೆ ಹೇಳಿ, ನೀವೂ ನೋಡಿ ಅಂತಾರೆ. ಸೂರ್ಯ ನಟನೆಯ ಜೈ ಭೀಮ್ ಸಿನಿಮಾವೂ ಆಗಿದ್ದು, ಅದೇ. ಸಿನಿಮಾ ನೋಡಿದ ಪ್ರತಿಯೊಬ್ಬರು ತಮ್ಮ ಸೋಷಿಯಲ್ ಮೀಡಿಯಾ ಸ್ಟೇಟಸ್ ಗೆ ಹಾಕಿಕೊಳ್ಳೋದಕ್ಕೆ ಶುರು ಮಾಡಿದ್ರು. ಸ್ಟೇಟಸ್, ಆ ಸಿನಿಮಾದ ಬಗ್ಗೆ ಬಂದಿರುವ ಪಾಸಿಟಿವ್ ಒಪಿನಿಯನ್ ನೋಡಿ ಮತ್ತೊಂದಷ್ಟು ಜನ ಸಿನಿಮಾ ನೋಡುವುದಕ್ಕೆ ಶುರು ಮಾಡಿದ್ರು.

ಜೈ ಭೀಮ್ ಸಿನಿಮಾ ಅಮಾಯಕ ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವಂತ ಸಿನಿಮಾವಾಗಿದೆ. ನೇರ ಓಟಿಟಿ ಫ್ಲಾಟ್ ಫಾರಂ ನಲ್ಲಿ ರಿಲೀಸ್ ಆಗಿದ್ದು, ಅಂದಿನಿಂದ ಇಂದಿನವರೆಗೆ ಒಳ್ಳೆ ರೆಸ್ಪಾನ್ಸ್ ಪಡೆಯುತ್ತಿದೆ. ಹೀಗಿರುವಾಗ ಒಂದಷ್ಟು ವಿವಾದವೂ ಸಿನಿಮಾದ ಮೈಗಂಟಿಕೊಂಡಿದೆ.

ಈ ಸಿನಿಮಾದಿಂದಾಚೆಗೆ ಪ್ರಕಾಶ್ ರೈ ಅವರನ್ನ ಹಿಂದಿ ವಿರೋಧಿ ಎಂದು ಬಣ್ಣಿಸುತ್ತಿದ್ದಾರೆ. ಯಾಕಂದ್ರೆ ಪ್ರಕಾಶ್ ರೈ ಈ ಸಿನಿಮಾದಲ್ಲಿ  ಪೊಲೀಸ್ ಅಧಿಕಾರಿಯಾಗಿ ವಿಚಾರಣೆ ನಡೆಸುತ್ತಿರುತ್ತಾರೆ. ಒಬ್ಬ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿದ ಕೂಡಲೇ ಕಪಾಳಕ್ಕೆ ಹೊಡೆಯುತ್ತಾರೆ. ಹೀಗಾಗಿ ಒಂದಷ್ಟು ಜನ ಪ್ರಕಾಶ್ ರೈ ಅವರನ್ನ ಹಿಂದಿ ವಿರೋಧಿ ಎಂದೇ ಬಿಂಬಿಸುತ್ತಿದ್ದಾರೆ. ಜೊತೆಗೆ ಆ ದೃಶ್ಯಕ್ಕೆ ಕತ್ತರಿ ಹಾಕುವಂತೆ ಸೋಷಿಯಲ್ ಮೀಡಿಯಾದಲ್ಲಿ ಒತ್ತಡ ಕೇಳಿ ಬರ್ತಿದೆ.

ಇದಕ್ಕೆ ಈಗಾಗ್ಲೇ ಪ್ರಕಾಶ್ ರೈ ಉತ್ತರವನ್ನು ಕೊಟ್ಟಿದ್ದಾರೆ. ಸಿನಿಮಾದಲ್ಲಿ ತಳಮಟ್ಟದವರ ಸ್ಥಿತಿಯನ್ನ ತೋರಿಸಲಾಗಿದೆ. ಅದು ಕಾಣಲಿಲ್ಲ. ಕಪಾಳಕ್ಕೆ ಹೊಡೆದದ್ದು ಕಂಡಿದೆ. ಇದು ವಿವಾದ ಮಾಡುವವರ ಮನಸ್ಥಿತಿ ಎಂಥದ್ದು ಎಂಬುದನ್ನ ತೋರಿಸುತ್ತದೆ ಎಂದಿದ್ದಾರೆ.

ಇನ್ನು ಒಂದು ದೃಶ್ಯದಲ್ಲಿ ಸಣ್ಣ ಕ್ಯಾಲೆಂಡರ್ ಒಂದು ಕಾಣುತ್ತದೆ. ಅದರಲ್ಲಿ ಕಮ್ಯುನಿಯಲ್ ಚಿಹ್ನೆ ಇದೆ. ಇದಕ್ಕೂ ವಿರೋಧ ಎದ್ದ ಬಳಿಕ, ಡಿಜಿಟಲ್ ಎಡಿಟಿಂಗ್ ಮೂಲಕ ಚಿತ್ರತಂಡ ಲಕ್ಷ್ಮೀದೇವಿಯ ಪಟವನ್ನ ಹಾಕಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ಚಾಕಲೇಟ್ ಕೊಡಿಸಿ ಅನ್ಯಕೋಮಿನ ಯುವಕನಿಂದ ದಲಿತ ಬಾಲಕಿ ಮೇಲೆ ಅತ್ಯಾಚಾರ: ಹಿರಿಯೂರಿನಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕರಣ..!

ಹಿರಿಯೂರು : ತಂಗಿಯ ಸ್ನೇಹಿತೆಗೆ ಚಾಕಲೇಟ್, ಬಿಸ್ಕೇಟ್ ಕೊಡಿಸಿ, ಅನ್ಯಕೋಮಿನ ಯುವಕ ದಲಿತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ. ಈ ಸಂಬಂಧ ಅನ್ಯಕೋಮಿನ ಯುವಕನ ವಿರುದ್ಧ ಗ್ರಾಮಾಂತರ ಪೋಲಿಸ್

error: Content is protected !!