Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕರಟಕ ದಮನಕ ಚಿತ್ರದಲ್ಲಿ ನೀರಿನ ಮಹತ್ವದ ಬಗ್ಗೆ ಉತ್ತಮ ಸಂದೇಶವಿದೆ | ಚಿತ್ರದುರ್ಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹೇಳಿಕೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.11 : ಚಿತ್ರದುರ್ಗದಲ್ಲಿ ನಡೆದ ಅನೇಕ ಸಮಾರಂಭಗಳಿಗೆ ನಾನು ಬಂದಿದ್ದೇನೆ. ಇಲ್ಲಿಗೆ ಬರಬೇಕೆಂದರೆ ನನಗೆ ಎಲ್ಲಿಲ್ಲದ ಆನಂದ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ತಮ್ಮ ಸಂತಸ ಹಂಚಿಕೊಂಡರು.

ಬಸವೇಶ್ವರ ಚಿತ್ರಮಂದಿರಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಭುದೇವ್ ನಾನು ನಟಿಸಿರುವ ಕರಟಕ ದಮನಕ ಚಿತ್ರದಲ್ಲಿ ನೀರಿಗೆ ಎಷ್ಟೊಂದು ಮಹತ್ವವಿದೆ ಎನ್ನುವ ಸಂದೇಶವಿದೆ. ಬೇಸಿಗೆ ಕಾಲವಾಗಿರುವುದರಿಂದ ಎಲ್ಲಾ ಕಡೆ ನೀರಿನ ಸಮಸ್ಯೆಯಿದೆ. ಅಮೂಲ್ಯವಾದ ನೀರನ್ನು ವ್ಯರ್ಥಮಾಡಬಾರದು ಎನ್ನುವ ಸಂದೇಶವನ್ನು ಅಭಿಮಾನಿಗಳಿಗೆ ನೀಡಿದ್ದೇವೆ. ಹೆಚ್ಚಿನ ಹಣ ಗಳಿಸುವ ಆಸೆಗಾಗಿ ಬೇರೆ ದೇಶಗಳಿಗೆ ಹೋದವರು ತಮ್ಮ ಹುಟ್ಟೂರನ್ನು ಮರೆಯಬಾರದು.

ನಾನು ಹುಟ್ಟಿದ್ದು, ತಮಿಳುನಾಡಿನಲ್ಲಿ ನನ್ನ ತಂದೆ ಜನಸಿದ್ದು, ಗಾಜನೂರಿನಲ್ಲಿ ಹಾಗಾಗಿ ನಾನು ಗಾಜನೂರಿಗೆ ಹೋದರೆ ಸಿಗುವ ಖುಷಿ ಅಷ್ಟಿಷ್ಟಲ್ಲ. ಇದು ನನ್ನ 126 ನೇ ಸಿನಿಮಾ. ಅಪ್ಪುನನ್ನು ಮಿಸ್ ಮಾಡಿಕೊಂಡಿದ್ದೇವೆಂದು ಎಲ್ಲಿಯೂ ನನಗೆ ಅನಿಸುತ್ತಿಲ್ಲ. ಅಭಿಮಾನಿಗಳ ಮನಸ್ಸಿನಲ್ಲಿದ್ದಾನೆಂದುಕೊಂಡಿದ್ದೇನೆ. ಹುಟ್ಟಿದ ಊರಿನ ಬೇರು ನಂಟನ್ನು ಕಾಪಾಡಿಕೊಳ್ಳಬೇಕು. ಊರು ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರು ಊರಿಗೆ ನಾವೇನು ಕೊಟ್ಟಿದ್ದೇನೆಂದು ಚಿಂತಿಸಿಬೇಕಿದೆ. ತಪ್ಪದೆ ಎಲ್ಲರೂ ಕರಟಕ ದಮನಕ ಚಿತ್ರ ನೋಡಿ ಉತ್ತಮ ಸಂದೇಶವಿದೆ ಎಂದು ಅಭಿಮಾನಿಗಳಲ್ಲಿ ಶಿವರಾಜ್‍ಕುಮಾರ್ ಮನವಿ ಮಾಡಿದರು.
ಈ ಚಿತ್ರದಲ್ಲಿ ಕೇವಲ ಮನರಂಜನೆಯಷ್ಟೆ ಅಲ್ಲ. ಸಾಮಾಜಿಕ ಸಂದೇಶ ಕೂಡ ಅಡಗಿದೆ. ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಎಂದರು.

ಚಿತ್ರದ ನಿರ್ದೇಶಕ ಯೋಗರಾಜ್‍ಭಟ್, ನಿರ್ಮಾಪಕ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಬಸವೇಶ್ವರ ಚಿತ್ರಮಂದಿರದ ಮಾಲೀಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾತ್ರಿ ವೇಳೆ ಅನ್ನದ ಬದಲು ಬರೀ ಚಪಾತಿ ತಿನ್ನುತ್ತಿದ್ದೀರಾ?

ಸುದ್ದಿಒನ್ : ಇತ್ತೀಚೆಗೆ, ಸ್ಥೂಲಕಾಯತೆಯು ಅನೇಕ ಯುವಜನರಿಗೆ ದೊಡ್ಡ ತಲೆನೋವಾಗಿದೆ. ಅದಕ್ಕಾಗಿ ಅವರು ತಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಕಷ್ಟು ಪ್ರಯತ್ನಿಸುತ್ತಾರೆ. ಅದಕ್ಕಾಗಿ ರಾತ್ರಿ ಅನ್ನ ತಿನ್ನುವುದನ್ನು ಬಿಟ್ಟು ಹೆಚ್ಚು ಚಪಾತಿ ತಿನ್ನತೊಡಗುತ್ತಿದ್ದಾರೆ. ಆದರೆ ಇದರಿಂದ

ಈ ರಾಶಿಯ ಗಂಡ ಹೆಂಡತಿ ಹೊಂದಾಣಿಕೆ ಮಾಡಿಕೊಂಡು ಹೋದರೆ ನಿಮ್ಮಂತ ಭಾಗ್ಯಶಾಲಿ ಯಾರು ಇಲ್ಲ

ಈ ರಾಶಿಯ ಗಂಡ ಹೆಂಡತಿ ಹೊಂದಾಣಿಕೆ ಮಾಡಿಕೊಂಡು ಹೋದರೆ ನಿಮ್ಮಂತ ಭಾಗ್ಯಶಾಲಿ ಯಾರು ಇಲ್ಲ, ಮಂಗಳವಾರ-ರಾಶಿ ಭವಿಷ್ಯ ಮೇ-14,2024 ಗಂಗಾ ಸಪ್ತಮಿ,ವೃಷಭ ಸಂಕ್ರಾಂತಿ ಸೂರ್ಯೋದಯ: 05:48, ಸೂರ್ಯಾಸ್ತ : 06:36 ಶಾಲಿವಾಹನ ಶಕೆ1945, ಶ್ರೀ

ಇಂದು ಜಾಮೀನು ಸಿಕ್ಕರೂ ರೇವಣ್ಣ ನಾಳೆ ಜೈಲಿಂದ ರಿಲೀಸ್..!

    ಬೆಂಗಳೂರು: ಮಹಿಳೆಯ ಕಿಡ್ನ್ಯಾಪ್ ಕೇಸಿನಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಪರಪ್ಪನ ಅಗ್ರಹಾರ ಸೇರಿದ್ದರು. ಇಂದು ಕಡೆಗೂ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಆದರೆ ಜಾಮೀನು ಸಿಕ್ಕಿದರು ಮನೆಗೆ

error: Content is protected !!