Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಮನಗರದಲ್ಲಿ ರಾಮೋತ್ಸವ : ಇತಿಹಾಸ ಪುಟಗಲ್ಲಿ ದಾಖಲು : ಕಾಂಗ್ರೆಸ್ ಶಾಸಕ ಹೇಳಿದ್ದೇನು..?

Facebook
Twitter
Telegram
WhatsApp

ರಾಮನಗರ: ರಾಮನಗರದಲ್ಲಿ ರಾಮೋತ್ಸವ ಆಚರಿಸುವುದು ನಿಶ್ಚಿತ. ಇದು ಸಾಮಾನ್ಯ ಮಟ್ಟದ ಕಾರ್ಯಕ್ರಮವಲ್ಲ. ಇತಿಹಾಸ ಪುಟದಲ್ಲಿ ದಾಖಲಾಗಬಹುದಾದಂತ ಉತ್ಸವವಾಗಲಿದೆ ಎಂದು ರಾಮನಗರ ರಾಮೋತ್ಸವದ ಬಗ್ಗೆ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಮಾಹಿತಿ ನೀಡಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಶಾಸಕ ಇಕ್ಬಾಲ್, ರಾಮೋತ್ಸವ ಕಾರ್ಯಕ್ರಮ ಯಾವುದೇ ಕಾರಣಕ್ಕೂ ರಾಜಕೀಯ ಕಾರ್ಯಕ್ರಮವಲ್ಲ. ಈ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮ ಹಾಗೂ ಎಲ್ಲಾ ವರ್ಗಗಳ ಜನ ಭಾಗಿಯಾಗಲಿದ್ದಾರೆ. ಈ ಉತ್ಸವದ ಬಗ್ಗೆ ಸಂಬಂಧಪಟ್ಟವರ ಜೊತೆಗೆ ಈಗಾಗಲೇ ಚರ್ಚೆ ನಡೆಯುತ್ತಿದೆ. ರಾಮನಗರ ರಾಮನ ಪಾದ ಸ್ಪರ್ಶವಾಗಿರುವಂತ ಜಾಗವಾಗಿರುವ ಕಾತಣ, ಇಲ್ಲೊಂದು ಭವ್ಯವಾದ ಮಂದಿರ ಕಟ್ಟಿ, ಪೂಜಿಸಲು ಸಂಸದರಾದ ಡಿಕೆ ಸುರೇಶ್ ಯೋಜನೆಯೊಂದನ್ನು ರೂಪಿಸುತ್ತಾ ಇದ್ದಾರೆ ಎಂದಿದ್ದಾರೆ.

ಇನ್ನು ಈ ವಿಚಾರವಾಗಿ ಬಜೆಟ್ ನಲ್ಲೂ ಅನುದಾನ ಮೀಸಲಿಡುವುದಕ್ಕೆ ಸಂಸದ ಸುರೇಶ್ ಅವರು, ಸರ್ಕಾರ ಬಳಿ ಮನವಿ ಮಾಡಲಿದ್ದಾರಂತೆ. ಈ ಸಂಬಂಧ ಶಾಸಕ ಇಕ್ಬಾಲ್ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಅಯೋಧ್ಯೆಯಲ್ಲಿ ರಾಮನ ಮಂದಿರದೊಳಗೆ ಬಾಲ ರಾಮ ಪ್ರತಿಷ್ಠಾಪನೆಗೊಂಡಿದ್ದಾನೆ. ಈ ಬೆನ್ನಲ್ಲೇ ರಾಮನಗರದಲ್ಲೂ ರಾಮೋತ್ಸವ ಮಾಡಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಇನ್ನು ಕಳೆದ ಕೆಲ ದಿನಗಳಿಂದಾನು ರಾಮನಗರದ ರಾಮನ ಜಪ ಕಾಂಗ್ರೆಸ್ ನಾಯಕರಲ್ಲಿ ಜೋರಾಗಿಯೇ ಇದೆ.

ಅಯೋಧ್ಯೆಯಲ್ಲಿ ನಿನ್ನೆಯಷ್ಟೇ ರಾಮಲಲ್ಲಾ ಮೂರ್ತಿಯ ಉದ್ಘಾಟನೆಯಾಗಿದೆ. ಇಂದು ಕೂಡ ರಾಮನನ್ನು ಕಣ್ತುಂಬಿಕೊಳ್ಳಲು ಅಯೋಧ್ಯೆಯಲ್ಲಿ ಜನಸ್ತೋಮವೇ ನೆರೆದಿದೆ. ದಿನೇ ದಿನೇ ಅಯೋಧ್ಯೆಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಅದರ ಜೊತೆಗೆ ರಾಜ್ಯದಲ್ಲೂ ರಾಮನ ಮಂದಿರ ಉದ್ಘಾಟನೆ, ರಾಮ ಧ್ಯಾನ ಜೋರಾಗಿಯೇ ಆಗುತ್ತಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ : ವಿದ್ಯಾಭ್ಯಾಸ ಶ್ರೀ ಮಠದ ಜವಾಬ್ದಾರಿ : ಮಾದಾರ ಚನ್ನಯ್ಯ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಮೇ. 10 : ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ ಮಾಡಲಾಗಿದೆ.  ಇವರ ವಿದ್ಯಾಭ್ಯಾಸವನ್ನು

ಚಿತ್ರದುರ್ಗ | ಬಸವೇಶ್ವರರ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552   ಸುದ್ದಿಒನ್, ಚಿತ್ರದುರ್ಗ, ಮೇ. 10 : ರಕ್ತದಾನ ಆರೋಗ್ಯಕ್ಕೆ ಪೂರಕ. ಮಾರಕವಲ್ಲ ಎಂದು ಕಲ್ಕೆರೆ ಮಠದ ಬಸವಲಿಂಗಸ್ವಾಮಿ

ಅಕ್ಷಯ ತೃತೀಯದಂದು ರಿಲೀಸ್ ಆಯ್ತು ‘ಡೆವಿಲ್’ ಮೇಕಿಂಗ್ ವಿಡಿಯೋ: ದರ್ಶನ್ ಫ್ಯಾನ್ಸ್ ದಿಲ್ ಖುಷ್

ಹೇಳಿ ಕೇಳಿ ದರ್ಶನ್ ಮಾಸ್ ಹೀರೋ. ಅವರಿಗಿರುವ ಆಲ್ಮೋಸ್ಟ್ ಅಭಿಮಾನಿಗಳು ಮಾಸ್ ಎಲಿಮೆಂಟ್ನೇ ಹೆಚ್ಚು ಇಷ್ಟ ಪಡುತ್ತಾರೆ. ಅವರಿಗೆ ಇಷ್ಟವಾಗುವಂತ ಸಿನಿಮಾ ಡೆವಿಲ್. ಸಿಕ್ಕಾಪಟ್ಟೆ ನಿರೀಕ್ಷೆ‌ ಇದೆ. ಇದೀಗ ರಿಲೀಸ್ ಆಗಿರುವಂತ ಮೇಕಿಂಗ್ ವಿಡಿಯೋ

error: Content is protected !!