ನ.10 ರಿಂದ 15ರವರೆಗೆ ಶಾಂತಿಸಾಗರ ನೀರು ಸರಬರಾಜು ಸ್ಥಗಿತ

suddionenews
1 Min Read

ಚಿತ್ರದುರ್ಗ, (ನವೆಂಬರ್.09) : ನಗರದ ಕೇಂದ್ರ ಪುರಸ್ಕೃತ “ಅಮೃತ್” ಯೋಜನೆಯಡಿ ಶಾಂತಿಸಾಗರ ಮೂಲದಿಂದ ನೀರು ಸರಬರಾಜು ವ್ಯವಸ್ಥೆಯ ಅಭಿವೃದ್ಧಿ, ಪುನಃಶ್ಚೇತನ ಕಾಮಗಾರಿಗೆ ಸಂಬಂಧಿಸಿದಂತೆ ಕುಟ್ಟಿಗೆಹಳ್ಳಿ ಮಧ್ಯಂತರ ಯಂತ್ರಗಾರ ಮತ್ತು ಶಾಂತಿಸಾಗರ ಮೂಲ ಸ್ಥಾವರದ ಬಳಿ ದುರಸ್ತಿ ಮತ್ತು ಪುನಃಶ್ಚೇತನ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳುತ್ತಿರುವುದರಿಂದ ಶಾಂತಿಸಾಗರ ನೀರು ಸರಬರಾಜು ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನವೆಂಬರ್ 10 ರಿಂದ 15 ರವರೆಗೆ ಸ್ಥಗಿತಗೊಳಿಸಲಾಗುತ್ತಿದೆ.

ಸಾರ್ವಜನಿಕರು ತಮ್ಮ ತಮ್ಮ ಪ್ರದೇಶದಲ್ಲಿನ ಕೊಳವೆ ಬಾವಿಗಳ ನೀರನ್ನು ಉಪಯೋಗಿಸಲು ಕೋರಿದೆ ಹಾಗೂ ನೀರನ್ನು ಮಿತವಾಗಿ ಬಳಸಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *