Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿವಮೊಗ್ಗದಲ್ಲಿ ರೈತ ಗೋಗರೆದರು ಬಿಡದೆ ಅಡಿಕೆ ತೋಟ ಕಡಿದ ಅಧಿಕಾರಿಗಳು..!

Facebook
Twitter
Telegram
WhatsApp

ಕೃಷಿ ಮಾಡುವುದು ಎಂದರೆ ಸುಲಭದ ಕೆಲಸವಲ್ಲ. ಅದರಲ್ಲೂ ಅಡಿಕೆ – ತೆಂಗು ಬೆಳೆಯುವುದಕ್ಕೆ ಐದು ವರ್ಷಗಳ ಕಾಲ ಮಕ್ಕಳನ್ನು ಸಾಕಿದಂತೆ ಸಾಕುತ್ತಾರೆ. ಅಷ್ಟು ಕಷ್ಟ ಪಟ್ಟು, ನಿಷ್ಠೆಯಿಂದ ಸಾಕಿ ಬೆಳೆಸಿದ ಗಿಡಗಳನ್ನು ನೆಲಸಮ ಮಾಡಿದರೆ ರೈತನ ಮನಸ್ಥಿತಿ ಏನಾಗಬಹುದು. ಅಂಥದ್ದೆ ಒಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಭದ್ರಾವತಿ-ತರಿಕೆರೆ ಗಡಿ ಪ್ರದೇಶದಲ್ಲಿರುವ ಲಕ್ಕವಳ್ಳಿಯ ಗೋಪಾಲ ಗ್ರಾಮದಲ್ಲಿ ಇರುವ ರೈತ ಸುರೇಶ್ ಸುಮಾರು ಒಂದು ಎಕರೆಯಲ್ಲಿ ಅಡಿಕೆ ತೋಟ ಮಾಡಿದ್ದಾರೆ. ಸುಮಾರು 450-500 ಅಡಿಕೆ ಗಿಡಗಳನ್ನು ಬೆಳೆದಿದ್ದರು. ಆದರೆ ಇಷ್ಟು ಗಿಡಗಳನ್ನು ಅಧಿಕಾರಿಗಳು ನಾಶ ಮಾಡಿದ್ದಾರೆ. ಆರ್ ಐ, ವಿಲೇಜ್ ಅಕೌಂಟೆಂಟ್, ಗ್ರಾಮ ಪಂಚಾಯತ್ ಸದಸ್ಯರು ಸೇರಿ ನಾಶ ಮಾಡಿದ್ದಾರೆ. ರೈತ ಸುರೇಶ್ ಗೋಗರೆದರು ಬಿಟ್ಟಿಲ್ಲ. ಸರ್ಕಾರಿ ಜಾಗವೆಂದು ಇದ್ದಬದ್ದ ಗಿಡಗಳನ್ನೆಲ್ಲ ಕತ್ತರಿಸಿ ಹಾಕಿದ್ದಾರೆ.

40 ವರ್ಷದಿಂದ ಉಳುಮೆ ಮಾಡಿಕೊಂಡು ಬಂದಿದ್ದರು. ಸಕ್ರಮಕ್ಕಾಗಿ ನ್ಯಾಯಾಲಯಕ್ಕೆ ಫಾರಂ ನಂ. 53 ರಲ್ಲಿ ಅರ್ಜಿ ಸಲ್ಲಿಸಿದ್ದರು. ಮುಗಿಲೇಶ್ವರಿ ಎಂಬುವವರ ಹೆಸರಿನಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಕರಣ ನ್ಯಾಯಾಲಯದಲ್ಲಿದ್ದರು ಏಕಾಏಕಿ ಬಂದು ಅಡಿಕೆ ತೋಟ ನಾಶಪಡಿಸಿದ್ದಾರೆ. ಗ್ರಾ.ಪಂ. ಅಧಿಕಾರಿಗಳು ಊರಿನ ಸ್ಮಶಾನಕ್ಕೆ ಜಾಗ ಬೇಕೆಂದು ತೋಟ ನಾಶ ಮಾಡಿದ್ದಾರೆ. ತೋಟ ಕಟ್ಟಿದ ಕಾರಣ, ಬದಲಿ ಭೂಮಿ ನೀಡುತ್ತೇವೆಂದು ಹೇಳಿದ್ರೂ ಅಧಿಕಾರಿಗಳು ಒಪ್ಪದೆ ಅಡಿಕೆ ಮರಗಳನ್ನು ಕತ್ತರಿಸಿದ್ದಾರೆ. ಖಾಲಿ ಜಾಗ ನೀಡುತ್ತೇವೆಂದು ತಹಶೀಲ್ದಾರ್ ಗೆ ಹೇಳಿದ್ದರೂ ಕೂಡ ಮಾತು ಕೇಳದ ಪಂಚಾಯಿತಿ ಸದಸ್ಯರು ಮರ ಕಡಿದಿದ್ದಾರೆ ಎಂದು ರೈತ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾತ್ರಿ ಮಲಗಿದ ನಂತರ ಈ ಲಕ್ಷಣಗಳು ಕಾಣಿಸಿಕೊಂಡರೆ ಮಧುಮೇಹ ಇದ್ದಂತೆ..!

ಸುದ್ದಿಒನ್ : ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹವೂ ಒಂದು. ಈ ಸಮಸ್ಯೆ ಬಂದರೆ ಸಾಕು ಇನ್ನುಳಿದ ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ಬರುತ್ತಲೇ ಇರುತ್ತವೆ. ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾದರೆ ಮಧುಮೇಹ ಇರುವವರಿಗೆ ಆರೋಗ್ಯದ ಸಮಸ್ಯೆ

ಈ ರಾಶಿಯವರು ಪರಸ್ಪರ ಇಷ್ಟಪಟ್ಟವರ ಜೊತೆ ವಿರೋಧದ ನಡೆವೆನು ಮದುವೆ ಸಂಭವ

ಈ ರಾಶಿಯವರು ಪರಸ್ಪರ ಇಷ್ಟಪಟ್ಟವರ ಜೊತೆ ವಿರೋಧದ ನಡೆವೆನು ಮದುವೆ ಸಂಭವ. ಈ ರಾಶಿಗಳಿಗೆ ಆಕಸ್ಮಿಕ ಧನ ಆಗಮನದಿಂದ ತುಂಬಾ ಖುಷಿ.   ಶನಿವಾರ ರಾಶಿ ಭವಿಷ್ಯ -ಮೇ-11,2024 ಸೂರ್ಯೋದಯ: 05:49, ಸೂರ್ಯಾಸ್ತ :

ಚಿತ್ರದುರ್ಗದಲ್ಲಿ ಸುರಿಯುತ್ತಿರುವ ಮಳೆ : ತಂಪಾದ ಇಳೆ

  ಸುದ್ದಿಒನ್, ಚಿತ್ರದುರ್ಗ, ಮೇ.10 : ಮಳೆಗಾಗಿ ಕಾದಿದ್ದ ಕೋಟೆ ನಾಡಿನ ಜನತೆಗೆ ಮಳೆರಾಯ ಕೃಪೆ ತೋರಿದ್ದಾನೆ. ಬುಧವಾರ ಸ್ವಲ್ಪ ಮಳೆ ಬಂದಿತ್ತು. ಆದರೆ ಇಂದು (ಶುಕ್ರವಾರ) ರಾತ್ರಿ 10 ಗಂಟೆ ಸುಮಾರಿಗೆ ಮಳೆ

error: Content is protected !!