Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಾ.ಮಂಜುನಾಥ್ ನಿವೃತ್ತಿ ಬಗ್ಗೆ ಕುಮಾರಸ್ವಾಮಿ ಬೇಸರ : ರಾಜಕೀಯಕ್ಕೆ ಬರ್ತಾರ ಫೇಮಸ್ ಹೃದ್ರೋಗ ತಜ್ಞ

---Advertisement---

ಬೆಂಗಳೂರು: ಜಯದೇವ ಆಸ್ಪತ್ರೆಯಲ್ಲಿ ನಿರ್ದೇಶಕರಾಗಿದ್ದ ಡಾ. ಮಂಜುನಾಥ್ ಸೇವಾ ಅವಧಿ ಮುಕ್ತಾಯವಾಗಿದೆ‌. ಈಗಾಗಲೇ ಆ ಸ್ಥಾನಕ್ಕೆ ಸರ್ಕಾರ ಬೇರೆಯವರನ್ನು ನೇಮಕ ಮಾಡಿದೆ. ಈ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ಹೊರ ಹಾಕಿದ್ದಾರೆ. ಸರ್ಕಾರದ ಜಾತಿ ರಾಜಕಾರಣದಿಂದಾಗಿ ಡಾ. ಮಂಜುನಾಥ್ ಅವರು ನಿವೃತ್ತಿಯಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಅವರು ಸುದೀರ್ಘವಾಗಿ ಕೆಲಸ ಮಾಡಿರುವುದು ಹಾಗೂ ಆಸ್ಪತ್ರೆಯನ್ನು ಆ ಮಟ್ಟಿಗೆ ಅಭಿವೃದ್ಧಿ ಮಾಡಿರುವುದು ನಮ್ಮ ದೇಶದ ಇತಿಹಾಸದಲ್ಲಿ ದಾಖಲೆಯಾಗಿದೆ. ಅವರು ಬಡವರಿಗೆ ಕೊಟ್ಟಂತ ಚಿಕಿತ್ಸೆಯಿಂದ ಜನ ಮಾತನಾಡುತ್ತಾರೆ. ಸರ್ಕಾರ ಅವರ ಸ್ಥಾನಕ್ಕೆ ಪ್ರಭಾರ ನಿರ್ದೇಶಕರನ್ನು ನೇಮಕ ಮಾಡಿದೆ. ಅವೆ ವಯಸ್ಸು 69 ಆಗಿದೆ. ಅದೇ ಆಸ್ಪತ್ರೆಯಲ್ಲಿ ವೈಸ್ ಚಾನ್ಸಲರ್ ಆಗಿದ್ದವರನ್ನೇ ನೇಮಕ ಮಾಡಿದ್ದಾರೆ. ಯಾಕೆ ಡಾ. ಮಂಜುನಾಥ್ ಅವರ ಆರೋಗ್ಯ ಸರಿ ಇಲ್ವಾ..? 66ರ ಆಸುಪಾಸಿನಲ್ಲಿರುವವರನ್ನೇ ಅಲ್ಲಿ ಮುಂದುವರೆಸಬಹುದಿತ್ತು. ಇದರಲ್ಲಿ ಅಸೂಯೆ ಅನ್ನುವುದು ಇದೆಯಲ್ಲ. ಜಾತಿ ರಾಜಕಾರಣ ಮಾಡಿ ಮಂಜುನಾಥ್ ಅವರನ್ನು ತೆಗೆದಿದ್ದಾರೆ ಎಂದಿದ್ದಾರೆ.

ಇನ್ನು ಡಾ. ಮಂಜುನಾಥ್ ಅವರು ಚುನಾವಣೆಗೆ ಸ್ಪರ್ಧಿಸುತ್ತಾರಾ ಎಂಬ ಮಾತಿಗೆ, ಲೋಕಸಭಾ ಚುನಾವಣೆಗೆ ಅವರ ಸ್ಪರ್ಧೆ ಬಗ್ಗೆ ಚರ್ಚೆ ನಡೀತಾ ಇದೆ. ನಮ್ಮ ಮಿತ್ರ ಪಕ್ಷ ಬಿಜೆಪಿಯವರಿಂದಾನೂ ಸಲಹೆ ಇದೆ. ನಿಮ್ಮ ಪಕ್ಷದಿಂದ ಬೇಡ, ನಮ್ಮ ಪಕ್ಷದಿಂದಾನೇ ಅವರನ್ನು ನಿಲ್ಲಿಸುತ್ತೇವೆ ಎಂದುದ್ದಾರೆ. ಅವರು ಚುನಾವಣೆಗೆ ಸ್ಪರ್ಧೆ ಮಾಡುವುದಕ್ಕೆ ಒಪ್ಪಿಗೆ ನೀಡಿದರೆ, ಅವರು ಮಾಡಿರುವ ಸಮಾಜ ಸೇವೆಗಳನ್ನು ಗಮನಿಸದಾಗ ಸಾಮಾನ್ಯ ಪ್ರಜೆಯಾಗಿಯೇ ನಾನು ಬಹಳ ಸಂತೋಷ ಪಡುತ್ತೀನಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment