ಮಂಡ್ಯದ ಸಮೀಕ್ಷೆಯಲ್ಲಿ ಜೆಡಿಎಸ್ ಗೆ ಒಲವು : ಮತ್ತೆ ಅದೃಷ್ಟ ಪರೀಕ್ಷೆ ಮಾಡಿಕೊಳ್ತಾರಾ ನಿಖಿಲ್..?

suddionenews
1 Min Read

ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯಕ್ಕೋಸ್ಕರ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ಆದರೆ ನಿಖಿಲ್ ಕುಮಾರಸ್ವಾಮಿ ಅವರು ಸೋಲನ್ನೇ ಕಂಡಿದ್ದಾರೆ. ಹೀಗಾಗಿ ಸ್ವಲ್ಪ ವರ್ಷಗಳ ಕಾಲ ಸಿನಿಮಾದತ್ತ ಗಮನಹರಿಸುವುದಾಗಿ ಅವರ ತಂದೆ ಕುಮಾರಸ್ವಾಮಿ ಅವರು ಹೇಳಿದ್ದರು. ಈ ಬಾರಿಯ ಲೋಕಸಭೆ ನಿಲ್ಲುತ್ತಾರಾ ಎಂಬ ಪ್ರಶ್ನೆಗೂ, ಇಲ್ಲ ಸಿನಿಮಾ ಮಾತ್ರ. ಆದರೆ ಬೆಂಬಲ ನೀಡುತ್ತೀನಿ. ಪಕ್ಷದ ಕೆಲಸದಲ್ಲಿ ತೊಡಗಿಕೊಳ್ತೀನಿ ಅಂತ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಹೇಳಿದ್ದರು.

ಈ ಬಾರಿಯ ಲೋಕಸಭಾ ಚುನಾವಣೆಗೆ ಜೆಡಿಎಸ್, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಮಂಡ್ಯವನ್ನು ಜೆಡಿಎಸ್ ಪಡೆಯುವ ಎಲ್ಲಾ ಸಾಧ್ಯತೆ ಇದೆ. ಈಗಾಗಲೇ ಮಂಡ್ಯದಲ್ಲಿ ಯಾರ ಪರವಾದ ಅಲೆ ಇದೆ ಎಂಬುದನ್ನು ಸರ್ವೆ ಮಾಡಿಸಲಾಗಿದೆ. ಆ ಸರ್ವೆಯಲ್ಲಿ ಜೆಡಿಎಸ್ ಪರವೇ ಬಂದಿದೆ. ಹೀಗಾಗಿ ಮತ್ತೊಮ್ಮೆ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕಣಕ್ಕೆ ಇಳಿಸುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.

ಇನ್ನು ಹಾಸನ ಲೋಕಸಭಾ ಕ್ಷೇತ್ರಕ್ಕೆ ಈಗಾಗಲೇ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರನ್ನೇ ಘೋಷಣೆ ಮಾಡಲಾಗಿದೆ. ಅಲ್ಲಿಯೂ ವಿರೋಧದ ಅಲೆ ಎದ್ದಾಗ ಅಲ್ಲಿಯೂ ಸರ್ವೇ ನಡೆಸಲಾಗಿತ್ತು. ಅಲ್ಲಿಯೂ ಪ್ರಜ್ವಲ್ ರೇವಣ್ಣ ಪರವಾಗಿ ಜನಮತ ಬಂದಿದೆ. ಈಗ ಮಂಡ್ಯದಿಂದ ನಿಖಿಲ್ ಅವರನ್ನೇ ಕಣಕ್ಕೆ ಇಳಿಸಿ ಎಂದು ಕಾರ್ಯಕರ್ತರು ಕೂಡ ಒತ್ತಾಯ ಮಾಡುತ್ತಿದ್ದಾರೆ. ಜನರ ಒಲವು ಜೆಡಿಎಸ್ ಕಡೆ ಇರುವ ಕಾರಣ ಯೋಚಿಸಬಹುದು. ಇನ್ನು ಹಳೇ ಮೈಸೂರು ಭಾಗವನ್ನು ಈ ಬಾರಿ ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಕ್ಕೂ ಪ್ರಯತ್ನ ಪಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *