ನ.10 ರಿಂದ 13 ರವರೆಗೆ ವಿವಿಧೆಡೆ ಸ್ವಚ್ಫತಾ ಕಾರ್ಯಕ್ರಮ : ಗಿರೀಶ್ ಬಿ.ಕೆ.

suddionenews
1 Min Read

ವರದಿ  : ಸುರೇಶ್ ಪಟ್ಟಣ್

ಚಿತ್ರದುರ್ಗ(ನ.09) : 75 ನೇ ಸ್ವಾತಂತ್ರೋತ್ಸವದ ಅಮೃತ್ ಮಹೋತ್ಸವದ ಅಂಗವಾಗಿ ನ.10 ರಿಂದ 13 ರವರೆಗೆ ನಗರದ ವಿವಿಧೆಡೆಗಳಲ್ಲಿ ಸ್ವಚ್ಫತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗಿರೀಶ್ ಬಿ.ಕೆ.ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರುರವರ ನಿರ್ದೇಶನದಂತೆ, 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ “ಆಜಾದಿ ಕಾ ಅಮೃತ್ ಮಾಹೋತ್ಸವ” ದ ಅಂಗವಾಗಿ ದೇಶಾದ್ಯಂತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನ ನ. 02 ರಿಂದ 14 ರಂದು ಹಮ್ಮಿಕೊಳ್ಳುವಂತೆ ನಿರ್ದೇಶನವನ್ನು ನೀಡಲಾಗಿದ್ದು, ಅದರಂತೆ,ನ.10 ರಿಂದ 13 ರವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ಸ್ವಚ್ಫತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ನ.10 ರಂದು ಬೆಳಗ್ಗೆ 09.30 ಗಂಟೆಗೆಯಿಂದ ಆರ್.ಟಿ.ಓ ಕಛೇರಿಯಿಂದ ಕೋರ್ಟ್‍ವರೆಗೆ, ನ.11 ರಂದು ಬೆಳಗ್ಗೆ 09.30 ಗಂಟೆಗೆ ಜೋಗಿಮಟ್ಟಿ ಸರ್ಕಲ್‍ನಿಂದ ಉಚ್ಚಂಗಿ ಯಲ್ಲಮ್ಮ ದೇವಸ್ಥಾನದವರೆಗೆ ನ.12 ರಂದು ಬೆಳಗ್ಗೆ 09.30 ಗಂಟೆಗೆ ಸಂತೆ ಹೊಂಡದಿಂದ ಗಾಯತ್ರಿ ಸರ್ಕಲ್‍ವರೆಗೆ ನ.13 ರಂದು ಬೆಳಗ್ಗೆ 09.30 ಗಂಟೆಗೆ ವಾಸವಿ ಶಾಲೆಯಿಂದ ಅಯ್ಯಣ್ಣ ಪೇಟೆವರೆಗೆ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *