Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸ್ಪರ್ಧೆಗೆ ಮಂಡ್ಯ ಮುಖಂಡರ ಒತ್ತಾಯವಿದೆ.. ಶೀಘ್ರವೇ ಎಲ್ಲದಕ್ಕೂ ತೆರೆ ಬೀಳಲಿದೆ : ನಿಖಿಲ್ ಕುಮಾರಸ್ವಾಮಿ

Facebook
Twitter
Telegram
WhatsApp

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯ ರಣಕಣದಲ್ಲಿ ಮಂಡ್ಯ ಕ್ಷೇತ್ರವೇ ಹೆಚ್ಚು ಬಿಸಿಯಾಗಿದೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಗೆ ಮಂಡ್ಯ ಕ್ಷೇತ್ರ ಸಿಗಲಿರುವ ಭರವಸೆ ಇದೆ. ಇದರ ನಡುವೆ ಇತ್ತಿಚೆಗೆ ಸುಮಲತಾ ಹೈಕಮಾಂಡ್ ಮಟ್ಟದಲ್ಲಿಯೇ ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಜೆಡಿಎಸ್ ನಾಯಕರು ಅಲರ್ಟ್ ಆಗಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯೂ ನಿಖಿಲ್ ಕುಮಾರಸ್ವಾಮಿ ಅವರನ್ನೇ ನಿಲ್ಲಿಸಿ ಎಂಬ ಒತ್ತಡಗಳು ಕೇಳಿ ಬರುತ್ತಿವೆ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದು, ಹಿಂದೆಯೂ ಹೇಳಿದ್ದೆ. ನಾನು ಮಂಡ್ಯ ಕ್ಷೇತ್ರದ ಆಕಾಂಕ್ಷಿಯಲ್ಲ. ನಾನು ಯೂಟರ್ನ್ ಹೊಡೆಯುವ ಗಿರಾಕಿಯೂ ಅಲ್ಲ. 2019ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದೆ, ಸೋತಿದ್ದೆ. ಈಗಲೂ ಸಹಜವಾಗಿ ನನ್ನ ಸ್ಪರ್ಧೆಗೆ ಮಂಡ್ಯ ಮುಖಂಡರ ಒತ್ತಾಯವಿದೆ.

ಮಂಡ್ಯದ ಅಭ್ಯರ್ಥಿ ಬಗ್ಗೆ ಶೀಘ್ರದಲ್ಲಿಯೇ ನಮ್ಮ ಪಕ್ಷದ ವರಿಷ್ಠರು ಎಲ್ಲಾ ಗೊಂದಲಗಳಿಗೂ ತೆರೆ ಎಳೆಯಲಿದ್ದಾರೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ. ತಾಳ್ಮೆಯಿಂದ ಕಾಯಬೇಕು ಅಷ್ಟೆ. ಮಂಡ್ಯದ ವಿಚಾರದಲ್ಲಿ ನನಗೆ ಸ್ಪಷ್ಟನೆ ಇದೆ. ಮಂಡ್ಯಗೆ ನೀವೂ ಬರಬೇಕು, ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಂಡ್ಯ ಮುಖಂಡರು ಕರೆದಿದ್ದರು. ಕಾರ್ಯಕರ್ತರು ಕರೆದಿದ್ದರು. ಈ ಒತ್ತಡದ ಭಾಗವಾಗಿ ನಾನು ಓಡಾಡಿದ್ದೆ. ನನ್ನ ಗಮನ 28 ಕ್ಷೇತ್ರಗಳ ಕಡೆಯೂ ಇರುತ್ತದೆ. ಮೈತ್ರಿ ಅಭ್ಯರ್ಥಿಗಳ ಪರವಾಗಿ ಓಡಾಡುತ್ತೇನೆ. ಮತ್ತೆ ಮೋದಿಯವರೇ ಪ್ರಧಾನಿಯಾಗಬೇಕೆಂಬುದು ಆಶಯ ಎಂದು ಹೇಳಿದ್ದಾರೆ. ಈ ಮೂಲಕ ಮಂಡ್ಯದಲ್ಲಿ ನಿಲ್ಲಲ್ಲ ಎಂಬುದನ್ನು ಹೇಳಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾಜ್ಯದಲ್ಲಿ ಮುಂದಿನ 6 ದಿನ ಧಾರಾಕಾರ ಮಳೆ : ಹವಮಾನ ಇಲಾಖೆ ಮುನ್ಸೂಚನೆ

    ಬೆಂಗಳೂರು: ರಾಜ್ಯದಾದ್ಯಂತ ಈಗಾಗಲೇ ಮಳೆ ಶಯರುವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಜೋರು ಮಳೆ ಬರುತ್ತಿದೆ. ಮುಂದಿನ 6 ದಿನಗಳ ಕಾಲ ಜೋರು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಲವು

ವೀರಶೈವ ಸಮಾಜದಿಂದ ಅದ್ದೂರಿಯಾಗಿ ಜರುಗಿದ ಬಸವಜಯಂತಿ ಮೆರವಣಿಗೆ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ.11 : ಹನ್ನೆರಡನೇ ಶತಮಾನದ ಭಕ್ತಿ ಭಂಡಾರಿ, ಕ್ರಾಂತಿಕಾರಿ, ಮಹಾನ್ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ವೀರಶೈವ

ಕೊಡಗಿನಲ್ಲಿ ಬಾಲಕಿಯನ್ನು ಕೊಂದವ ಸತ್ತಿಲ್ಲ ಬದುಕಿದ್ದಾನೆ : ಪೊಲೀಸರ ಅತಿಥಿಯಾದ ಪ್ರಕಾಶ್..!

ಕೊಡಗಿನ ಸೂರ್ಲಬಿಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೀನಾರನ್ನ ಪ್ರಕಾಶ್ ಎಂಬಾತ ರುಂಡ, ಮುಂಡ ಕತ್ತರಿಸಿ ಕ್ರೂರವಾಗಿ ಹತ್ಯೆ ಮಾಡಿದ್ದ. ನಿನ್ನೆಯೇ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. ಆದರೆ ಇದೀಗ ಆತ ಸತ್ತಿಲ್ಲ ಬದುಕಿದ್ದಾನೆ ಎಂಬುದು ತಿಳಿದು

error: Content is protected !!