ಅಧಿಕಾರಿಗಳ ಜೊತೆ ಮೇಯರ್ ಸಿಟಿ ರೌಂಡ್ಸ್ :  ಕಾಮಗಾರಿಗಳ ಪರಿಶೀಲನೆ

1 Min Read

 

ದಾವಣಗೆರೆ, (ನ.06) : ಮಹಾನಗರ ಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್ ರವರು ಅಧಿಕಾರಿಗಳ ಜೊತೆ ನಗರದ ವಿವಿಧ ಪ್ರದೇಶಗಳಿಗೆ ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದರು.

ನಗರದ ವಿಜಯಲಕ್ಷ್ಮಿ ರೋಡ್, ಕಾಯಿಪೇಟೆ,ದೊಡ್ಡ ಪೇಟೆ, ಸಿಟಿ ರೌಂಡ್ಸ ಹಾಕಿದರು. ವಿಜಯಲಕ್ಷ್ಮಿ ರಸ್ತೆಯಲ್ಲಿ ನಡೆಯುತ್ತಿರುವ ರಾಜ ಕಾಲುವೆ
ಕಾಮಗಾರಿಯನ್ನು ವೀಕ್ಷಿಸಿ,  ಸ್ಮಾರ್ಟ್ ಸಿಟಿ ಇಂಜಿನಿಯರ್ ಗೆ ಕರೆ ಮಾಡಿ ಅಗತ್ಯ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೊಡ್ಡ ಪೇಟೆ ವಿರಕ್ತ ಮಠದ ಎದುರು ಬೀದಿ ದೀಪದಲ್ಲಿ ಕಂಬ ಇಲ್ಲದಿರುವವದನ್ನು ಕಂಡು ವಿವರಣೆ ಪಡೆದು ಕಂಬವನ್ನು ಅಳವಡಿಸಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್,ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್ ಮಹಾನಗರಪಾಲಿಕೆ ಎಸ್.ಸಿ. ಉದಯಕುಮಾರ್,ಪಾಲಿಕೆ ಅಧಿಕಾರಿಗಳಾದ ಕಿರಣ ಕುಮಾರ್ ಯುಸೋಪ್,ಸುನಿಲ್, ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *