Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಾಣ ಪ್ರತಿಷ್ಠೆಗೆ ಅಷ್ಟು ಶಕ್ತಿ ಇದೆಯಾ..? ಅಯೋಧ್ಯೆ ಬಾಲರಾಮನೇ ಇದಕ್ಕೆ ಸಾಕ್ಷಿ ?

---Advertisement---

ಸುದ್ದಿಒನ್ :  ಕಳೆದ ಕೆಲವು ದಿನಗಳಿಂದ ದೇಶದ ಎಲ್ಲೆಡೆ ಅಯೋಧ್ಯೆ ರಾಮಮಂದಿರದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ರಾಮ ರಾಮ ರಾಮ, ಎಲ್ಲರ ಮನಸಲ್ಲೂ ಎಲ್ಲರ ಬಾಯಲ್ಲೂ ರಾಮ ಸ್ಮರಣೆಯೊಂದೇ ಜಪ. ಇದೇ ತಿಂಗಳ 22ರಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಅಯೋಧ್ಯೆ ರಾಮಮಂದಿರವನ್ನು ಉದ್ಘಾಟಿಸಲಾಯಿತು. 

ಕೋಟಿಗಟ್ಟಲೆ ಜನರು ಈ ಕಾರ್ಯಕ್ರಮವನ್ನು ಟಿವಿ ಮತ್ತು ಫೋನ್‌ಗಳ ಮೂಲಕ ಬಹಳ ವಿಜೃಂಭಣೆಯಿಂದ ವೀಕ್ಷಿಸಿದರು. ಪ್ರಾಣ ಪ್ರತಿಷ್ಠೆಯ ನಂತರ ಬಲರಾಮನ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ.

ಹಿಂದೂ ಸಂಪ್ರದಾಯಗಳ ಪ್ರಕಾರ ದೇವಸ್ಥಾನಗಳನ್ನು ಹೊಸದಾಗಿ ನಿರ್ಮಿಸಿದಾಗ, ವಿಗ್ರಹ ಪ್ರಾಣ ಪ್ರತಿಷ್ಠೆ ಬಹಳ ಮುಖ್ಯ. ಪ್ರಾಣ ಪ್ರತಿಷ್ಠೆ ಎಂದರೆ ಪ್ರಾಣಶಕ್ತಿಯನ್ನು ವಿಗ್ರಹದಲ್ಲಿ ಸ್ಥಾಪಿಸುವುದು. ಪ್ರಾಣ ಪ್ರತಿಷ್ಠೆ ಎಂದರೆ ಆ ದೇವರನ್ನು ವಿಗ್ರಹದಲ್ಲಿ ಆವಾಹನೆ ಮಾಡುವುದು. ಈ ಕಾರ್ಯಕ್ರಮದ ಮೂಲಕ ಮೂರ್ತಿ ಪೂಜೆಗೆ ಅರ್ಹವಾಗುತ್ತದೆ.

ವಿಗ್ರಹವನ್ನು ಪವಿತ್ರ ನದಿ ನೀರಿನಿಂದ ಅಭಿಷೇಕ ಮಾಡಿ, ನಂತರ ಶುದ್ಧವಾದ ಬಟ್ಟೆಯಿಂದ ಒರೆಸಲಾಗುತ್ತದೆ ಮತ್ತು ಸಾಂಪ್ರದಾಯಿಕವಾಗಿ ಮಂತ್ರ ಪಠಣದಿಂದ ಅಲಂಕರಿಸಲಾಗುತ್ತದೆ. ಬಳಿಕ ಆ ದೇವರಿಗೆ ಹಾರತಿ ನೀಡಿ ನೈವೇದ್ಯ ಅರ್ಪಿಸುತ್ತಾರೆ. ಅಯೋಧ್ಯೆಯ ಬಾಲ ರಾಮನ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲೂ ಹೀಗೆಯೇ ಮಾಡಲಾಗಿತ್ತು.
ರಾಮನ ಜನನವಾದ ಅಭಿಜಿತ್ ಮುಹೂರ್ತದಲ್ಲಿ ಬಾಲರಾಮನಿಗೆ ಪ್ರಾಣ ಪ್ರತಿಷ್ಠೆ ಮಾಡಲಾಯಿತು.

ಪ್ರಾಣ ಪ್ರತಿಷ್ಠೆಗೆ ಮೊದಲು ಇದ್ದ ರಾಮನ ಮೂರ್ತಿ ಮತ್ತು ಪ್ರಾಣ ಪ್ರತಿಷ್ಠೆಯ ನಂತರ ಅಯೋಧ್ಯೆಯ ಬಾಲ ರಾಮನ ಪ್ರತಿಮೆಯಲ್ಲಿ ಅಜಗಜಾಂತರ ವ್ಯತ್ಯಾಸ ಕಂಡುಬಂದಿದ್ದು, ಪ್ರಾಣ ಪ್ರತಿಷ್ಠೆಯ ನಂತರದ ಬಾಲರಾಮನಲ್ಲಿ ಜೀವಕಳೆ ತುಂಬಿ ತುಳುಕುತ್ತಿರುವ ದೃಶ್ಯಕ್ಕೆ ದೇಶಕ್ಕೆ ದೇಶವೇ ಸಾಕ್ಷಿಯಾಗಿದೆ. ಮತ್ತು ಆ ಜೀವಕಳೆ ಎಲ್ಲರ ಗಮನಕ್ಕೂ ಬಂದಿದ್ದು, ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

https://twitter.com/sanchit_gs/status/1750235543219397066?t=1KWxhwV3oBotuQj_80NKdA&s=19

ಇದನ್ನು ಸ್ವತಃ ಮೂರ್ತಿಯ ಶಿಲ್ಪಿ ಅರುಣ್ ಯೋಗಿ ರಾಜ್ ಹೇಳಿದ್ದಾರೆ. ನಾನೇ ತಿಂಗಳಾನುಗಟ್ಟಲೆ ಕೆತ್ತಿದ ಪ್ರತಿಮೆಯೇ ಆಗಿದ್ದರೂ ಪ್ರಾಣಪ್ರತಿಷ್ಠೆಯ ನಂತರ ರಾಮನ ಮೂರ್ತಿಯಲ್ಲಿ ಬಾರೀ ಬದಲಾವಣೆ ಕಂಡಿದ್ದೇನೆ. ವಿಗ್ರಹವನ್ನು ಕೆತ್ತುವಾಗ ಕಂಡ ವಿಗ್ರಹಕ್ಕೂ ನಂತರ ಅಯೋಧ್ಯೆಗೆ ಬಂದು ರಾಮನ ದರ್ಶನ ಮಾಡಿ ಗರ್ಭಗುಡಿಯಲ್ಲಿದ್ದ ವಿಗ್ರಹವನ್ನು ಕಂಡು ಅಚ್ಚರಿಯಾಗಿದ್ದೇನೆ. ಬಾಲರಾಮನ ಮುಖದಲ್ಲಿ ನಗುವಿನ ಜತೆಗೆ ಮುಖದ ಹಾವಭಾವ ಬದಲಾಗಿದೆ ಎಂದರು.

ಅರುಣ್ ಯೋಗಿ ರಾಜ್ ಅವರು ತಮ್ಮ ಕುಟುಂಬದವರಿಂದ ಏಳು ತಿಂಗಳಿಗಿಂತಲೂ ಹೆಚ್ಚು ದೂರವಿದ್ದು ಅತ್ಯಂತ ಶ್ರದ್ದೆ ಮತ್ತು ಭಕ್ತಿಯಿಂದ ಬಾಲ ರಾಮನ ವಿಗ್ರಹವನ್ನು ಕೆತ್ತಿದ್ದರು. ಆ ವಿಗ್ರಹವನ್ನು ಅವರಿಗಿಂತ ಹೆಚ್ಚು ಸೂಕ್ಷ್ಮವಾಗಿ ಮತ್ತು ಹತ್ತಿರವಾಗಿ ಯಾರೂ ಗಮನಿಸಿರಲಿಲ್ಲ.
ಅಂತಹ ವ್ಯಕ್ತಿಯೇ ರಾಮನ ಮೂರ್ತಿಯಲ್ಲಿ  ಬದಲಾವಣೆ ಆಗಿದೆ ಎಂದು ಹೇಳಿರುವುದು ಗಮನಾರ್ಹ. ಪ್ರಾಣ ಪ್ರತಿಷ್ಠೆಯ ನಂತರ ರಾಮನ ವಿಗ್ರಹವು ಹೆಚ್ಚು ಕಳೆಯಿಂದ ಕಾಣುತ್ತಿದೆ ಎಂದು ಭಕ್ತರೇ ಹೇಳುತ್ತಿದ್ದಾರೆ.

ಪ್ರಾಣ ಪ್ರತಿಷ್ಠೆಗೂ ಮುನ್ನ ಮೂರ್ತಿಯ ವಾತಾವರಣವೇ ಬೇರೆ. ಪ್ರಾಣಪ್ರತಿಷ್ಠೆಯ ನಂತರ ಗರ್ಭಗುಡಿಯ ವಾತಾವರಣವೇ ಬೇರೆ. ದೀಪದ ಕಾಂತೀಯ ಬೆಳಕಿನ ನಡುವೆ, ಬಂಗಾರದ ಆಭರಣಗಳು, ಬಣ್ಣ ಬಣ್ಣದ ಹೂವಿನ ಮಾಲೆಗಳು, ಆ ಬಾಲ ರಾಮನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಅಯೋಧ್ಯೆಯಲ್ಲಿ ಶ್ರೀರಾಮನನ್ನು ದರ್ಶನ ಮಾಡಿದ ನಂತರ ಭಕ್ತರು ಅಲೌಕಿಕ  ಭಾವನೆ ಅನುಭವಿಸಿದವು ಎಂದು ಭಕ್ತರು ಹೇಳುತ್ತಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment